ನಿಗದಿತ ಮಾರ್ಗ ಬದಲಿಸಿ ರೈತರ ಟ್ರಾಕ್ಟರ್ಗಳು ಬೇರೆ ಕಡೆ ತೆರಳಲು ಮುಂದಾದಾಗ ಪೊಲೀಸರು ತಡೆದಿದ್ದು, ಈ ಸಂದರ್ಭ ಘರ್ಷಣೆ ಸಂಭವಿಸಿದೆ. ಕೆಲ ರೈತರು ಪೂರ್ವನಿರ್ಧರಿತ ಮಾರ್ಗದಲ್ಲಿ ತೆರಳಲು ನಿರಾಕರಿಸಿ ದೆಹಲಿಯ ಐಟಿಒ ಕಡೆಗೆ ತಲುಪಿದ್ದರು. ಪೊಲೀಸ್ ಕೇಂದ್ರ ಕಚೇರಿ ಬ್ಯಾರಿಕೇಡ್ ಹಾಕಿದ ಪೊಲೀಸರು, ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸುವ ಮೂಲಕ ತಿಲಕ್ ಬ್ರಿಡ್ಜ್ ಕಡೆಗೆ ತೆರಳದಂತೆ ತಡೆದರು.