ಆರ್ಥಿಕತೆಯನ್ನು ಮರಳಿ ತಹಬದಿಗೆ ತರುವುದೇ ಈಗ ನಮ್ಮ ಮುಂದಿರುವ ಮುಖ್ಯ ಸವಾಲಾಗಿದೆ. ಅನೇಕ ವ್ಯವಹಾರಗಳು ಮುಚ್ಚಲ್ಪಟ್ಟಿವೆ, ಕೈಗಾರಿಕೆಗಳು ಮುಚ್ಚಲ್ಪಟ್ಟಿವೆ. ಹೀಗಾಗಿ ವ್ಯಾಟ್ ಅನ್ನು ಕಡಿಮೆ ಮಾಡುವ ಈ ನಿರ್ಧಾರವು ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಪ್ರಮುಖ ಹೆಜ್ಜೆಯಾಗಿದೆ. ಡೀಸೆಲ್ ಮೇಲಿರುವ ಹೆಚ್ಚಿನ ಬೆಲೆಯಿಂದಾಗಿ ಕಷ್ಟ ಎದುರಿಸುತ್ತಿದ್ದೇವೆ ಎಂದು ವ್ಯಾಪಾರ ಸಂಸ್ಥೆಗಳು ತಿಳಿಸಿದ್ದವು ಎಂದು ಕೇಜ್ರಿವಾಲ್ ಗುರುವಾರ ತಿಳಿಸಿದ್ದಾರೆ.