ಪಶ್ಚಿಮ ಬಂಗಾಳದ ಪುರುಲಿಯದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಚಿಟ್ಫಂಡ್ ಹೆಸರಿನಲ್ಲಿ ಜನರನ್ನು ಲೂಟಿ ಮಾಡಿದವರಿಗೆ ಹೊಡೆಯುವ ಧೈರ್ಯವನ್ನು ಮಮತಾ ತೋರಿಸಿದ್ದರೆ ಆಕೆ ಇಷ್ಟೊಂದು ಹೆದರುತ್ತಿರಲ್ಲಿಲ್ಲ.ಮಮತಾ ದೀದಿ ಮಾ, ಮಾಟಿ, ಮನುಷ್ಯ (ತಾಯಿ,ಮಣ್ಣು, ಮನುಷ್ಯ)ರ ಹೆಸರಿನಲ್ಲಿ ಮತ ಪಡೆದರು.ಆದರೆ ಪಶ್ಚಿಮ ಬಂಗಾಳದ ಈಗಿನ ಸ್ಥಿತಿ ಹೇಗಿದೆ? ಅಮ್ಮ ಇಲ್ಲಿನ ಮಕ್ಕಳ ರಕ್ಷಣೆಯ ಬಗ್ಗೆ ಚಿಂತಿತಳಾಗಿದ್ದಾಳೆ.ಪ್ರಜಾಪ್ರಭುತ್ವವನ್ನು ಪ್ರೀತಿಸುವ ಜನರ ರಕ್ತದಿಂದ ಇಲ್ಲಿನ ಮಣ್ಣು ಕೆಂಪಾಗಿದೆ.ಜನರು ಭಯಭೀತರಾಗಿದ್ದಾರೆ.
ಭಯವಿಲ್ಲದೆ ಬದುಕುವ ಭಾರತವನ್ನು ಗುರುದೇವ್ ರವೀಂದ್ರನಾಥ್ ಬಯಸಿದ್ದರು. ಆದರೆ ಮೊದಲು ಕಾಂಗ್ರೆಸ್ಆನಂತರ ಕಮ್ಯೂನಿಸ್ಟ್ ಪಕ್ಷ ಅವರ ಪಾಠಗಳನ್ನು ಹರಿದು ಹಾಕಿದವು. ಇಲ್ಲಿ ಮತದಾನ ಮಾಡುವುದಕ್ಕಿಂತ ಮೊದಲು ಮತದಾರರು ಎರಡು ಬಾರಿ ಯೋಚಿಸಬೇಕು.ರಾಜಕೀಯ ಕಾರ್ಯಕರ್ತರನ್ನು ಇಲ್ಲಿ ಹತ್ಯೆ ಮಾಡಲಾಗುತ್ತದೆ.