‘ಕುಟುಂಬ ಸದಸ್ಯರಿಗೆ ತಿಳಿಸದೇ ಮನೆಯಿಂದ ಹೊರಹೋಗಿದ್ದ ಆಯುಷಿ ಕೆಲ ದಿನಗಳ ಕಾಲ ಮನೆಗೆ ಬಂದಿರಲಿಲ್ಲ. ಇದು ಆಕೆಯ ತಂದೆಯ ಸಿಟ್ಟಿಗೆ ಕಾರಣವಾಗಿತ್ತು. ನವೆಂಬರ್ 17ರಂದು ಆಕೆ ಮನೆಗೆ ಬಂದವೇಳೆ ಆಕೆಯನ್ನು ತಂದೆಯೇ ಗುಂಡಿಕ್ಕೆ ಹತ್ಯೆ ಮಾಡಿದ. ಅದೇ ರಾತ್ರಿ ಆಕೆಯ ಮೃತದೇಹವನ್ನು ಟ್ರಾಲಿ ಚೀಲದಲ್ಲಿ ತುಂಬಿ ಯಮುನಾ ಎಕ್ಸ್ಪ್ರೆಸ್ ಹೆದ್ದಾರಿಯ ರಾಯ ಅಡ್ಡದಾರಿಯಲ್ಲಿ ಎಸೆದು ಬಂದ’ ಎಂದು ಆಕೆಯ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.