<p class="title"><strong>ಮುಂಬೈ:</strong> ಸತ್ತ ಸೊಳ್ಳೆಗಳನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಕೊಂಡು ನ್ಯಾಯಾಲಯಕ್ಕೆ ಬಂದ ವಿಚಾರಣಾಧೀನ ಕೈದಿ ಹಾಗೂ ಗ್ಯಾಂಗ್ಸ್ಟರ್ ರೌಡಿ ಎಜಾಜ್ ಲಕಡಾವಾಲಾನನ್ನು ಕಂಡ ಇಡೀ ನ್ಯಾಯಾಲಯವೇ ಒಂದು ಕ್ಷಣ ಅವಾಕ್ಕಾಯಿತು. ನವಿ ಮುಂಬೈತಲೋಜಾ ಜೈಲಿನ ಸ್ಥಿತಿಯನ್ನು ನ್ಯಾಯಾಲಯಕ್ಕೆ ತೋರಿಸಲು ‘ಸಾಕ್ಷ್ಯಾಧಾರ’ಗಳನ್ನು ಆತ ತಂದಿದ್ದ.</p>.<p class="title">ಆದರೆ, ಆತನ ಈ ಪ್ರಯತ್ನ ಫಲಿಸಲಿಲ್ಲ. ತಮ್ಮನ್ನು ಬಂಧಿಯಾಗಿರುಸಿರುವ ಕೋಣೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಆದ್ದರಿಂದ ಸೊಳ್ಳೆಪರದೆಯನ್ನು ಬಳಸಲು ಅನುಮತಿ ನೀಡಬೇಕು ಎಂದು ಕೋರಿ ಲಕಡಾವಾಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಈ ಕಾರಣಕ್ಕಾಗಿ ಅವರು ಸತ್ತ ಸೊಳ್ಳೆಗಳನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ಸೊಳ್ಳೆಗಳನ್ನು ತಂದಿದ್ದ. ಆದರೆ, ನ್ಯಾಯಾಲಯವು ಭದ್ರತಾ ಕಾರಣಗಳನ್ನು ನೀಡಿ ಲಕಡಾವಾಲಾ ಮನವಿಯನ್ನು ಗುರುವಾರ ತಿರಸ್ಕರಿಸಿತು.</p>.<p class="title">ಹಲವು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಲಕಡಾವಾಲಾ, ಭೂಗತಪಾತಕಿ ದಾವುದ್ ಇಬ್ರಾಹಿಂನ ಸಹಚರ. 2020ರ ಜನವರಿಯಲ್ಲಿ ಲಕಡಾವಾಲಾನನ್ನು ಪೊಲೀಸರು ಬಂಧಿಸಿ, ನವಿ ಮುಂಬೈನ ತಲೋಜಾ ಜೈಲಿನಲ್ಲಿ ಇರಿಸಿದ್ದರು. ಅವರ ವಿರುದ್ಧ ಹಲವು ಪ್ರಕರಣಗಳ ತನಿಖೆ ನಡೆಯುತ್ತಿದೆ.</p>.<p>‘ನಾನು 2020ರಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದಾಗ, ಸೊಳ್ಳೆಪರದೆಯನ್ನು ಬಳಸಲು ನನಗೆ ಅನುಮತಿ ನೀಡಲಾಗಿತ್ತು. ಆದರೆ, ಈ ವರ್ಷದ ಮೇ ತಿಂಗಳಿನಲ್ಲಿ, ಭದ್ರತಾ ಕಾರಣ ನೀಡಿ, ಜೈಲು ಅಧಿಕಾರಿಗಳು ನನಗೆ ನೀಡಿದ್ದ ಸೊಳ್ಳೆಪರದೆಯನ್ನು ವಾಪಸ್ ಪಡೆದುಕೊಂಡರು’ ಎಂದು ಲಕಡಾವಾಲಾ ಅರ್ಜಿಯಲ್ಲಿ ತಿಳಿಸಿದ್ದ.</p>.<p>‘ಒಡೊಮಸ್ ಅಥವಾ ಇಂಥ ಸೊಳ್ಳೆ ನಿರೋಧಕಗಳನ್ನು ಬಳಸಿ’ ಎಂದು ನ್ಯಾಯಾಲಯವು ಲಕಡಾವಾಲಾಗೆ ತಿಳಿಸಿತು.</p>.<p class="Briefhead"><strong>ಸೊಳ್ಳೆಪರದೆ: ಹಲವು ಅರ್ಜಿಗಳ ತಿರಸ್ಕಾರ</strong><br />ಗ್ಯಾಂಗ್ಸ್ಟರ್ ಎಜಾಜ್ ಲಕಡಾವಾಲಾನಂತೆ ತಲೋಜಾ ಜೈಲಿನ ಹಲವು ಕೈದಿಗಳು ಸೊಳ್ಳೆಕಾಟದ ಕುರಿತು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕೆಲವರ ಅರ್ಜಿಗಳನ್ನು ನ್ಯಾಯಾಲಯ ಪುರಸ್ಕರಿಸಿದೆ. ಕೆಲವರದ್ದನ್ನು ತಿರಸ್ಕರಿಸಿದೆ.</p>.<p>ಗ್ಯಾಂಗ್ಸ್ಟರ್ ಡಿ.ಕೆ. ರಾವ್ ಸೊಳ್ಳೆಪರದೆ ನೀಡುವಂತೆ ಅರ್ಜಿ ಸಲ್ಲಿಸಿದ್ದ. ಈ ಮನವಿಯನ್ನು ಒಬ್ಬ ನ್ಯಾಯಾಧೀಶರು ಸಮ್ಮತಿಸಿದ್ದರೆ, ಇನ್ನೊಬ್ಬ ನ್ಯಾಯಾಧೀಶರು ತಿರಸ್ಕರಿಸಿದ್ದರು.</p>.<p>ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿಯಾಗಿರುವ ಕೆಲವರಿಗೂ ಸೊಳ್ಳೆಪರದೆ ಬಳಕೆಗೆ ಅನುಮತಿ ನೀಡಲಿಲ್ಲ. ಗೌತಮ್ ನವಲಖಾ ಅವರು ಇದೇ ಸೆಪ್ಟೆಂಬರ್ನಲ್ಲಿ ಸೊಳ್ಳೆಪರದೆ ಬಳಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ಇನ್ನೂ ಬಾಕಿ ಇದೆ.</p>.<p>ಸೊಳ್ಳೆಗಳ ನಿಯಂತ್ರಣಕ್ಕೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜೈಲು ಅಧಿಕಾರಿಗಳಿಗೆ ನ್ಯಾಯಾಲಯವು ನಿರ್ದೇಶನ ನೀಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಮುಂಬೈ:</strong> ಸತ್ತ ಸೊಳ್ಳೆಗಳನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಕೊಂಡು ನ್ಯಾಯಾಲಯಕ್ಕೆ ಬಂದ ವಿಚಾರಣಾಧೀನ ಕೈದಿ ಹಾಗೂ ಗ್ಯಾಂಗ್ಸ್ಟರ್ ರೌಡಿ ಎಜಾಜ್ ಲಕಡಾವಾಲಾನನ್ನು ಕಂಡ ಇಡೀ ನ್ಯಾಯಾಲಯವೇ ಒಂದು ಕ್ಷಣ ಅವಾಕ್ಕಾಯಿತು. ನವಿ ಮುಂಬೈತಲೋಜಾ ಜೈಲಿನ ಸ್ಥಿತಿಯನ್ನು ನ್ಯಾಯಾಲಯಕ್ಕೆ ತೋರಿಸಲು ‘ಸಾಕ್ಷ್ಯಾಧಾರ’ಗಳನ್ನು ಆತ ತಂದಿದ್ದ.</p>.<p class="title">ಆದರೆ, ಆತನ ಈ ಪ್ರಯತ್ನ ಫಲಿಸಲಿಲ್ಲ. ತಮ್ಮನ್ನು ಬಂಧಿಯಾಗಿರುಸಿರುವ ಕೋಣೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಆದ್ದರಿಂದ ಸೊಳ್ಳೆಪರದೆಯನ್ನು ಬಳಸಲು ಅನುಮತಿ ನೀಡಬೇಕು ಎಂದು ಕೋರಿ ಲಕಡಾವಾಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಈ ಕಾರಣಕ್ಕಾಗಿ ಅವರು ಸತ್ತ ಸೊಳ್ಳೆಗಳನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ಸೊಳ್ಳೆಗಳನ್ನು ತಂದಿದ್ದ. ಆದರೆ, ನ್ಯಾಯಾಲಯವು ಭದ್ರತಾ ಕಾರಣಗಳನ್ನು ನೀಡಿ ಲಕಡಾವಾಲಾ ಮನವಿಯನ್ನು ಗುರುವಾರ ತಿರಸ್ಕರಿಸಿತು.</p>.<p class="title">ಹಲವು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಲಕಡಾವಾಲಾ, ಭೂಗತಪಾತಕಿ ದಾವುದ್ ಇಬ್ರಾಹಿಂನ ಸಹಚರ. 2020ರ ಜನವರಿಯಲ್ಲಿ ಲಕಡಾವಾಲಾನನ್ನು ಪೊಲೀಸರು ಬಂಧಿಸಿ, ನವಿ ಮುಂಬೈನ ತಲೋಜಾ ಜೈಲಿನಲ್ಲಿ ಇರಿಸಿದ್ದರು. ಅವರ ವಿರುದ್ಧ ಹಲವು ಪ್ರಕರಣಗಳ ತನಿಖೆ ನಡೆಯುತ್ತಿದೆ.</p>.<p>‘ನಾನು 2020ರಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದಾಗ, ಸೊಳ್ಳೆಪರದೆಯನ್ನು ಬಳಸಲು ನನಗೆ ಅನುಮತಿ ನೀಡಲಾಗಿತ್ತು. ಆದರೆ, ಈ ವರ್ಷದ ಮೇ ತಿಂಗಳಿನಲ್ಲಿ, ಭದ್ರತಾ ಕಾರಣ ನೀಡಿ, ಜೈಲು ಅಧಿಕಾರಿಗಳು ನನಗೆ ನೀಡಿದ್ದ ಸೊಳ್ಳೆಪರದೆಯನ್ನು ವಾಪಸ್ ಪಡೆದುಕೊಂಡರು’ ಎಂದು ಲಕಡಾವಾಲಾ ಅರ್ಜಿಯಲ್ಲಿ ತಿಳಿಸಿದ್ದ.</p>.<p>‘ಒಡೊಮಸ್ ಅಥವಾ ಇಂಥ ಸೊಳ್ಳೆ ನಿರೋಧಕಗಳನ್ನು ಬಳಸಿ’ ಎಂದು ನ್ಯಾಯಾಲಯವು ಲಕಡಾವಾಲಾಗೆ ತಿಳಿಸಿತು.</p>.<p class="Briefhead"><strong>ಸೊಳ್ಳೆಪರದೆ: ಹಲವು ಅರ್ಜಿಗಳ ತಿರಸ್ಕಾರ</strong><br />ಗ್ಯಾಂಗ್ಸ್ಟರ್ ಎಜಾಜ್ ಲಕಡಾವಾಲಾನಂತೆ ತಲೋಜಾ ಜೈಲಿನ ಹಲವು ಕೈದಿಗಳು ಸೊಳ್ಳೆಕಾಟದ ಕುರಿತು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕೆಲವರ ಅರ್ಜಿಗಳನ್ನು ನ್ಯಾಯಾಲಯ ಪುರಸ್ಕರಿಸಿದೆ. ಕೆಲವರದ್ದನ್ನು ತಿರಸ್ಕರಿಸಿದೆ.</p>.<p>ಗ್ಯಾಂಗ್ಸ್ಟರ್ ಡಿ.ಕೆ. ರಾವ್ ಸೊಳ್ಳೆಪರದೆ ನೀಡುವಂತೆ ಅರ್ಜಿ ಸಲ್ಲಿಸಿದ್ದ. ಈ ಮನವಿಯನ್ನು ಒಬ್ಬ ನ್ಯಾಯಾಧೀಶರು ಸಮ್ಮತಿಸಿದ್ದರೆ, ಇನ್ನೊಬ್ಬ ನ್ಯಾಯಾಧೀಶರು ತಿರಸ್ಕರಿಸಿದ್ದರು.</p>.<p>ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿಯಾಗಿರುವ ಕೆಲವರಿಗೂ ಸೊಳ್ಳೆಪರದೆ ಬಳಕೆಗೆ ಅನುಮತಿ ನೀಡಲಿಲ್ಲ. ಗೌತಮ್ ನವಲಖಾ ಅವರು ಇದೇ ಸೆಪ್ಟೆಂಬರ್ನಲ್ಲಿ ಸೊಳ್ಳೆಪರದೆ ಬಳಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ಇನ್ನೂ ಬಾಕಿ ಇದೆ.</p>.<p>ಸೊಳ್ಳೆಗಳ ನಿಯಂತ್ರಣಕ್ಕೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜೈಲು ಅಧಿಕಾರಿಗಳಿಗೆ ನ್ಯಾಯಾಲಯವು ನಿರ್ದೇಶನ ನೀಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>