ಸಂಸತ್ನಲ್ಲಿ ಅವಿಶ್ವಾಸ ಮತದ ಮೇಲೆ ಶುಕ್ರವಾರ ನಡೆಯುತ್ತಿರುವ ಚರ್ಚೆಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ರಾಹುಲ್ ಗಾಂಧಿ ಅವರು ರಫೆಲ್ ವಿಚಾರ ಮಾತನಾಡುವಾಗ ರಕ್ಷಣಾ ಸಚಿವರಾದ ನಮ್ಮ ಹೆಸರು ಪ್ರಸ್ತಾಪಿಸಿದರು. ಈ ಮೂಲಕ ಮಾತನಾಡಲು ಅವಕಾಶ ಕಲ್ಪಸಿದ್ದಾರೆ. ಇದಕ್ಕೆ ಅಭಿನಂದಿಸುತ್ತೇನೆ. ನಮ್ಮ ಹೆಸರು ಪ್ರಸ್ತಾಪಿಸಿದ್ದರಿಂದ ಮಾತನಾಡುತ್ತಿದ್ದೇನೆ ಎಂದರು.