<p><strong>ಮುಂಬೈ</strong>: ತಮ್ಮ ಪಕ್ಷಕ್ಕೆ 170 ಶಾಸಕರ ಬೆಂಬಲವಿದೆ ಎಂದು ಮಹಾರಾಷ್ಟ್ರ ಬಿಜೆಪಿ ನಾಯಕ ಗಿರೀಶ್ ಮಹಾಜನ್ ಗುರುವಾರ ಹೇಳಿದ್ದಾರೆ. ಈ ಮೂಲಕ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆಗಳು ನಿಚ್ಚಳವಾಗಿವೆ.</p>.<p>ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು 145 ಶಾಸಕರ ಅಗತ್ಯವಿದ್ದು, ಶಿವಸೇನಾ ಬಂಡಾಯ ಶಾಸಕರ ನಾಯಕ ಏಕನಾಥ ಶಿಂಧೆ ಅವರು ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್ ಅವರನ್ನು ಮುಂಬೈನಲ್ಲಿ ಭೇಟಿಯಾಗಿದ್ದಾರೆ.</p>.<p>ಮಹಾರಾಷ್ಟ್ರದ ಬೆಳವಣಿಗೆಗಳ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಮಾಜಿ ಸಚಿವ ಗಿರೀಶ್ ಮಹಾಜನ್, ‘ನಮಗೆ 170 ಶಾಸಕರ ಬೆಂಬಲವಿದೆ. ಒಂದು ವೇಳೆ ಬಹುಮತ ಸಾಬೀತುಪಡಿಸಲು ಹೇಳಿದರೆ, ನಾವು ನಿರಾಯಾಸವಾಗಿ ಜಯಸಾಧಿಸಲಿದ್ದೇವೆ’ ಎಂದು ಹೇಳಿದ್ದಾರೆ.</p>.<p>ಸದನದಲ್ಲಿ ಪಕ್ಷದ ಬಲ 106 ಆಗಿದ್ದು, ಇತರ 13 ಪಕ್ಷೇತರಶಾಸಕರ ಬೆಂಬಲವಿದೆ. ಶಿಂಧೆ ಜೊತೆ ಗುರುತಿಸಿಕೊಂಡಿರುವ ಶಾಸಕರೂ ನಮ್ಮೊಂದಿಗೆ ಬರಲಿದ್ದಾರೆಎಂದು ಬಿಜೆಪಿ ಹೇಳಿಕೊಂಡಿದೆ.</p>.<p>ಶಿಂಧೆ ಅವರು ಬುಧವಾರ ರಾತ್ರಿ ಗುವಾಹಟಿಯಿಂದ 50 ಶಾಸಕರ ಗುಂಪಿನೊಂದಿಗೆ ಗೋವಾಕ್ಕೆ ಬಂದಿಳಿದಿದ್ದಾರೆ. ಅವರಲ್ಲಿ 39 ಶಿವಸೇನಾ ಭಿನ್ನಮತೀಯರು, ಉಳಿದವರು ಇತರ ಸಣ್ಣ ಪಕ್ಷಗಳ ಹಾಗೂ ಸ್ವತಂತ್ರ ಶಾಸಕರಿದ್ದಾರೆ.</p>.<p>‘ಶಿವಸೇನಾ ಭಿನ್ನಮತೀಯರು ಶಿವಸೈನಿಕರಾಗಿದ್ದಾರೆ ಮತ್ತು ಶಿವಸೇನಾದಲ್ಲಿಯೇ ಇರುತ್ತಾರೆ’ ಎಂದು ಶಿಂಧೆ ಬುಧವಾರ ರಾತ್ರಿ ಪುನರುಚ್ಚರಿಸಿದ್ದಾರೆ.</p>.<p><strong>ಇದನ್ನೂ ಓದಿ–</strong><a href="https://www.prajavani.net/india-news/devendra-fadnavis-eknath-shinde-to-stake-claim-to-form-new-government-in-maharashtra-950138.html" target="_blank"><strong>ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಗೆ ಸಿದ್ಧತೆ: ಫಡಣವೀಸ್ರಿಂದ ಹಕ್ಕು ಮಂಡನೆ?</strong></a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ತಮ್ಮ ಪಕ್ಷಕ್ಕೆ 170 ಶಾಸಕರ ಬೆಂಬಲವಿದೆ ಎಂದು ಮಹಾರಾಷ್ಟ್ರ ಬಿಜೆಪಿ ನಾಯಕ ಗಿರೀಶ್ ಮಹಾಜನ್ ಗುರುವಾರ ಹೇಳಿದ್ದಾರೆ. ಈ ಮೂಲಕ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆಗಳು ನಿಚ್ಚಳವಾಗಿವೆ.</p>.<p>ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು 145 ಶಾಸಕರ ಅಗತ್ಯವಿದ್ದು, ಶಿವಸೇನಾ ಬಂಡಾಯ ಶಾಸಕರ ನಾಯಕ ಏಕನಾಥ ಶಿಂಧೆ ಅವರು ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್ ಅವರನ್ನು ಮುಂಬೈನಲ್ಲಿ ಭೇಟಿಯಾಗಿದ್ದಾರೆ.</p>.<p>ಮಹಾರಾಷ್ಟ್ರದ ಬೆಳವಣಿಗೆಗಳ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಮಾಜಿ ಸಚಿವ ಗಿರೀಶ್ ಮಹಾಜನ್, ‘ನಮಗೆ 170 ಶಾಸಕರ ಬೆಂಬಲವಿದೆ. ಒಂದು ವೇಳೆ ಬಹುಮತ ಸಾಬೀತುಪಡಿಸಲು ಹೇಳಿದರೆ, ನಾವು ನಿರಾಯಾಸವಾಗಿ ಜಯಸಾಧಿಸಲಿದ್ದೇವೆ’ ಎಂದು ಹೇಳಿದ್ದಾರೆ.</p>.<p>ಸದನದಲ್ಲಿ ಪಕ್ಷದ ಬಲ 106 ಆಗಿದ್ದು, ಇತರ 13 ಪಕ್ಷೇತರಶಾಸಕರ ಬೆಂಬಲವಿದೆ. ಶಿಂಧೆ ಜೊತೆ ಗುರುತಿಸಿಕೊಂಡಿರುವ ಶಾಸಕರೂ ನಮ್ಮೊಂದಿಗೆ ಬರಲಿದ್ದಾರೆಎಂದು ಬಿಜೆಪಿ ಹೇಳಿಕೊಂಡಿದೆ.</p>.<p>ಶಿಂಧೆ ಅವರು ಬುಧವಾರ ರಾತ್ರಿ ಗುವಾಹಟಿಯಿಂದ 50 ಶಾಸಕರ ಗುಂಪಿನೊಂದಿಗೆ ಗೋವಾಕ್ಕೆ ಬಂದಿಳಿದಿದ್ದಾರೆ. ಅವರಲ್ಲಿ 39 ಶಿವಸೇನಾ ಭಿನ್ನಮತೀಯರು, ಉಳಿದವರು ಇತರ ಸಣ್ಣ ಪಕ್ಷಗಳ ಹಾಗೂ ಸ್ವತಂತ್ರ ಶಾಸಕರಿದ್ದಾರೆ.</p>.<p>‘ಶಿವಸೇನಾ ಭಿನ್ನಮತೀಯರು ಶಿವಸೈನಿಕರಾಗಿದ್ದಾರೆ ಮತ್ತು ಶಿವಸೇನಾದಲ್ಲಿಯೇ ಇರುತ್ತಾರೆ’ ಎಂದು ಶಿಂಧೆ ಬುಧವಾರ ರಾತ್ರಿ ಪುನರುಚ್ಚರಿಸಿದ್ದಾರೆ.</p>.<p><strong>ಇದನ್ನೂ ಓದಿ–</strong><a href="https://www.prajavani.net/india-news/devendra-fadnavis-eknath-shinde-to-stake-claim-to-form-new-government-in-maharashtra-950138.html" target="_blank"><strong>ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಗೆ ಸಿದ್ಧತೆ: ಫಡಣವೀಸ್ರಿಂದ ಹಕ್ಕು ಮಂಡನೆ?</strong></a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>