<p><strong>ಡೆಹರಾಡೂನ್:</strong> ಭಾರತೀಯ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರು ಸೈನಿಕರೊಂದಿಗೆ ಪುಷ್ಅಪ್ ಮಾಡುತ್ತಿರುವ ವಿಡಿಯೊ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. </p><p>ಡಿ.13ರಂದು ಭಾರತೀಯ ಮಿಲಿಟರಿ ಅಕಾಡೆಮಿ(ಐಎಂಎ) ಡೆಹರಾಡೂನ್ನಲ್ಲಿ ತರಬೇತಿ ಮುಗಿಸಿದ 491 ಕೆಡೆಟ್ಗಳು ಭಾರತೀಯ ಸೇನೆಗೆ ಸೇರಿದರು. ಈ ವೇಳೆ ನಡೆದ ಪೆರೇಡ್ ನಂತರ ಸೇನಾ ಮುಖ್ಯಸ್ಥರು ಅವರೊಂದಿಗೆ ಪುಷ್ಅಪ್ ಮಾಡಿದ್ದು, ವಿಡಿಯೊಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. </p>.<p>ಸೇನಾ ಮುಖ್ಯಸ್ಥರು ಪಿಟ್ನೆಸ್ ಕಾಪಾಡಿಕೊಳ್ಳುವ ಮೂಲಕ ತಮ್ಮ ಮುಂದಿನ ತಲೆಮಾರಿನ ಸೇನಾಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. </p><p>ಕಾರ್ಯಕ್ರಮದಲ್ಲಿ ಮಾತನಾಡಿದ ಉಪೇಂದ್ರ ದ್ವಿವೇದಿ ‘ಭಾರತೀಯ ಸೇನೆಯ ಗೌರವವನ್ನು ಎತ್ತಿಹಿಡಿಯಿರಿ. ರಾಷ್ಟ್ರಕ್ಕೆ ನಿಷ್ಠೆ, ಬದ್ಧತೆ ಮತ್ತು ಗೌರವದಿಂದ ಸೇವೆ ಸಲ್ಲಿಸಿ’ ಎಂದು ಕಿವಿಮಾತು ಹೇಳಿದ್ದಾರೆ. </p><p>ಈ ವೇಳೆ ತರಬೇತಿಯಲ್ಲಿ ಉತ್ತಮ ಸಾಧನೆ ಮಾಡಿದ ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ, ನೂತನ ಅಧಿಕಾರಿಗಳ ಮೇಲೆ ಹೆಲಿಕಾಪ್ಟರ್ನಿಂದ ಪುಷ್ಪವೃಷ್ಠಿ ಸುರಿಸಲಾಯಿತು. </p>.ಪಾಕ್ ಪ್ರಧಾನಿಯನ್ನ 40 ನಿಮಿಷ ಕಾಯಿಸಿದ ಪುಟಿನ್:ಹತಾಶೆಯಿಂದ ಸಭೆಗೆ ನುಗ್ಗಿದ ಷರೀಫ್.ಹಳೆಯ ಘಟನೆಗಳ ನೆನಪಿಸಿದ ಸಾಲ್ಟ್ ಲೇಕ್ ಗಲಾಟೆ: ವಿಶ್ವಕಪ್ ವೇಳೆಯೂ ಆಗಿತ್ತು ಗಲಭೆ...<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಡೆಹರಾಡೂನ್:</strong> ಭಾರತೀಯ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರು ಸೈನಿಕರೊಂದಿಗೆ ಪುಷ್ಅಪ್ ಮಾಡುತ್ತಿರುವ ವಿಡಿಯೊ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. </p><p>ಡಿ.13ರಂದು ಭಾರತೀಯ ಮಿಲಿಟರಿ ಅಕಾಡೆಮಿ(ಐಎಂಎ) ಡೆಹರಾಡೂನ್ನಲ್ಲಿ ತರಬೇತಿ ಮುಗಿಸಿದ 491 ಕೆಡೆಟ್ಗಳು ಭಾರತೀಯ ಸೇನೆಗೆ ಸೇರಿದರು. ಈ ವೇಳೆ ನಡೆದ ಪೆರೇಡ್ ನಂತರ ಸೇನಾ ಮುಖ್ಯಸ್ಥರು ಅವರೊಂದಿಗೆ ಪುಷ್ಅಪ್ ಮಾಡಿದ್ದು, ವಿಡಿಯೊಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. </p>.<p>ಸೇನಾ ಮುಖ್ಯಸ್ಥರು ಪಿಟ್ನೆಸ್ ಕಾಪಾಡಿಕೊಳ್ಳುವ ಮೂಲಕ ತಮ್ಮ ಮುಂದಿನ ತಲೆಮಾರಿನ ಸೇನಾಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. </p><p>ಕಾರ್ಯಕ್ರಮದಲ್ಲಿ ಮಾತನಾಡಿದ ಉಪೇಂದ್ರ ದ್ವಿವೇದಿ ‘ಭಾರತೀಯ ಸೇನೆಯ ಗೌರವವನ್ನು ಎತ್ತಿಹಿಡಿಯಿರಿ. ರಾಷ್ಟ್ರಕ್ಕೆ ನಿಷ್ಠೆ, ಬದ್ಧತೆ ಮತ್ತು ಗೌರವದಿಂದ ಸೇವೆ ಸಲ್ಲಿಸಿ’ ಎಂದು ಕಿವಿಮಾತು ಹೇಳಿದ್ದಾರೆ. </p><p>ಈ ವೇಳೆ ತರಬೇತಿಯಲ್ಲಿ ಉತ್ತಮ ಸಾಧನೆ ಮಾಡಿದ ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ, ನೂತನ ಅಧಿಕಾರಿಗಳ ಮೇಲೆ ಹೆಲಿಕಾಪ್ಟರ್ನಿಂದ ಪುಷ್ಪವೃಷ್ಠಿ ಸುರಿಸಲಾಯಿತು. </p>.ಪಾಕ್ ಪ್ರಧಾನಿಯನ್ನ 40 ನಿಮಿಷ ಕಾಯಿಸಿದ ಪುಟಿನ್:ಹತಾಶೆಯಿಂದ ಸಭೆಗೆ ನುಗ್ಗಿದ ಷರೀಫ್.ಹಳೆಯ ಘಟನೆಗಳ ನೆನಪಿಸಿದ ಸಾಲ್ಟ್ ಲೇಕ್ ಗಲಾಟೆ: ವಿಶ್ವಕಪ್ ವೇಳೆಯೂ ಆಗಿತ್ತು ಗಲಭೆ...<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>