<p><strong>ಕೊಚ್ಚಿ:</strong> ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ವೇಳೆ ಇಲ್ಲಿನ ಏಲೂರ್ ಗ್ರಾಮದ ಸಿಪಿಐ (ಎಂ) ಬ್ರಾಂಚ್ ಸಮಿತಿ ರಾಷ್ಟ್ರ ಧ್ವಜಕ್ಕೆ ಬದಲಾಗಿ ಕಾಂಗ್ರೆಸ್ನ ಧ್ವಜ ಹಾರಿಸಿದ ವಿಚಿತ್ರ ಘಟನೆ ನಡೆದಿದೆ.</p>.ತ್ರಿಶ್ಶೂರ್: ಲೋಕಸಭೆ ಚುನಾವಣೆಗೆ ಮುನ್ನ 30ಸಾವಿರ ನಕಲಿ ಮತದಾರರ ಸೇರ್ಪಡೆ; ಸಿಪಿಎಂ.<p>ಪಕ್ಷದ ಹಿರಿಯ ನಾಗರಿಕರ ವೇದಿಕೆಯ ಪದಾಧಿಕಾರಿಯಾಗಿರುವ ವ್ಯಕ್ತಿಯೊಬ್ಬರು ತ್ರಿವರ್ಣ ಧ್ವಜದ ಬಲದಾಗಿ ಕಾಂಗ್ರೆಸ್ ಧ್ವಜವನ್ನು ತಪ್ಪಾಗಿ ಗ್ರಹಿಸಿದ್ದರಿಂದ ಈ ಅಚಾತುರ್ಯ ಸಂಭವಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.</p><p>ಈ ಕಾರ್ಯಕ್ರಮದಲ್ಲಿ ಹಲವು ಮಂದಿ ಭಾಗಿಯಾಗಿದ್ದರು. ಧ್ವಜಾರೋಹಣ ನಡೆಸಿದ ಬಳಿಕವೇ ಪ್ರಮಾದ ಗೊತ್ತಾಗಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.</p><p>‘10 ನಿಮಿಷ ಕಾಂಗ್ರೆಸ್ ಧ್ವಜ ಹಾರಿದೆ. ಗೊತ್ತಾದ ಕೂಡಲೇ ಅದನ್ನು ಇಳಿಸಲಾಗಿದೆ. ಅದಾಗ್ಯೂ ಸಾಮಾಜಿಕ ಜಾಲತಾಣಗಳಲ್ಲಿ ಅದರ ಚಿತ್ರ, ವಿಡಿಯೊ ಹರಿದಾಡಿದೆ.</p>.ಧರ್ಮಸ್ಥಳ ಪ್ರಕರಣ | ತನಿಖೆ ನಡೆಸಿ, ಸತ್ಯ ಹೊರಗೆಡವಲು ಸಿಪಿಎಂ ಒತ್ತಾಯ.<p>ಘಟನೆಯ ಬಗ್ಗೆ ಸಿಪಿಐಎಂ ಜಿಲ್ಲಾ ನಾಯಕರೊಬ್ಬರು ಪರಿಶೀಲನೆ ನಡೆಸಿದ್ದು, ತಪ್ಪಾಗಿದ್ದು ಒಪ್ಪಿಕೊಂಡಿದ್ದಾರೆ.</p><p>‘ತನ್ನ ಬಳಿ ಹಲವು ಪಕ್ಷಗಳ ಧ್ವಜ ಇದ್ದು, ಸ್ವಾತಂತ್ಯೋತ್ಸವದ ದಿನ ಕಾಂಗ್ರೆಸ್ ಬಾವುಟವನ್ನು ರಾಷ್ಟ್ರಧ್ವಜವೆಂದು ತಪ್ಪಾಗಿ ಗ್ರಹಿಸಿದ್ದಾಗಿ ವ್ಯಕ್ತಿ ಹೇಳಿದ್ದಾರೆ. ಅವರ ವಿರುದ್ದ ಶಿಸ್ತು ಕ್ರಮ ಜರುಗಿಸಲು ಪಕ್ಷ ತೀರ್ಮಾನಿಸಿದೆ’ ಎಂದು ನಾಯಕರೊಬ್ಬರು ತಿಳಿಸಿದ್ದಾರೆ.</p> <p><em><strong>( ಈ ಸುದ್ದಿಯಲ್ಲಿ ಬಳಸಿರುವ ಚಿತ್ರವು ಎಐ ಸೃಷ್ಟಿಸಿದ ಕಾಲ್ಪನಿಕ ಚಿತ್ರವಾಗಿದ್ದು, ನೈಜ ಘಟನೆಯನ್ನು ಆಧರಿಸಿದ್ದಲ್ಲ)</strong></em></p> .ಚುನಾವಣೆ ಲಾಭಕ್ಕಾಗಿ BJPಯಿಂದ ‘ಆಪರೇಷನ್ ಸಿಂಧೂರ’ ದುರ್ಬಳಕೆ ಸಾಧ್ಯತೆ: ಸಿಪಿಎಂ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಚ್ಚಿ:</strong> ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ವೇಳೆ ಇಲ್ಲಿನ ಏಲೂರ್ ಗ್ರಾಮದ ಸಿಪಿಐ (ಎಂ) ಬ್ರಾಂಚ್ ಸಮಿತಿ ರಾಷ್ಟ್ರ ಧ್ವಜಕ್ಕೆ ಬದಲಾಗಿ ಕಾಂಗ್ರೆಸ್ನ ಧ್ವಜ ಹಾರಿಸಿದ ವಿಚಿತ್ರ ಘಟನೆ ನಡೆದಿದೆ.</p>.ತ್ರಿಶ್ಶೂರ್: ಲೋಕಸಭೆ ಚುನಾವಣೆಗೆ ಮುನ್ನ 30ಸಾವಿರ ನಕಲಿ ಮತದಾರರ ಸೇರ್ಪಡೆ; ಸಿಪಿಎಂ.<p>ಪಕ್ಷದ ಹಿರಿಯ ನಾಗರಿಕರ ವೇದಿಕೆಯ ಪದಾಧಿಕಾರಿಯಾಗಿರುವ ವ್ಯಕ್ತಿಯೊಬ್ಬರು ತ್ರಿವರ್ಣ ಧ್ವಜದ ಬಲದಾಗಿ ಕಾಂಗ್ರೆಸ್ ಧ್ವಜವನ್ನು ತಪ್ಪಾಗಿ ಗ್ರಹಿಸಿದ್ದರಿಂದ ಈ ಅಚಾತುರ್ಯ ಸಂಭವಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.</p><p>ಈ ಕಾರ್ಯಕ್ರಮದಲ್ಲಿ ಹಲವು ಮಂದಿ ಭಾಗಿಯಾಗಿದ್ದರು. ಧ್ವಜಾರೋಹಣ ನಡೆಸಿದ ಬಳಿಕವೇ ಪ್ರಮಾದ ಗೊತ್ತಾಗಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.</p><p>‘10 ನಿಮಿಷ ಕಾಂಗ್ರೆಸ್ ಧ್ವಜ ಹಾರಿದೆ. ಗೊತ್ತಾದ ಕೂಡಲೇ ಅದನ್ನು ಇಳಿಸಲಾಗಿದೆ. ಅದಾಗ್ಯೂ ಸಾಮಾಜಿಕ ಜಾಲತಾಣಗಳಲ್ಲಿ ಅದರ ಚಿತ್ರ, ವಿಡಿಯೊ ಹರಿದಾಡಿದೆ.</p>.ಧರ್ಮಸ್ಥಳ ಪ್ರಕರಣ | ತನಿಖೆ ನಡೆಸಿ, ಸತ್ಯ ಹೊರಗೆಡವಲು ಸಿಪಿಎಂ ಒತ್ತಾಯ.<p>ಘಟನೆಯ ಬಗ್ಗೆ ಸಿಪಿಐಎಂ ಜಿಲ್ಲಾ ನಾಯಕರೊಬ್ಬರು ಪರಿಶೀಲನೆ ನಡೆಸಿದ್ದು, ತಪ್ಪಾಗಿದ್ದು ಒಪ್ಪಿಕೊಂಡಿದ್ದಾರೆ.</p><p>‘ತನ್ನ ಬಳಿ ಹಲವು ಪಕ್ಷಗಳ ಧ್ವಜ ಇದ್ದು, ಸ್ವಾತಂತ್ಯೋತ್ಸವದ ದಿನ ಕಾಂಗ್ರೆಸ್ ಬಾವುಟವನ್ನು ರಾಷ್ಟ್ರಧ್ವಜವೆಂದು ತಪ್ಪಾಗಿ ಗ್ರಹಿಸಿದ್ದಾಗಿ ವ್ಯಕ್ತಿ ಹೇಳಿದ್ದಾರೆ. ಅವರ ವಿರುದ್ದ ಶಿಸ್ತು ಕ್ರಮ ಜರುಗಿಸಲು ಪಕ್ಷ ತೀರ್ಮಾನಿಸಿದೆ’ ಎಂದು ನಾಯಕರೊಬ್ಬರು ತಿಳಿಸಿದ್ದಾರೆ.</p> <p><em><strong>( ಈ ಸುದ್ದಿಯಲ್ಲಿ ಬಳಸಿರುವ ಚಿತ್ರವು ಎಐ ಸೃಷ್ಟಿಸಿದ ಕಾಲ್ಪನಿಕ ಚಿತ್ರವಾಗಿದ್ದು, ನೈಜ ಘಟನೆಯನ್ನು ಆಧರಿಸಿದ್ದಲ್ಲ)</strong></em></p> .ಚುನಾವಣೆ ಲಾಭಕ್ಕಾಗಿ BJPಯಿಂದ ‘ಆಪರೇಷನ್ ಸಿಂಧೂರ’ ದುರ್ಬಳಕೆ ಸಾಧ್ಯತೆ: ಸಿಪಿಎಂ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>