ಎ.ಪಿ.ಎಸ್. ಡಿಯೊಲ್ ಅವರನ್ನು ಅಡ್ವೊಕೇಟ್ ಜನರಲ್ ಆಗಿ ನೇಮಿಸಿದ್ದು ಮತ್ತು ಇಕ್ಬಾಲ್ ಪ್ರೀತ್ ಸಿಂಗ್ ಸಹೋಟ ಅವರಿಗೆ ಪೊಲೀಸ್ ಮಹಾ ನಿರ್ದೇಶಕರಾಗಿ ಹೆಚ್ಚುವರಿ ಹೊಣೆ ನೀಡಿದ್ದು ಸಿಧು ಅವರ ಸಿಟ್ಟಿಗೆ ಕಾರಣವಾಗಿತ್ತು. ಹಾಗಾಗಿಯೇ, ಸಭೆಗೆ ಕೆಲ ನಿಮಿಷ ಮೊದಲು ಸಿಧು ಹೀಗೆ ಟ್ವೀಟ್ ಮಾಡಿದ್ದರು: ‘ಬಾದಲ್ ಸರ್ಕಾರವಿದ್ದಾಗ ಬಿಯಾಬ್ದಿ ಪ್ರಕರಣದ ವಿಶೇಷ ತನಿಖಾ ತಂಡದ ತನಿಖಾಧಿಕಾರಿಯಾಗಿ ಸಹೋಟ ಅವರಿದ್ದರು. ಬಾದಲ್ಗಳನ್ನು (ಮುಖ್ಯಮಂತ್ರಿಯಾಗಿದ್ದ ಪ್ರಕಾಶ್ ಸಿಂಗ್ ಬಾದಲ್ ಕುಟುಂಬದವರು) ದೋಷಮುಕ್ತರನ್ನಾಗಿ ಮಾಡಿದ ಸಹೋಟ, ಇಬ್ಬರು ಸಿಖ್ ನಿರಪರಾಧಿ ಯುವಕರು ತಪ್ಪಿತಸ್ಥರು
ಎಂದಿದ್ದರು...’