<p><strong>ನವದೆಹಲಿ</strong>: ಚುನಾವಣಾ ಬಾಂಡ್ಗಳ ವಿವರ ನೀಡುವಂತೆ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಮಾಡಿರುವ ಮನವಿಗೆ ಪ್ರತಿಯಾಗಿ ಬಗೆಬಗೆಯ ಉತ್ತರಗಳು ಬರುತ್ತಿವೆ. ಕೆಲವು ಸಂದರ್ಭಗಳಲ್ಲಿ ಕೇಳದೆ ಇರುವ ಪ್ರಶ್ನೆಗಳಿಗೂ ಉತ್ತರ ಬರುತ್ತಿದೆ.</p>.<p>ಪಕ್ಷವೊಂದು ತನ್ನ ನೋಂದಣಿ ರದ್ದುಪಡಿಸುವಂತೆ ಕೋರಿದೆ, ಇನ್ನೊಂದು ಪಕ್ಷವು ತನ್ನ ಮುಖ್ಯಸ್ಥ ಪ್ರತಿ ಮೂರು ತಿಂಗಳಿಗೊಮ್ಮೆ ₹500ನ್ನು ಪಕ್ಷದ ನಿಧಿಗೆ ಖುದ್ದಾಗಿ ನೀಡುತ್ತಿದ್ದಾರೆ ಎಂದು ಹೇಳಿದೆ.</p>.<p>ಚುನಾವಣಾ ಬಾಂಡ್ ಮೂಲಕ ಹಣ ಪಡೆದುಕೊಳ್ಳದೆ ಇರುವುದಕ್ಕೆ ಕಾರಣ ಏನು ಎಂಬುದನ್ನು ಕೆಲವು ಪಕ್ಷಗಳು ಆಯೋಗಕ್ಕೆ ತಿಳಿಸಿವೆ. ಇನ್ನು ಕೆಲವು ಪಕ್ಷಗಳು ಮಾಹಿತಿ ನೀಡಲು ತಮ್ಮಿಂದ ಆಗುತ್ತಿಲ್ಲ ಎಂದು ತಿಳಿಸಿವೆ.</p>.<p>ತಾನು ಹೊಸ ಪಕ್ಷ, ಚುನಾವಣೆಯಲ್ಲಿ ತಾನು ಮತ ಗಳಿಸಿಲ್ಲದ ಕಾರಣ ಹಂಚಿಕೊಳ್ಳಲು ತನ್ನಲ್ಲಿ ಯಾವ ವಿವರವೂ ಇಲ್ಲ ಎಂದು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ ಹೇಳಿದೆ. ಸರ್ವಜನ ಲೋಕಶಕ್ತಿ ಪಕ್ಷವು ತಾನು ಇದುವರೆಗೆ ದೇಣಿಗೆ ಸ್ವೀಕರಿಸಿಲ್ಲ ಎಂದು ತಿಳಿಸಿದೆ.</p>.<p>ಹತಾಶೆಯನ್ನು ತೋಡಿಕೊಂಡಿರುವ ಭಾರತ್ ಕಾ ಕಿಸಾನ್ ಮಜ್ದೂರ್ ಪಕ್ಷವು, ತನಗೆ ಉದ್ಯಮಿಗಳಿಂದಾಗಲಿ ಬಂಡವಾಳಶಾಹಿಗಳಿಂದಾಗಲಿ ಬೆಂಬಲ ಇಲ್ಲ ಎಂದು ಹೇಳಿದೆ. ಹೀಗಾಗಿ ಚುನಾವಣಾ ಬಾಂಡ್ ಮೂಲಕ ತನಗೆ ಹಣ ಬಂದಿಲ್ಲ ಎಂದು ತಿಳಿಸಿದೆ.</p>.<p>ತಮಿಳುನಾಡು ಮೂಲದ ತಮಿಳರ್ ದೇಶಿಯ ಮುನ್ನಾಣಿ ಪಕ್ಷವು ತನ್ನ ನಾಯಕರಿಗೆ ಆರೋಗ್ಯ ಸರಿ ಇಲ್ಲದ ಕಾರಣ ನಿಗದಿತ ಅವಧಿಯೊಳಗೆ ಮಾಹಿತಿ ನೀಡಲು ಆಗುತ್ತಿಲ್ಲ ಎಂದು ತಿಳಿಸಿದೆ. ಅಲ್ಲದೆ, 2023ರ ಸೆಪ್ಟೆಂಬರ್ 30ರವರೆಗೆ ತಾನು ಬಾಂಡ್ ಮೂಲಕ ದೇಣಿಗೆ ಪಡೆದಿಲ್ಲ ಎಂಬುದನ್ನೂ ತಿಳಿಸಿದೆ.</p>.<p>ಎಂಎನ್ಕೆ ಪಕ್ಷವು ತನ್ನ ಅಧ್ಯಕ್ಷ ಎಸ್. ಸತ್ಯಮೂರ್ತಿ ಅವರು ಪ್ರತಿ ಮೂರು ತಿಂಗಳಿಗೆ ಒಮ್ಮೆ ₹500ನ್ನು ಪಕ್ಷದ ನಿಧಿಗೆ ನೀಡುತ್ತಾರೆ ಎಂದು ಹೇಳಿದೆ. ಪಕ್ಷದ ವಿಸರ್ಜನೆಗೆ ಈಗಾಗಲೇ ನಿರ್ಣಯ ಕೈಗೊಂಡಿರುವ ಕನ್ನಡನಾಡು ಪಕ್ಷವು ತನಗೆ ನೀಡಿರುವ ಮಾನ್ಯತೆಯನ್ನು ಹಿಂಪಡೆಯಬೇಕು ಎಂದು ಆಯೋಗವನ್ನು ಕೋರಿದೆ.</p>.<p>ಆಸ್ರಾ ಲೋಕಮಂಚ ಪಕ್ಷ, ಭಾರತೀಯ ಸಾರ್ಥಕ ಪಕ್ಷ, ರಾಷ್ಟ್ರೀಯ ಭ್ರಷ್ಟಾಚಾರ ಮುಕ್ತಿ ಪಕ್ಷ ತಾವು ಚುನಾವಣಾ ಬಾಂಡ್ ಮೂಲಕ ದೇಣಿಗೆ ಪಡೆಯುವ ಅರ್ಹತೆ ಹೊಂದಿಲ್ಲ ಎಂಬುದನ್ನು ತಿಳಿಸಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಚುನಾವಣಾ ಬಾಂಡ್ಗಳ ವಿವರ ನೀಡುವಂತೆ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಮಾಡಿರುವ ಮನವಿಗೆ ಪ್ರತಿಯಾಗಿ ಬಗೆಬಗೆಯ ಉತ್ತರಗಳು ಬರುತ್ತಿವೆ. ಕೆಲವು ಸಂದರ್ಭಗಳಲ್ಲಿ ಕೇಳದೆ ಇರುವ ಪ್ರಶ್ನೆಗಳಿಗೂ ಉತ್ತರ ಬರುತ್ತಿದೆ.</p>.<p>ಪಕ್ಷವೊಂದು ತನ್ನ ನೋಂದಣಿ ರದ್ದುಪಡಿಸುವಂತೆ ಕೋರಿದೆ, ಇನ್ನೊಂದು ಪಕ್ಷವು ತನ್ನ ಮುಖ್ಯಸ್ಥ ಪ್ರತಿ ಮೂರು ತಿಂಗಳಿಗೊಮ್ಮೆ ₹500ನ್ನು ಪಕ್ಷದ ನಿಧಿಗೆ ಖುದ್ದಾಗಿ ನೀಡುತ್ತಿದ್ದಾರೆ ಎಂದು ಹೇಳಿದೆ.</p>.<p>ಚುನಾವಣಾ ಬಾಂಡ್ ಮೂಲಕ ಹಣ ಪಡೆದುಕೊಳ್ಳದೆ ಇರುವುದಕ್ಕೆ ಕಾರಣ ಏನು ಎಂಬುದನ್ನು ಕೆಲವು ಪಕ್ಷಗಳು ಆಯೋಗಕ್ಕೆ ತಿಳಿಸಿವೆ. ಇನ್ನು ಕೆಲವು ಪಕ್ಷಗಳು ಮಾಹಿತಿ ನೀಡಲು ತಮ್ಮಿಂದ ಆಗುತ್ತಿಲ್ಲ ಎಂದು ತಿಳಿಸಿವೆ.</p>.<p>ತಾನು ಹೊಸ ಪಕ್ಷ, ಚುನಾವಣೆಯಲ್ಲಿ ತಾನು ಮತ ಗಳಿಸಿಲ್ಲದ ಕಾರಣ ಹಂಚಿಕೊಳ್ಳಲು ತನ್ನಲ್ಲಿ ಯಾವ ವಿವರವೂ ಇಲ್ಲ ಎಂದು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ ಹೇಳಿದೆ. ಸರ್ವಜನ ಲೋಕಶಕ್ತಿ ಪಕ್ಷವು ತಾನು ಇದುವರೆಗೆ ದೇಣಿಗೆ ಸ್ವೀಕರಿಸಿಲ್ಲ ಎಂದು ತಿಳಿಸಿದೆ.</p>.<p>ಹತಾಶೆಯನ್ನು ತೋಡಿಕೊಂಡಿರುವ ಭಾರತ್ ಕಾ ಕಿಸಾನ್ ಮಜ್ದೂರ್ ಪಕ್ಷವು, ತನಗೆ ಉದ್ಯಮಿಗಳಿಂದಾಗಲಿ ಬಂಡವಾಳಶಾಹಿಗಳಿಂದಾಗಲಿ ಬೆಂಬಲ ಇಲ್ಲ ಎಂದು ಹೇಳಿದೆ. ಹೀಗಾಗಿ ಚುನಾವಣಾ ಬಾಂಡ್ ಮೂಲಕ ತನಗೆ ಹಣ ಬಂದಿಲ್ಲ ಎಂದು ತಿಳಿಸಿದೆ.</p>.<p>ತಮಿಳುನಾಡು ಮೂಲದ ತಮಿಳರ್ ದೇಶಿಯ ಮುನ್ನಾಣಿ ಪಕ್ಷವು ತನ್ನ ನಾಯಕರಿಗೆ ಆರೋಗ್ಯ ಸರಿ ಇಲ್ಲದ ಕಾರಣ ನಿಗದಿತ ಅವಧಿಯೊಳಗೆ ಮಾಹಿತಿ ನೀಡಲು ಆಗುತ್ತಿಲ್ಲ ಎಂದು ತಿಳಿಸಿದೆ. ಅಲ್ಲದೆ, 2023ರ ಸೆಪ್ಟೆಂಬರ್ 30ರವರೆಗೆ ತಾನು ಬಾಂಡ್ ಮೂಲಕ ದೇಣಿಗೆ ಪಡೆದಿಲ್ಲ ಎಂಬುದನ್ನೂ ತಿಳಿಸಿದೆ.</p>.<p>ಎಂಎನ್ಕೆ ಪಕ್ಷವು ತನ್ನ ಅಧ್ಯಕ್ಷ ಎಸ್. ಸತ್ಯಮೂರ್ತಿ ಅವರು ಪ್ರತಿ ಮೂರು ತಿಂಗಳಿಗೆ ಒಮ್ಮೆ ₹500ನ್ನು ಪಕ್ಷದ ನಿಧಿಗೆ ನೀಡುತ್ತಾರೆ ಎಂದು ಹೇಳಿದೆ. ಪಕ್ಷದ ವಿಸರ್ಜನೆಗೆ ಈಗಾಗಲೇ ನಿರ್ಣಯ ಕೈಗೊಂಡಿರುವ ಕನ್ನಡನಾಡು ಪಕ್ಷವು ತನಗೆ ನೀಡಿರುವ ಮಾನ್ಯತೆಯನ್ನು ಹಿಂಪಡೆಯಬೇಕು ಎಂದು ಆಯೋಗವನ್ನು ಕೋರಿದೆ.</p>.<p>ಆಸ್ರಾ ಲೋಕಮಂಚ ಪಕ್ಷ, ಭಾರತೀಯ ಸಾರ್ಥಕ ಪಕ್ಷ, ರಾಷ್ಟ್ರೀಯ ಭ್ರಷ್ಟಾಚಾರ ಮುಕ್ತಿ ಪಕ್ಷ ತಾವು ಚುನಾವಣಾ ಬಾಂಡ್ ಮೂಲಕ ದೇಣಿಗೆ ಪಡೆಯುವ ಅರ್ಹತೆ ಹೊಂದಿಲ್ಲ ಎಂಬುದನ್ನು ತಿಳಿಸಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>