<p><strong>ಮುಂಬೈ:</strong> ಮುಂಬೈ-ನಾಗ್ಪುರ ಎಕ್ಸ್ಪ್ರೆಸ್ವೇನ ಅಂತಿಮ 76 ಕಿ.ಮೀ ಮಾರ್ಗವನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಗುರುವಾರ ಉದ್ಘಾಟಿಸಿದರು.</p>.<p>ಈ ಮೂಲಕ ಒಟ್ಟು 701 ಕಿ.ಮೀ ಮಾರ್ಗದ ‘ಸಮೃದ್ಧಿ ಮಹಾಮಾರ್ಗವು’ ಸಂಚಾರಕ್ಕೆ ಮುಕ್ತಗೊಂಡಿದೆ. ಅಂದಾಜು 17ರಿಂದ 18 ಗಂಟೆ ತೆಗೆದುಕೊಳ್ಳುತ್ತಿದ್ದ ಮುಂಬೈ-ನಾಗ್ಪುರ ನಗರಗಳ ನಡುವಿನ ಪ್ರಯಾಣದ ಅವಧಿಯು ಎಕ್ಸ್ಪ್ರೆಸ್ವೇನಿಂದಾಗಿ 8 ಗಂಟೆಗೆ ಇಳಿದಿದೆ. </p>.<p class="title">ಆರು ಪಥಗಳ ಈ ಹೆದ್ದಾರಿಗೆ ‘ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ್’ ಎಂದು ಹೆಸರಿಡಲಾಗಿದೆ. ಶೀಘ್ರದಲ್ಲೇ ಈ ಮಾರ್ಗವನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಮಹಾರಾಷ್ಟ್ರ ರಸ್ತೆ ಸಾರಿಗೆ ನಿಗಮ (ಎಂಎಸ್ಆರ್ಡಿಸಿ) ಹೇಳಿದೆ. </p>.<p class="title">ರಸ್ತೆ ಉದ್ಘಾಟನೆಯ ಬಳಿಕ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಪವಾರ್ ಅವರೊಂದಿಗೆ ಈ ಮಾರ್ಗದಲ್ಲಿ ಕಾರಿನಲ್ಲಿ ಪ್ರಯಾಣಿಸಿದರು. ಇಗಟಾಪುರಿ ಸುರಂಗ ಮಾರ್ಗ ಪರಿಶೀಲಿಸಿದರು. ಏಕನಾಥ ಶಿಂದೆ ಕಾರು ಚಾಲನೆ ಮಾಡಿದರು. ಸುರಂಗ ಮಾರ್ಗ ಪರಿಶೀಲನೆಯೂ ಸೇರಿ ಎಕ್ಸ್ಪ್ರೆಸ್ವೇನಲ್ಲಿ 76 ಕಿ.ಮೀ ಮಾರ್ಗವನ್ನು 45 ನಿಮಿಷದಲ್ಲಿ ಕ್ರಮಿಸಿದರು. </p>.<p class="title">10 ಜಿಲ್ಲೆಗಳ 26 ತಾಲ್ಲೂಕುಗಳ, 392 ಗ್ರಾಮಗಳ ಮೂಲಕ ಸಮೃದ್ಧಿ ಎಕ್ಸ್ಪ್ರೆಸ್ವೇ ಹಾದುಹೋಗಲಿದೆ. ಸಮೃದ್ಧಿ ಮಹಾಮಾರ್ಗದ ಮೊದಲ ಹಂತದ ನಾಗಪುರ–ಶಿರಡಿ ನಡುವಿನ 520 ಕಿ.ಮೀ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ 2022ರಲ್ಲಿ ಚಾಲನೆ ನೀಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಮುಂಬೈ-ನಾಗ್ಪುರ ಎಕ್ಸ್ಪ್ರೆಸ್ವೇನ ಅಂತಿಮ 76 ಕಿ.ಮೀ ಮಾರ್ಗವನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಗುರುವಾರ ಉದ್ಘಾಟಿಸಿದರು.</p>.<p>ಈ ಮೂಲಕ ಒಟ್ಟು 701 ಕಿ.ಮೀ ಮಾರ್ಗದ ‘ಸಮೃದ್ಧಿ ಮಹಾಮಾರ್ಗವು’ ಸಂಚಾರಕ್ಕೆ ಮುಕ್ತಗೊಂಡಿದೆ. ಅಂದಾಜು 17ರಿಂದ 18 ಗಂಟೆ ತೆಗೆದುಕೊಳ್ಳುತ್ತಿದ್ದ ಮುಂಬೈ-ನಾಗ್ಪುರ ನಗರಗಳ ನಡುವಿನ ಪ್ರಯಾಣದ ಅವಧಿಯು ಎಕ್ಸ್ಪ್ರೆಸ್ವೇನಿಂದಾಗಿ 8 ಗಂಟೆಗೆ ಇಳಿದಿದೆ. </p>.<p class="title">ಆರು ಪಥಗಳ ಈ ಹೆದ್ದಾರಿಗೆ ‘ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ್’ ಎಂದು ಹೆಸರಿಡಲಾಗಿದೆ. ಶೀಘ್ರದಲ್ಲೇ ಈ ಮಾರ್ಗವನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಮಹಾರಾಷ್ಟ್ರ ರಸ್ತೆ ಸಾರಿಗೆ ನಿಗಮ (ಎಂಎಸ್ಆರ್ಡಿಸಿ) ಹೇಳಿದೆ. </p>.<p class="title">ರಸ್ತೆ ಉದ್ಘಾಟನೆಯ ಬಳಿಕ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಪವಾರ್ ಅವರೊಂದಿಗೆ ಈ ಮಾರ್ಗದಲ್ಲಿ ಕಾರಿನಲ್ಲಿ ಪ್ರಯಾಣಿಸಿದರು. ಇಗಟಾಪುರಿ ಸುರಂಗ ಮಾರ್ಗ ಪರಿಶೀಲಿಸಿದರು. ಏಕನಾಥ ಶಿಂದೆ ಕಾರು ಚಾಲನೆ ಮಾಡಿದರು. ಸುರಂಗ ಮಾರ್ಗ ಪರಿಶೀಲನೆಯೂ ಸೇರಿ ಎಕ್ಸ್ಪ್ರೆಸ್ವೇನಲ್ಲಿ 76 ಕಿ.ಮೀ ಮಾರ್ಗವನ್ನು 45 ನಿಮಿಷದಲ್ಲಿ ಕ್ರಮಿಸಿದರು. </p>.<p class="title">10 ಜಿಲ್ಲೆಗಳ 26 ತಾಲ್ಲೂಕುಗಳ, 392 ಗ್ರಾಮಗಳ ಮೂಲಕ ಸಮೃದ್ಧಿ ಎಕ್ಸ್ಪ್ರೆಸ್ವೇ ಹಾದುಹೋಗಲಿದೆ. ಸಮೃದ್ಧಿ ಮಹಾಮಾರ್ಗದ ಮೊದಲ ಹಂತದ ನಾಗಪುರ–ಶಿರಡಿ ನಡುವಿನ 520 ಕಿ.ಮೀ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ 2022ರಲ್ಲಿ ಚಾಲನೆ ನೀಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>