ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣದ ಜಾನಪದ ಗಾಯಕ ಸಾಯಿಚಂದರ್ ನಿಧನ

Published 29 ಜೂನ್ 2023, 13:10 IST
Last Updated 29 ಜೂನ್ 2023, 13:10 IST
ಅಕ್ಷರ ಗಾತ್ರ

ಹೈದರಾಬಾದ್: ಜನಪದ ಗಾಯಕ, ತೆಲಂಗಾಣ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ವಿ.ಸಾಯಿಚಂದರ್ (39) ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಬಿಆರ್‌ಎಸ್‌ ಪಕ್ಷ ತಿಳಿಸಿದೆ.

ಸಾಯಿಚಂದರ್ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು, ಗೌರವ ನಮನ ಸಲ್ಲಿಸಿದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಮೃತರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.

‘ಬಾಲ್ಯದಿಂದಲೇ ಅಸಾಧಾರಣ ಪ್ರತಿಭೆ ಹೊಂದಿದ್ದ ಕಲಾವಿದ, ಸಾಯಿಚಂದ್‌ ಅವರ ಹಠಾತ್ ನಿಧನ ತೆಲಂಗಾಣಕ್ಕೆ ಭರಿಸಲಾಗದ ನಷ್ಟ. ಪ್ರತ್ಯೇಕ ರಾಜ್ಯದ ಆಂದೋಲನದ ಸಂದರ್ಭ ಅವರ ಹಾಡು, ಮಾತು ಕೇಳಲು ಸಭೆಗಳಿಗೆ ಅಪಾರ ಜನರು ಜಮಾಯಿಸುತ್ತಿದ್ದರು’ ಎಂದು ಮುಖ್ಯಮಂತ್ರಿ ಸ್ಮರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT