<p><strong>ಗುವಾಹಟಿ (ಅಸ್ಸಾಂ):</strong> ‘ರಾಜ್ಯದ ಪ್ರಮುಖ ಆರು ಸಮುದಾಯಗಳಿಗೆ ಪರಿಶಿಷ್ಟ ಪಂಗಡ (ಎಸ್.ಟಿ) ಸ್ಥಾನಮಾನ ನೀಡುವ ವರದಿ ಅಂಗೀಕರಿಸಲು ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಮೂಲಕ ಎಲ್ಲ ಜನರನ್ನು ತೃಪ್ತಿಪಡಿಸಲಾಗಿದೆ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.</p>.<p>ವರದಿಯು ಅಸ್ಪಷ್ಟವಾಗಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ತಿರಸ್ಕರಿಸಿದ ಅವರು, ಎಲ್ಲ ವಿಚಾರಗಳಿಗೆ ಬೆಂಬಲ ಹಾಗೂ ಅಸಮ್ಮತಿ ಇರುತ್ತದೆ ಎಂದು ಪ್ರತಿಪಾದಿಸಿದ್ದಾರೆ.</p>.<p>ತಾಯಿ ಅಹೋಮ್, ಚುಟಿಯಾ, ಮೋರಾನ್, ಮಟಕ್, ಕೋಚ್ ರಾಜಬೊಂಗ್ಸಿ ಹಾಗೂ ಚಾಯ್ ಬಗಾನ್ ಸಮುದಾಯಗಳಿಗೆ ಎಸ್.ಟಿ ಸ್ಥಾನಮಾನ ನೀಡುವ ಬೇಡಿಕೆ ಕುರಿತು ಸಚಿವರ ತಂಡವು ತಮ್ಮ ವರದಿಯನ್ನು ರಾಜ್ಯ ವಿಧಾನಸಭೆಯಲ್ಲಿ ಶನಿವಾರ ಮಂಡಿಸಿತು. ಈ ಸಮುದಾಯಗಳಿಗೆ ಎಸ್.ಟಿ ಮಾನ್ಯತೆ ಸಿಕ್ಕರೆ, ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ದೊರೆಯಲಿದೆ.</p>.<p>‘ವರದಿ ಬಹಿರಂಗಗೊಂಡಿದ್ದು, ಯಾರೂ ಬೇಕಾದರು ವೀಕ್ಷಿಸಬಹುದು. ಈ ವರದಿಯು ಸಮಾಜದ ಎಲ್ಲ ವರ್ಗದ ಜನರನ್ನು ಸಂತೃಪ್ತಿಪಡಿಸಲಿದೆ’ ಎಂದು ಶರ್ಮಾ ತಿಳಿಸಿದ್ದಾರೆ.</p>.<h2><strong>ವಿದ್ಯಾರ್ಥಿಗಳ ಆಕ್ರೋಶ:</strong> </h2><h2></h2><p>ಸರ್ಕಾರದ ನಿರ್ಧಾರವನ್ನು ಖಂಡಿಸಿ ಬೊಡೊ ಸಮುದಾಯದ ವಿದ್ಯಾರ್ಥಿಗಳು ಶನಿವಾರ ಬೊಡೊಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಬೊಡೊಲ್ಯಾಂಡ್ ಪ್ರಾದೇಶಿಕ ಕಚೇರಿಯ (ಬಿಟಿಸಿ) ಆವರಣಕ್ಕೆ ನುಗ್ಗಿ ಪಿಠೋಪಕರಣಗಳನ್ನು ಮುರಿದು, ಹೂಕುಂಡಗಳನ್ನು ನಾಶಪಡಿಸಿದರು.</p>.<p>ಅಸ್ಸಾಂನ ಪರಿಶಿಷ್ಟ ಪಂಗಡದಲ್ಲಿ ಸದ್ಯ ‘ಬೊಡೊ’ ಅತೀ ದೊಡ್ಡ ಸಮುದಾಯವಾಗಿದ್ದು, ಹೊಸ ಸಮುದಾಯಗಳ ಸೇರ್ಪಡೆಯಿಂದ ಸ್ಪರ್ಧೆ ಹೆಚ್ಚಾಗಿ ಅವಕಾಶ ಕಡಿಮೆಯಾಗಲಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.</p>.<div><blockquote>ರಾಜ್ಯ ಸರ್ಕಾರಕ್ಕೆ ಸಮಸ್ಯೆ ಬಗೆಹರಿಸುವ ಇಚ್ಚೆ ಇಲ್ಲ. ಹೀಗಾಗಿಯೇ ಅಸ್ಪಷ್ಟ ವರದಿಯನ್ನು ಮಂಡಿಸಿ ಉಳಿದ ವಿಚಾರವನ್ನು ಕೇಂದ್ರ ಸರ್ಕಾರಕ್ಕೆ ಬಿಡಲಾಗಿದೆ</blockquote><span class="attribution">ದೇವವ್ರತ ಸೈಕಿಯಾ ವಿಧಾನಸಭೆ ವಿರೋಧ ಪಕ್ಷದ ನಾಯಕ</span></div>.<div><blockquote>ಆರು ಸಮುದಾಯಗಳಿಗೆ ಎಸ್.ಟಿ ಸ್ಥಾನಮಾನ ನೀಡುವ ಯಾವ ಉದ್ದೇಶವೂ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಇಲ್ಲ</blockquote><span class="attribution">ರಫಿಕುಲ್ ಇಸ್ಲಾಂ ಎಐಯುಡಿಎಫ್ ನಾಯಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುವಾಹಟಿ (ಅಸ್ಸಾಂ):</strong> ‘ರಾಜ್ಯದ ಪ್ರಮುಖ ಆರು ಸಮುದಾಯಗಳಿಗೆ ಪರಿಶಿಷ್ಟ ಪಂಗಡ (ಎಸ್.ಟಿ) ಸ್ಥಾನಮಾನ ನೀಡುವ ವರದಿ ಅಂಗೀಕರಿಸಲು ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಮೂಲಕ ಎಲ್ಲ ಜನರನ್ನು ತೃಪ್ತಿಪಡಿಸಲಾಗಿದೆ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.</p>.<p>ವರದಿಯು ಅಸ್ಪಷ್ಟವಾಗಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ತಿರಸ್ಕರಿಸಿದ ಅವರು, ಎಲ್ಲ ವಿಚಾರಗಳಿಗೆ ಬೆಂಬಲ ಹಾಗೂ ಅಸಮ್ಮತಿ ಇರುತ್ತದೆ ಎಂದು ಪ್ರತಿಪಾದಿಸಿದ್ದಾರೆ.</p>.<p>ತಾಯಿ ಅಹೋಮ್, ಚುಟಿಯಾ, ಮೋರಾನ್, ಮಟಕ್, ಕೋಚ್ ರಾಜಬೊಂಗ್ಸಿ ಹಾಗೂ ಚಾಯ್ ಬಗಾನ್ ಸಮುದಾಯಗಳಿಗೆ ಎಸ್.ಟಿ ಸ್ಥಾನಮಾನ ನೀಡುವ ಬೇಡಿಕೆ ಕುರಿತು ಸಚಿವರ ತಂಡವು ತಮ್ಮ ವರದಿಯನ್ನು ರಾಜ್ಯ ವಿಧಾನಸಭೆಯಲ್ಲಿ ಶನಿವಾರ ಮಂಡಿಸಿತು. ಈ ಸಮುದಾಯಗಳಿಗೆ ಎಸ್.ಟಿ ಮಾನ್ಯತೆ ಸಿಕ್ಕರೆ, ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ದೊರೆಯಲಿದೆ.</p>.<p>‘ವರದಿ ಬಹಿರಂಗಗೊಂಡಿದ್ದು, ಯಾರೂ ಬೇಕಾದರು ವೀಕ್ಷಿಸಬಹುದು. ಈ ವರದಿಯು ಸಮಾಜದ ಎಲ್ಲ ವರ್ಗದ ಜನರನ್ನು ಸಂತೃಪ್ತಿಪಡಿಸಲಿದೆ’ ಎಂದು ಶರ್ಮಾ ತಿಳಿಸಿದ್ದಾರೆ.</p>.<h2><strong>ವಿದ್ಯಾರ್ಥಿಗಳ ಆಕ್ರೋಶ:</strong> </h2><h2></h2><p>ಸರ್ಕಾರದ ನಿರ್ಧಾರವನ್ನು ಖಂಡಿಸಿ ಬೊಡೊ ಸಮುದಾಯದ ವಿದ್ಯಾರ್ಥಿಗಳು ಶನಿವಾರ ಬೊಡೊಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಬೊಡೊಲ್ಯಾಂಡ್ ಪ್ರಾದೇಶಿಕ ಕಚೇರಿಯ (ಬಿಟಿಸಿ) ಆವರಣಕ್ಕೆ ನುಗ್ಗಿ ಪಿಠೋಪಕರಣಗಳನ್ನು ಮುರಿದು, ಹೂಕುಂಡಗಳನ್ನು ನಾಶಪಡಿಸಿದರು.</p>.<p>ಅಸ್ಸಾಂನ ಪರಿಶಿಷ್ಟ ಪಂಗಡದಲ್ಲಿ ಸದ್ಯ ‘ಬೊಡೊ’ ಅತೀ ದೊಡ್ಡ ಸಮುದಾಯವಾಗಿದ್ದು, ಹೊಸ ಸಮುದಾಯಗಳ ಸೇರ್ಪಡೆಯಿಂದ ಸ್ಪರ್ಧೆ ಹೆಚ್ಚಾಗಿ ಅವಕಾಶ ಕಡಿಮೆಯಾಗಲಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.</p>.<div><blockquote>ರಾಜ್ಯ ಸರ್ಕಾರಕ್ಕೆ ಸಮಸ್ಯೆ ಬಗೆಹರಿಸುವ ಇಚ್ಚೆ ಇಲ್ಲ. ಹೀಗಾಗಿಯೇ ಅಸ್ಪಷ್ಟ ವರದಿಯನ್ನು ಮಂಡಿಸಿ ಉಳಿದ ವಿಚಾರವನ್ನು ಕೇಂದ್ರ ಸರ್ಕಾರಕ್ಕೆ ಬಿಡಲಾಗಿದೆ</blockquote><span class="attribution">ದೇವವ್ರತ ಸೈಕಿಯಾ ವಿಧಾನಸಭೆ ವಿರೋಧ ಪಕ್ಷದ ನಾಯಕ</span></div>.<div><blockquote>ಆರು ಸಮುದಾಯಗಳಿಗೆ ಎಸ್.ಟಿ ಸ್ಥಾನಮಾನ ನೀಡುವ ಯಾವ ಉದ್ದೇಶವೂ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಇಲ್ಲ</blockquote><span class="attribution">ರಫಿಕುಲ್ ಇಸ್ಲಾಂ ಎಐಯುಡಿಎಫ್ ನಾಯಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>