<p><strong>ಲಖನೌ</strong>: ಸಮಾಜವಾದಿ ಪಕ್ಷವು (ಎಸ್ಪಿ) ಅಧಿಕಾರಕ್ಕೇರುವ ಸಲುವಾಗಿ ದಲಿತ ನಾಯಕರ ಸ್ಮರಣೆ ಮಾಡುತ್ತಿದೆ ಎಂದು ಬಹುಜನ ಸಮಾಜವಾದಿ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಗುರುವಾರ ಆರೋಪಿಸಿದ್ದಾರೆ.</p><p>ಪಕ್ಷದ ಸಂಸ್ಥಾಪಕ ಕಾನ್ಶಿರಾಮ್ ಅವರ 19ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಡೆದ ಸಮಾವೇಶದಲ್ಲಿ ಮಾತನಾಡಿರುವ ಅವರು, 'ಅಧಿಕಾರಕ್ಕೇರುತ್ತಿದ್ದಂತೆ ದಲಿತರನ್ನು ಮರೆಯುವ ಎಸ್ಪಿ, ಅವರನ್ನು ನೆನಪಿಸಿಕೊಳ್ಳುವುದು ಅಗ್ಯವಿದ್ದಾಗ ಮಾತ್ರ' ಎಂದು ಟೀಕಿಸಿದ್ದಾರೆ.</p><p>'ಅವರು (ಸಮಾಜವಾಧಿ ಪಕ್ಷದವರು) ಅಧಿಕಾರದಲ್ಲಿದ್ದಾಗ ಸಂತರು, ಗುರುಗಳು, ಮಹಾನ್ ನಾಯಕರನ್ನು ಸ್ಮರಿಸುವುದಿಲ್ಲ. ಆದರೆ, ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ, ಅವರನ್ನೆಲ್ಲ ನೆನಪಿಸಿಕೊಳ್ಳಲಾರಂಭಿಸುತ್ತಾರೆ. ಹೀಗೆ ಎರಡು ಮುಖಗಳನ್ನು ಹೊಂದಿರುವವರ ಬಗ್ಗೆ ಜನರು ಎಚ್ಚರದಿಂದ ಇರಬೇಕು' ಎಂದು ಕರೆ ನೀಡಿದ್ದಾರೆ.</p><p>ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ನಡೆದ ಸಮಾವೇಶದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು.</p><p>'ಅಧಿಕಾರದಲ್ಲಿದ್ದಾಗ ಅವರು ಒಂದೇ ಒಂದು ರೂಪಾಯಿ ಖರ್ಚು ಮಾಡಲಿಲ್ಲ. ಆದರೆ, ಈಗ ಕಾನ್ಶಿರಾಮ್ ಅವರ ಗೌರವಾರ್ಥವಾಗಿ ವಿಚಾರ ಸಂಕೀರಣಗಳನ್ನು ಆಯೋಜಿಸುವುದಾಗಿ ಹೇಳುತ್ತಿದ್ದಾರೆ' ಎಂದು ವ್ಯಂಗ್ಯವಾಡಿದ್ದಾರೆ.</p><p>ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಬಿಎಸ್ಪಿ ಸಂಸ್ಥಾಪಕರ ಬಗ್ಗೆ ನಿಜವಾಗಿಯೂ ಗೌರವ ಇದ್ದಿದ್ದರೆ, ಅಲಿಗಢ ವಿಭಾಗದ ಕಾನ್ಶಿರಾಮ್ ನಗರ ಜಿಲ್ಲೆಗೆ ಕಾಸ್ಗಂಜ್ ಎಂದು ಮರುನಾಮಕರಣ ಮಾಡುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p><p>'ನಾವು ವಿಶ್ವವಿದ್ಯಾಲಯಗಳು, ಸಂಸ್ಥೆಗಳಿಗೆ ಕಾನ್ಶಿರಾಮ್ ಹಾಗೂ ಇತರ ಧೀಮಂತ ನಾಯಕರ ಅವರ ಹೆಸರಿಟ್ಟಿದ್ದೆವು. ಸಾಕಷ್ಟು ಕಲ್ಯಾಣ ಯೋಜನೆಗಳನ್ನೂ ಆರಂಭಿಸಿದ್ದೆವು. ಆದರೆ, ಎಸ್ಪಿ ಸರ್ಕಾರ ಎಲ್ಲವನ್ನೂ ಸ್ಥಗಿತಗೊಳಿಸಿತು. ಇದು ಇಬ್ಬಗೆ ನೀತಿಯಲ್ಲಿದೆ ಮತ್ತೇನು?' ಎಂದು ನೆರದಿದ್ದವರನ್ನುದ್ದೇಶಿಸಿ ಕೇಳಿದ್ದಾರೆ.</p><p>ಮಾಜಿ ಮುಖ್ಯಮಂತ್ರಿಯೂ ಆಗಿರುವ ಮಾಯಾವತಿ ಅವರು, ತಮ್ಮ ಸರ್ಕಾರದ ಅವಧಿಯಲ್ಲಿ ನಿರ್ಮಿಸಿದ ಉದ್ಯಾನಗಳು, ಇತರ ಸ್ಮಾರಕಗಳನ್ನು ನಿರ್ವಹಿಸುವ ಭರವಸೆಯನ್ನು ಸದ್ಯ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ನೀಡಿರುವುದಕ್ಕೆ ಧನ್ಯವಾದ ಹೇಳಿದ್ದಾರೆ.</p><p>ಜನ ಸಮೂಹವನ್ನುದ್ದೇಶಿಸಿ, 'ಕಾನ್ಶಿರಾಮ್ ಅವರಿಗೆ ಗೌರವ ಸಲ್ಲಿಸುವುದಕ್ಕಾಗಿ ಭಾರಿ ಸಂಖ್ಯೆಯಲ್ಲಿ ಸೇರಿದ್ದೀರಿ. ಪಕ್ಷದ ಪರವಾಗಿ ನಿಮಗೆಲ್ಲ ಧನ್ಯವಾದಗಳು' ಎಂದೂ ಬಿಎಸ್ಪಿ ನಾಯಕಿ ಹೇಳಿದ್ದಾರೆ.</p>.2027ರ ಉತ್ತರ ಪ್ರದೇಶ ಚುನಾವಣೆಯಲ್ಲಿ 'ಇಂಡಿಯಾ' ಮೈತ್ರಿ ಮುಂದುವರಿಯಲಿದೆ: ಅಖಿಲೇಶ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ</strong>: ಸಮಾಜವಾದಿ ಪಕ್ಷವು (ಎಸ್ಪಿ) ಅಧಿಕಾರಕ್ಕೇರುವ ಸಲುವಾಗಿ ದಲಿತ ನಾಯಕರ ಸ್ಮರಣೆ ಮಾಡುತ್ತಿದೆ ಎಂದು ಬಹುಜನ ಸಮಾಜವಾದಿ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಗುರುವಾರ ಆರೋಪಿಸಿದ್ದಾರೆ.</p><p>ಪಕ್ಷದ ಸಂಸ್ಥಾಪಕ ಕಾನ್ಶಿರಾಮ್ ಅವರ 19ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಡೆದ ಸಮಾವೇಶದಲ್ಲಿ ಮಾತನಾಡಿರುವ ಅವರು, 'ಅಧಿಕಾರಕ್ಕೇರುತ್ತಿದ್ದಂತೆ ದಲಿತರನ್ನು ಮರೆಯುವ ಎಸ್ಪಿ, ಅವರನ್ನು ನೆನಪಿಸಿಕೊಳ್ಳುವುದು ಅಗ್ಯವಿದ್ದಾಗ ಮಾತ್ರ' ಎಂದು ಟೀಕಿಸಿದ್ದಾರೆ.</p><p>'ಅವರು (ಸಮಾಜವಾಧಿ ಪಕ್ಷದವರು) ಅಧಿಕಾರದಲ್ಲಿದ್ದಾಗ ಸಂತರು, ಗುರುಗಳು, ಮಹಾನ್ ನಾಯಕರನ್ನು ಸ್ಮರಿಸುವುದಿಲ್ಲ. ಆದರೆ, ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ, ಅವರನ್ನೆಲ್ಲ ನೆನಪಿಸಿಕೊಳ್ಳಲಾರಂಭಿಸುತ್ತಾರೆ. ಹೀಗೆ ಎರಡು ಮುಖಗಳನ್ನು ಹೊಂದಿರುವವರ ಬಗ್ಗೆ ಜನರು ಎಚ್ಚರದಿಂದ ಇರಬೇಕು' ಎಂದು ಕರೆ ನೀಡಿದ್ದಾರೆ.</p><p>ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ನಡೆದ ಸಮಾವೇಶದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು.</p><p>'ಅಧಿಕಾರದಲ್ಲಿದ್ದಾಗ ಅವರು ಒಂದೇ ಒಂದು ರೂಪಾಯಿ ಖರ್ಚು ಮಾಡಲಿಲ್ಲ. ಆದರೆ, ಈಗ ಕಾನ್ಶಿರಾಮ್ ಅವರ ಗೌರವಾರ್ಥವಾಗಿ ವಿಚಾರ ಸಂಕೀರಣಗಳನ್ನು ಆಯೋಜಿಸುವುದಾಗಿ ಹೇಳುತ್ತಿದ್ದಾರೆ' ಎಂದು ವ್ಯಂಗ್ಯವಾಡಿದ್ದಾರೆ.</p><p>ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಬಿಎಸ್ಪಿ ಸಂಸ್ಥಾಪಕರ ಬಗ್ಗೆ ನಿಜವಾಗಿಯೂ ಗೌರವ ಇದ್ದಿದ್ದರೆ, ಅಲಿಗಢ ವಿಭಾಗದ ಕಾನ್ಶಿರಾಮ್ ನಗರ ಜಿಲ್ಲೆಗೆ ಕಾಸ್ಗಂಜ್ ಎಂದು ಮರುನಾಮಕರಣ ಮಾಡುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p><p>'ನಾವು ವಿಶ್ವವಿದ್ಯಾಲಯಗಳು, ಸಂಸ್ಥೆಗಳಿಗೆ ಕಾನ್ಶಿರಾಮ್ ಹಾಗೂ ಇತರ ಧೀಮಂತ ನಾಯಕರ ಅವರ ಹೆಸರಿಟ್ಟಿದ್ದೆವು. ಸಾಕಷ್ಟು ಕಲ್ಯಾಣ ಯೋಜನೆಗಳನ್ನೂ ಆರಂಭಿಸಿದ್ದೆವು. ಆದರೆ, ಎಸ್ಪಿ ಸರ್ಕಾರ ಎಲ್ಲವನ್ನೂ ಸ್ಥಗಿತಗೊಳಿಸಿತು. ಇದು ಇಬ್ಬಗೆ ನೀತಿಯಲ್ಲಿದೆ ಮತ್ತೇನು?' ಎಂದು ನೆರದಿದ್ದವರನ್ನುದ್ದೇಶಿಸಿ ಕೇಳಿದ್ದಾರೆ.</p><p>ಮಾಜಿ ಮುಖ್ಯಮಂತ್ರಿಯೂ ಆಗಿರುವ ಮಾಯಾವತಿ ಅವರು, ತಮ್ಮ ಸರ್ಕಾರದ ಅವಧಿಯಲ್ಲಿ ನಿರ್ಮಿಸಿದ ಉದ್ಯಾನಗಳು, ಇತರ ಸ್ಮಾರಕಗಳನ್ನು ನಿರ್ವಹಿಸುವ ಭರವಸೆಯನ್ನು ಸದ್ಯ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ನೀಡಿರುವುದಕ್ಕೆ ಧನ್ಯವಾದ ಹೇಳಿದ್ದಾರೆ.</p><p>ಜನ ಸಮೂಹವನ್ನುದ್ದೇಶಿಸಿ, 'ಕಾನ್ಶಿರಾಮ್ ಅವರಿಗೆ ಗೌರವ ಸಲ್ಲಿಸುವುದಕ್ಕಾಗಿ ಭಾರಿ ಸಂಖ್ಯೆಯಲ್ಲಿ ಸೇರಿದ್ದೀರಿ. ಪಕ್ಷದ ಪರವಾಗಿ ನಿಮಗೆಲ್ಲ ಧನ್ಯವಾದಗಳು' ಎಂದೂ ಬಿಎಸ್ಪಿ ನಾಯಕಿ ಹೇಳಿದ್ದಾರೆ.</p>.2027ರ ಉತ್ತರ ಪ್ರದೇಶ ಚುನಾವಣೆಯಲ್ಲಿ 'ಇಂಡಿಯಾ' ಮೈತ್ರಿ ಮುಂದುವರಿಯಲಿದೆ: ಅಖಿಲೇಶ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>