ಚುನಾವಣಾ ಬಾಂಡ್ಗಳು ಮೋದಿ ನೇತೃತ್ವದ ಸರ್ಕಾರದ ‘ಕಪ್ಪು ಹಣವನ್ನು ಪರಿವರ್ತಿಸುವ ಯೋಜನೆ’ಯಾಗಿದೆ. ಇದು ಅಸಾಂವಿಧಾನಿಕ ಎಂದು ಘೋಷಿಸಿರುವ ಸುಪ್ರೀಂ ಕೋರ್ಟ್ ಇದನ್ನು ರದ್ದುಪಡಿಸಿದ್ದು, ವಿವರ ಸಲ್ಲಿಸುವಂತೆಯೂ ಎಸ್ಬಿಐಗೆ ಸೂಚಿಸಿತ್ತು. ಪ್ರಸಕ್ತ ಲೋಕಸಭೆ ಅವಧಿ ಜೂನ್ 16ಕ್ಕೆ ಮುಗಿಯಲಿದ್ದು, ಆ ಬಳಿಕ ಅಂದರೆ ಲೋಕಸಭೆ ಚುನಾವಣೆ ನಂತರ ಈ ವಿವರ ಬಹಿರಂಗಗೊಳ್ಳಬೇಕು ಎಂದು ಬಿಜೆಪಿ ಬಯಸುತ್ತಿದೆ ಎಂದು ಟೀಕಿಸಿದ್ದಾರೆ.