ವಡೋದರಾ ಮುನ್ಸಿಪಲ್ ಕಾರ್ಪೊರೇಷನ್ ಸ್ಥಾಯಿ ಸಮಿತಿಯ ಮುಖ್ಯಸ್ಥ ಹಿತೇಂದ್ರ ಪಟೇಲ್ ಅವರು ಮಾಂಸಾಹಾರ ಮಾರಾಟದ ಸಂಬಂಧ ಮೌಖಿಕ ಸೂಚನೆ ನೀಡಿದ್ದಾರೆ. 'ಮೀನು, ಮಾಂಸ ಮತ್ತು ಮೊಟ್ಟೆಯಿಂದ ತಯಾರಿಸಿದ ಖಾದ್ಯಗಳನ್ನು ಮಾರಾಟ ಮಾಡುವ ತಿಂಡಿ ಗಾಡಿಗಳು, ಮಳಿಗೆಗಳಲ್ಲಿ ಆಹಾರವನ್ನು ಸ್ವಚ್ಛತೆ ದೃಷ್ಟಿಯಿಂದಾಗಿ ಸೂಕ್ತ ರೀತಿಯಲ್ಲಿ ಮುಚ್ಚಿರಬೇಕು. ಮುಖ್ಯ ರಸ್ತೆಗಳಲ್ಲಿ ಅಂಥ ಗಾಡಿಗಳನ್ನು ತೆಗೆಸಬೇಕು' ಎಂದು ಹಿತೇಂದ್ರ ಸೂಚಿಸಿರುವುದಾಗಿ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿವೆ.