ಜಂಟಿ ಸಂಸದೀಯ ಸಮಿತಿ ಮೊದಲ ಸಭೆಯಲ್ಲಿ ಎಲ್ಲ ಸದಸ್ಯರಿಗೆ ಮಸೂದೆಗಳ ಕರಡು ಸೇರಿದಂತೆ ಒಟ್ಟು 18 ಸಾವಿರ ಪುಟಗಳಿದ್ದ ಟ್ರಾಲಿ ನೀಡಲಾಯಿತು. ರಾಮನಾಥ ಕೋವಿಂದ್ ಸಮಿತಿಯ ಹಿಂದಿ ಮತ್ತು ಇಂಗ್ಲಿಷ್ ಅವತರಣಿಕೆಯ ವರದಿ, ವಿವಿಧ ಅನುಬಂಧಗಳ 21 ಸಂಪುಟಗಳು ಇದರಲ್ಲಿ ಸೇರಿದ್ದವು.
ಏಕಕಾಲದ ಚುನಾವಣೆಯಿಂದ ಪ್ರಾದೇಶಿಕ ಪಕ್ಷಗಳು ಕಡೆಗಣನೆಗೆ ಒಳಗಾಗುತ್ತವೆ. ಸ್ಥಳೀಯ ವಿಷಯಗಳು ಚರ್ಚೆಗೆ ಬರುವುದಿಲ್ಲ
ವಿ.ವಿಜಯಸಾಯಿ ರೆಡ್ಡಿ ವೈಎಸ್ಆರ್ ಕಾಂಗ್ರೆಸ್
ಮತಪೆಟ್ಟಿಗೆಯನ್ನೇ ಕಸಿಯುವ ಘಟನೆಗಳು ಬಿಹಾರದಲ್ಲಿ ನಡೆದಿವೆ. ಮತಪತ್ರಗಳನ್ನು ಮತ್ತೆ ಬಳಸುವ ಕ್ರಮವನ್ನು ಜಾರಿಗೊಳಿಸುವುದು ತರವಲ್ಲ
ಸಂಜಯ್ ಝಾ, ಜೆಡಿಯು
ಏಕ ಚುನಾವಣೆಯ ಮೂಲಕ ಹಣ ಉಳಿಸುವುದಕ್ಕಿಂತಲೂ ಜನರ ಪ್ರಜಾಸತ್ತಾತ್ಮಕವಾದ ಹಕ್ಕುಗಳ ಎತ್ತಿ ಹಿಡಿಯುವುದೇ ಹೆಚ್ಚು ಮುಖ್ಯವಾಗಬೇಕು