ಆದಿತ್ಯ ವಿರುದ್ಧವೂ ಚಾಟಿ
ಉದ್ಧವ್ ಪುತ್ರ ಆದಿತ್ಯ ಠಾಕ್ರೆ ವಿರುದ್ಧವೂ ಚಾಟಿ ಬೀಸಿರುವ ಶಿವಸೇನಾ ನಾಯಕ, 'ಠಾಕ್ರೆ ಬ್ರಾಂಡ್ ಎಂಬುದು ನಾಟಕ ಅಥವಾ ಸ್ವಾರ್ಥದ ವಿಚಾರವಲ್ಲ. ಅದು ನಿರ್ಣಾಯಕ ನಾಯಕತ್ವ ಮತ್ತು ತಳಮಟ್ಟದ ಜನರೊಂದಿಗೆ ಹೊಂದಿರುವ ಸಂಪರ್ಕಕ್ಕೆ ಸಂಬಂಧಿಸಿದ್ದು. ವಾಸ್ತವವೇನೆಂದರೆ, ಬಿಎಂಸಿಯಲ್ಲಿ ಆಗಲೀ, ಶಾಸಕರ ನಡುವೆಯಾಗಲೀ ಕುಟುಂಬದ ಹಿಡಿತವನ್ನು ಉಳಿಸಿಕೊಳ್ಳಲು ಆದಿತ್ಯಗೆ ಸಾಧ್ಯವಾಗಿಲ್ಲ' ಎಂದಿದ್ದಾರೆ.