<p><strong>ಚೆನ್ನೈ:</strong> ಕರ್ನಾಟಕ ಸಂಗೀತದ ಪ್ರಸಿದ್ಧ ಗಾಯಕಿ ಎಂ.ಎಸ್.ಸುಬ್ಬುಲಕ್ಷ್ಮಿ ಹೆಸರಿನ ಪ್ರಶಸ್ತಿಯನ್ನು ಗಾಯಕ ಟಿ.ಎಂ.ಕೃಷ್ಣ ಅವರಿಗೆ ಪ್ರದಾನ ಮಾಡದಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್ನ ವಿಭಾಗೀಯ ಪೀಠ ಶುಕ್ರವಾರ ರದ್ದು ಮಾಡಿದೆ.</p>.<p>ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಸ್ಥಾಪಿಸಿರುವ, ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಹೆಸರಿನ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಕೃಷ್ಣ ಅವರಿಗೆ ಪ್ರದಾನ ಮಾಡುವುದಕ್ಕೆ ವಿಭಾಗೀಯ ಪೀಠ ಅನುಮತಿ ನೀಡಿದೆ.</p>.<p>₹1 ಲಕ್ಷ ನಗದು ಪುರಸ್ಕಾರ ಒಳಗೊಂಡ ಈ ಪ್ರಶಸ್ತಿಯನ್ನು ಪತ್ರಿಕಾ ಸಂಸ್ಥೆ //ದಿ ಹಿಂದೂ ನೀಡುತ್ತಿದ್ದು,// ಜನವರಿ 1ರಂದು ಪ್ರದಾನ ಮಾಡಲಾಗುತ್ತದೆ.</p>.<p>ಇನ್ನೊಂದೆಡೆ, ಏಕಸದಸ್ಯ ಪೀಠದ ಆದೇಶ ರದ್ದು ಮಾಡಿ ಮದ್ರಾಸ್ ಹೈಕೋರ್ಟ್ನ ವಿಭಾಗೀಯ ಪೀಠ ತೀರ್ಪು ನೀಡಿದ ಕೆಲ ಗಂಟೆಗಳಲ್ಲಿಯೇ, ಅದನ್ನು ಪ್ರಶ್ನಿಸಿ ಅರ್ಜಿದಾರ ವಿ.ಶ್ರೀನಿವಾಸನ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.</p>.<p>ತಮ್ಮ ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಶ್ರೀನಿವಾಸನ್ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್.ವೆಂಕಟರಾಮನ್ ಅವರ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಡಿಸೆಂಬರ್ 16ಕ್ಕೆ ಮುಂದೂಡಿತು.</p>.<p>ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರಿದ್ದ ಪೀಠ ಅರ್ಜಿ ವಿಚಾರಣೆ ನಡೆಸಿತು.</p>.<p><strong>ಪ್ರಕರಣವೇನು?:</strong> ಟಿ.ಎಂ.ಕೃಷ್ಣ ಅವರಿಗೆ ‘ಸಂಗೀತ ಕಲಾನಿಧಿ ಎಂ.ಎಸ್.ಸುಬ್ಬುಲಕ್ಷ್ಮಿ’ ಹೆಸರಿನ ಪ್ರಶಸ್ತಿ ನೀಡುವ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ನಿರ್ಧಾರವನ್ನು ಆಕ್ಷೇಪಿಸಿ ಸುಬ್ಬುಲಕ್ಷ್ಮಿ ಅವರ ಮೊಮ್ಮಗ ವಿ.ಶ್ರೀನಿವಾಸನ್ ಕೋರ್ಟ್ ಮೆಟ್ಟಿಲೇರಿದ್ದರು.</p>.<p>‘ನನ್ನ ಹೆಸರಿನಲ್ಲಿ ಯಾವುದೇ ಟ್ರಸ್ಟ್, ಪ್ರತಿಷ್ಠಾನ ಅಥವಾ ಯಾವುದೇ ರೀತಿಯ ಸ್ಮಾರಕ ಸ್ಥಾಪಿಸಬಾರದು. ಯಾವುದೇ ದೇಣಿಗೆ ಅಥವಾ ನಿಧಿಯನ್ನು ಕೂಡ ಸಂಗ್ರಹಿಸಬಾರದು ಎಂದು ನನ್ನ ಅಜ್ಜಿ 1997ರಲ್ಲಿ ಬರೆದಿರುವ ಉಯಿಲಿನಲ್ಲಿ ಹೇಳಿದ್ಧಾರೆ’ ಎಂದು ಶ್ರೀನಿವಾಸನ್ ಅರ್ಜಿಯಲ್ಲಿ ತಿಳಿಸಿದ್ದರು.</p>.<p>ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಜಿ.ಜಯಚಂದ್ರನ್ ಅವರು ಇದ್ದ ಏಕಸದಸ್ಯ ಪೀಠ, ಶ್ರೀನಿವಾಸನ್ ಅವರ ವಾದವನ್ನು ಒಪ್ಪಿದ್ದರು. ಸುಬ್ಬುಲಕ್ಷ್ಮಿ ಹೆಸರಿನಲ್ಲಿ ಯಾವುದೇ ಪ್ರಶಸ್ತಿ ನೀಡಬಾರದು ಎಂದು ನವೆಂಬರ್ 19ರಂದು ಆದೇಶಿಸಿದ್ದರು.</p>.<p>ಮದ್ರಾಸ್ ಮ್ಯೂಸಿಕ್ ಅಕಾಡೆಮಿ, ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಹೈಕೋರ್ಟ್ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.</p>.<p>ಮೇಲ್ಕನವಿ ವಿಚಾರಣೆ ಮಾಡಿದ, ನ್ಯಾಯಮೂರ್ತಿಗಳಾದ ಎಸ್.ಎಸ್.ಸುಂದರ್ ಹಾಗೂ ಪಿ.ಧನಪಾಲ್ ಅವರು ಇದ್ದ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶವನ್ನು ರದ್ದುಪಡಿಸಿತು.</p>.<p>‘ಸ್ಮರಣಾರ್ಥ ಎಂಬ ಪದವನ್ನು ಹಲವು ರೀತಿ ವ್ಯಾಖ್ಯಾನಿಸಬಹುದು. ಅಲ್ಲದೇ, ನನ್ನ ಹೆಸರಿನಲ್ಲಿ ಯಾವುದೇ ಪ್ರಶಸ್ತಿ ನೀಡಬಾರದು ಎಂಬುದಾಗಿ ಸುಬ್ಬುಲಕ್ಷ್ಮಿ ಅವರ ಉಯಿಲಿನಲ್ಲಿ ನಿರ್ದಿಷ್ಟವಾಗಿ ಹೇಳಿಲ್ಲ’ ಎಂದ ವಿಭಾಗೀಯ ಪೀಠ, ‘ಗಾಯಕ ಟಿ.ಎಂ.ಕೃಷ್ಣ ಅವರು ₹1 ಲಕ್ಷ ನಗದು ಮತ್ತು ಸಂಗೀತ ಕಲಾನಿಧಿ ಎಂ.ಎಸ್.ಸುಬ್ಬುಲಕ್ಷ್ಮಿ ಪ್ರಶಸ್ತಿ ಸ್ವೀಕರಿಸಬಹುದು’ ಎಂದು ಸ್ಪಷ್ಟಪಡಿಸಿದೆ.</p>.<p>ವಿರೋಧವೇಕೆ?: ‘ನನ್ನ ಅಜ್ಜಿ ವಿರುದ್ಧ ಕೃಷ್ಣ ಅವರು ಸಾಮಾಜಿಕ ಜಾಲತಾಣಗಳಲ್ಲಿ ನಿಂದನೀಯ ಹಾಗೂ ಮಾನಹಾನಿಕರ ದಾಳಿ ನಡೆಸಿದ್ದಾರೆ. ಅವರ ಖ್ಯಾತಿಗೆ ಕಳಂಕ ತಂದಿರುವ ಕಾರಣ, ಅವರ ಹೆಸರಿನ ಪ್ರಶಸ್ತಿಯನ್ನು ಕೃಷ್ಣ ಅವರಿಗೆ ಪ್ರದಾನ ಮಾಡಬಾರದು’ ಎಂಬುದು ಶ್ರೀನಿವಾಸನ್ ಅವರ ವಾದವಾಗಿದೆ.</p>.<p>‘ಭಕ್ತಿ ಸಂಗೀತಕ್ಕೆ ಸಂಬಂಧಿಸಿದ ಸುಬ್ಬುಲಕ್ಷ್ಮಿ ಹೆಸರಿನ ಈ ಪ್ರಶಸ್ತಿಯನ್ನು ನಾಸ್ತಿಕನಿಗೆ ನೀಡಿದಂತಾಗಲಿದೆ’ ಎಂದೂ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ಕರ್ನಾಟಕ ಸಂಗೀತದ ಪ್ರಸಿದ್ಧ ಗಾಯಕಿ ಎಂ.ಎಸ್.ಸುಬ್ಬುಲಕ್ಷ್ಮಿ ಹೆಸರಿನ ಪ್ರಶಸ್ತಿಯನ್ನು ಗಾಯಕ ಟಿ.ಎಂ.ಕೃಷ್ಣ ಅವರಿಗೆ ಪ್ರದಾನ ಮಾಡದಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್ನ ವಿಭಾಗೀಯ ಪೀಠ ಶುಕ್ರವಾರ ರದ್ದು ಮಾಡಿದೆ.</p>.<p>ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಸ್ಥಾಪಿಸಿರುವ, ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಹೆಸರಿನ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಕೃಷ್ಣ ಅವರಿಗೆ ಪ್ರದಾನ ಮಾಡುವುದಕ್ಕೆ ವಿಭಾಗೀಯ ಪೀಠ ಅನುಮತಿ ನೀಡಿದೆ.</p>.<p>₹1 ಲಕ್ಷ ನಗದು ಪುರಸ್ಕಾರ ಒಳಗೊಂಡ ಈ ಪ್ರಶಸ್ತಿಯನ್ನು ಪತ್ರಿಕಾ ಸಂಸ್ಥೆ //ದಿ ಹಿಂದೂ ನೀಡುತ್ತಿದ್ದು,// ಜನವರಿ 1ರಂದು ಪ್ರದಾನ ಮಾಡಲಾಗುತ್ತದೆ.</p>.<p>ಇನ್ನೊಂದೆಡೆ, ಏಕಸದಸ್ಯ ಪೀಠದ ಆದೇಶ ರದ್ದು ಮಾಡಿ ಮದ್ರಾಸ್ ಹೈಕೋರ್ಟ್ನ ವಿಭಾಗೀಯ ಪೀಠ ತೀರ್ಪು ನೀಡಿದ ಕೆಲ ಗಂಟೆಗಳಲ್ಲಿಯೇ, ಅದನ್ನು ಪ್ರಶ್ನಿಸಿ ಅರ್ಜಿದಾರ ವಿ.ಶ್ರೀನಿವಾಸನ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.</p>.<p>ತಮ್ಮ ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಶ್ರೀನಿವಾಸನ್ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್.ವೆಂಕಟರಾಮನ್ ಅವರ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಡಿಸೆಂಬರ್ 16ಕ್ಕೆ ಮುಂದೂಡಿತು.</p>.<p>ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರಿದ್ದ ಪೀಠ ಅರ್ಜಿ ವಿಚಾರಣೆ ನಡೆಸಿತು.</p>.<p><strong>ಪ್ರಕರಣವೇನು?:</strong> ಟಿ.ಎಂ.ಕೃಷ್ಣ ಅವರಿಗೆ ‘ಸಂಗೀತ ಕಲಾನಿಧಿ ಎಂ.ಎಸ್.ಸುಬ್ಬುಲಕ್ಷ್ಮಿ’ ಹೆಸರಿನ ಪ್ರಶಸ್ತಿ ನೀಡುವ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ನಿರ್ಧಾರವನ್ನು ಆಕ್ಷೇಪಿಸಿ ಸುಬ್ಬುಲಕ್ಷ್ಮಿ ಅವರ ಮೊಮ್ಮಗ ವಿ.ಶ್ರೀನಿವಾಸನ್ ಕೋರ್ಟ್ ಮೆಟ್ಟಿಲೇರಿದ್ದರು.</p>.<p>‘ನನ್ನ ಹೆಸರಿನಲ್ಲಿ ಯಾವುದೇ ಟ್ರಸ್ಟ್, ಪ್ರತಿಷ್ಠಾನ ಅಥವಾ ಯಾವುದೇ ರೀತಿಯ ಸ್ಮಾರಕ ಸ್ಥಾಪಿಸಬಾರದು. ಯಾವುದೇ ದೇಣಿಗೆ ಅಥವಾ ನಿಧಿಯನ್ನು ಕೂಡ ಸಂಗ್ರಹಿಸಬಾರದು ಎಂದು ನನ್ನ ಅಜ್ಜಿ 1997ರಲ್ಲಿ ಬರೆದಿರುವ ಉಯಿಲಿನಲ್ಲಿ ಹೇಳಿದ್ಧಾರೆ’ ಎಂದು ಶ್ರೀನಿವಾಸನ್ ಅರ್ಜಿಯಲ್ಲಿ ತಿಳಿಸಿದ್ದರು.</p>.<p>ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಜಿ.ಜಯಚಂದ್ರನ್ ಅವರು ಇದ್ದ ಏಕಸದಸ್ಯ ಪೀಠ, ಶ್ರೀನಿವಾಸನ್ ಅವರ ವಾದವನ್ನು ಒಪ್ಪಿದ್ದರು. ಸುಬ್ಬುಲಕ್ಷ್ಮಿ ಹೆಸರಿನಲ್ಲಿ ಯಾವುದೇ ಪ್ರಶಸ್ತಿ ನೀಡಬಾರದು ಎಂದು ನವೆಂಬರ್ 19ರಂದು ಆದೇಶಿಸಿದ್ದರು.</p>.<p>ಮದ್ರಾಸ್ ಮ್ಯೂಸಿಕ್ ಅಕಾಡೆಮಿ, ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಹೈಕೋರ್ಟ್ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.</p>.<p>ಮೇಲ್ಕನವಿ ವಿಚಾರಣೆ ಮಾಡಿದ, ನ್ಯಾಯಮೂರ್ತಿಗಳಾದ ಎಸ್.ಎಸ್.ಸುಂದರ್ ಹಾಗೂ ಪಿ.ಧನಪಾಲ್ ಅವರು ಇದ್ದ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶವನ್ನು ರದ್ದುಪಡಿಸಿತು.</p>.<p>‘ಸ್ಮರಣಾರ್ಥ ಎಂಬ ಪದವನ್ನು ಹಲವು ರೀತಿ ವ್ಯಾಖ್ಯಾನಿಸಬಹುದು. ಅಲ್ಲದೇ, ನನ್ನ ಹೆಸರಿನಲ್ಲಿ ಯಾವುದೇ ಪ್ರಶಸ್ತಿ ನೀಡಬಾರದು ಎಂಬುದಾಗಿ ಸುಬ್ಬುಲಕ್ಷ್ಮಿ ಅವರ ಉಯಿಲಿನಲ್ಲಿ ನಿರ್ದಿಷ್ಟವಾಗಿ ಹೇಳಿಲ್ಲ’ ಎಂದ ವಿಭಾಗೀಯ ಪೀಠ, ‘ಗಾಯಕ ಟಿ.ಎಂ.ಕೃಷ್ಣ ಅವರು ₹1 ಲಕ್ಷ ನಗದು ಮತ್ತು ಸಂಗೀತ ಕಲಾನಿಧಿ ಎಂ.ಎಸ್.ಸುಬ್ಬುಲಕ್ಷ್ಮಿ ಪ್ರಶಸ್ತಿ ಸ್ವೀಕರಿಸಬಹುದು’ ಎಂದು ಸ್ಪಷ್ಟಪಡಿಸಿದೆ.</p>.<p>ವಿರೋಧವೇಕೆ?: ‘ನನ್ನ ಅಜ್ಜಿ ವಿರುದ್ಧ ಕೃಷ್ಣ ಅವರು ಸಾಮಾಜಿಕ ಜಾಲತಾಣಗಳಲ್ಲಿ ನಿಂದನೀಯ ಹಾಗೂ ಮಾನಹಾನಿಕರ ದಾಳಿ ನಡೆಸಿದ್ದಾರೆ. ಅವರ ಖ್ಯಾತಿಗೆ ಕಳಂಕ ತಂದಿರುವ ಕಾರಣ, ಅವರ ಹೆಸರಿನ ಪ್ರಶಸ್ತಿಯನ್ನು ಕೃಷ್ಣ ಅವರಿಗೆ ಪ್ರದಾನ ಮಾಡಬಾರದು’ ಎಂಬುದು ಶ್ರೀನಿವಾಸನ್ ಅವರ ವಾದವಾಗಿದೆ.</p>.<p>‘ಭಕ್ತಿ ಸಂಗೀತಕ್ಕೆ ಸಂಬಂಧಿಸಿದ ಸುಬ್ಬುಲಕ್ಷ್ಮಿ ಹೆಸರಿನ ಈ ಪ್ರಶಸ್ತಿಯನ್ನು ನಾಸ್ತಿಕನಿಗೆ ನೀಡಿದಂತಾಗಲಿದೆ’ ಎಂದೂ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>