<p><strong>ಕೊಯಂಬತ್ತೂರ್:</strong> ಚುಣಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷಕ್ಕೆ ಏಕಷ್ಟು ಆತಂಕ? ಏತಕ್ಕಾಗಿ ಅರಚಾಟ? ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಕೇಳಿದ್ದಾರೆ.</p><p>ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಒಂದು ತಿಂಗಳ ಸಮಯ ಸಾಲದು ಎಂಬ ಡಿಎಂಕೆ ಆರೋಪಕ್ಕೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಪಳನಿಸ್ವಾಮಿ, ‘ಪಟ್ಟಿ ಪರಿಷ್ಕರಣೆ ನಡೆಸಲು ಚುನಾವಣಾ ಆಯೋಗಕ್ಕೆ ಒಂದು ತಿಂಗಳ ಅವಧಿ ಸಾಕು’ ಎಂದಿದ್ದಾರೆ.</p><p>‘ಚುನಾವಣೆ ನಡೆಯುವ ಐದು ದಿನಗಳ ಮೊದಲು ಪ್ರತಿ ಮನೆಗೂ ಬೂತ್ ಚೀಟಿಗಳನ್ನು ವಿತರಿಸಲು ಚುನಾವಣಾ ಸಿಬ್ಬಂದಿಗೆ ಸಾಧ್ಯವಾಗುವುದಾದರೆ, 30 ದಿನಗಳಲ್ಲಿ ಪಟ್ಟಿ ಪರಿಷ್ಕರಿಸಿ, ಮಾಹಿತಿ ದಾಖಲಿಸಲು ಸಾಧ್ಯವಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.</p><p>‘ಮತದಾರರ ಪಟ್ಟಿಯ ಪರಿಷ್ಕರಣೆ ವಿಷಯದಲ್ಲಿ ಡಿಎಂಕೆ ಹಾಗೂ ಅದರ ಮಿತ್ರ ಪಕ್ಷಗಳು ಎಸ್ಐಆರ್ ಹೆಸರಿನಲ್ಲಿ ಏಕೆ ಅರಚುತ್ತಿವೆ? ಅವರಿಗೆ ಶುದ್ಧವಾದ ಮತದಾರರ ಪಟ್ಟಿ ಬೇಡವೇ?’ ಎಂದು ಕೇಳಿದ್ದಾರೆ.</p><p>‘ಕ್ಷೇತ್ರದ ವ್ಯಾಪ್ತಿಯಿಂದ ಹೊರಹೋದವರು, ನಿಧನರಾದವರ ಹೆಸರುಗಳನ್ನು ಕೈಬಿಟ್ಟು, ಹೊಸದಾಗಿ ಬಂದವರ ಹೆಸರುಗಳನ್ನು ಸೇರಿಸುವ ಮತದಾರರ ಪಟ್ಟಿಯ ಪರಿಷ್ಕರಣೆ ಬಹುಮುಖ್ಯ. ಒಂದೊಮ್ಮೆ ಆ ಎಲ್ಲಾ ಮತದಾರರ ಹೆಸರುಗಳು ಪಟ್ಟಿಯಲ್ಲಿರಬೇಕೆಂದು ಡಿಎಂಕೆ ಬಯಸಿದರೆ, ಆಗ ಅದು ಬೋಗಸ್ ಮತದಾನಕ್ಕೆ ಉತ್ತೇಜನ ನೀಡುತ್ತಿದೆ ಎಂದರ್ಥ’ ಎಂದು ಪಳನಿಸ್ವಾಮಿ ಹೇಳಿದ್ದಾರೆ.</p><p>‘ರಾಜ್ಯದ ಪೊಲೀಸ್ ಮಹಾನಿರ್ದೇಶಕರ ನೇಮಕಕ್ಕೆ ರಾಜ್ಯ ಸರ್ಕಾರ ಅನಗತ್ಯವಾಗಿ ವಿಳಂಬ ಮಾಡುತ್ತಿದೆ. ಮುಖ್ಯಸ್ಥರೇ ಇಲ್ಲದ ಕಾರಣ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಇಲಾಖೆ ಪರದಾಡುತ್ತಿದೆ’ ಎಂದೂ ಅವರು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಯಂಬತ್ತೂರ್:</strong> ಚುಣಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷಕ್ಕೆ ಏಕಷ್ಟು ಆತಂಕ? ಏತಕ್ಕಾಗಿ ಅರಚಾಟ? ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಕೇಳಿದ್ದಾರೆ.</p><p>ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಒಂದು ತಿಂಗಳ ಸಮಯ ಸಾಲದು ಎಂಬ ಡಿಎಂಕೆ ಆರೋಪಕ್ಕೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಪಳನಿಸ್ವಾಮಿ, ‘ಪಟ್ಟಿ ಪರಿಷ್ಕರಣೆ ನಡೆಸಲು ಚುನಾವಣಾ ಆಯೋಗಕ್ಕೆ ಒಂದು ತಿಂಗಳ ಅವಧಿ ಸಾಕು’ ಎಂದಿದ್ದಾರೆ.</p><p>‘ಚುನಾವಣೆ ನಡೆಯುವ ಐದು ದಿನಗಳ ಮೊದಲು ಪ್ರತಿ ಮನೆಗೂ ಬೂತ್ ಚೀಟಿಗಳನ್ನು ವಿತರಿಸಲು ಚುನಾವಣಾ ಸಿಬ್ಬಂದಿಗೆ ಸಾಧ್ಯವಾಗುವುದಾದರೆ, 30 ದಿನಗಳಲ್ಲಿ ಪಟ್ಟಿ ಪರಿಷ್ಕರಿಸಿ, ಮಾಹಿತಿ ದಾಖಲಿಸಲು ಸಾಧ್ಯವಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.</p><p>‘ಮತದಾರರ ಪಟ್ಟಿಯ ಪರಿಷ್ಕರಣೆ ವಿಷಯದಲ್ಲಿ ಡಿಎಂಕೆ ಹಾಗೂ ಅದರ ಮಿತ್ರ ಪಕ್ಷಗಳು ಎಸ್ಐಆರ್ ಹೆಸರಿನಲ್ಲಿ ಏಕೆ ಅರಚುತ್ತಿವೆ? ಅವರಿಗೆ ಶುದ್ಧವಾದ ಮತದಾರರ ಪಟ್ಟಿ ಬೇಡವೇ?’ ಎಂದು ಕೇಳಿದ್ದಾರೆ.</p><p>‘ಕ್ಷೇತ್ರದ ವ್ಯಾಪ್ತಿಯಿಂದ ಹೊರಹೋದವರು, ನಿಧನರಾದವರ ಹೆಸರುಗಳನ್ನು ಕೈಬಿಟ್ಟು, ಹೊಸದಾಗಿ ಬಂದವರ ಹೆಸರುಗಳನ್ನು ಸೇರಿಸುವ ಮತದಾರರ ಪಟ್ಟಿಯ ಪರಿಷ್ಕರಣೆ ಬಹುಮುಖ್ಯ. ಒಂದೊಮ್ಮೆ ಆ ಎಲ್ಲಾ ಮತದಾರರ ಹೆಸರುಗಳು ಪಟ್ಟಿಯಲ್ಲಿರಬೇಕೆಂದು ಡಿಎಂಕೆ ಬಯಸಿದರೆ, ಆಗ ಅದು ಬೋಗಸ್ ಮತದಾನಕ್ಕೆ ಉತ್ತೇಜನ ನೀಡುತ್ತಿದೆ ಎಂದರ್ಥ’ ಎಂದು ಪಳನಿಸ್ವಾಮಿ ಹೇಳಿದ್ದಾರೆ.</p><p>‘ರಾಜ್ಯದ ಪೊಲೀಸ್ ಮಹಾನಿರ್ದೇಶಕರ ನೇಮಕಕ್ಕೆ ರಾಜ್ಯ ಸರ್ಕಾರ ಅನಗತ್ಯವಾಗಿ ವಿಳಂಬ ಮಾಡುತ್ತಿದೆ. ಮುಖ್ಯಸ್ಥರೇ ಇಲ್ಲದ ಕಾರಣ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಇಲಾಖೆ ಪರದಾಡುತ್ತಿದೆ’ ಎಂದೂ ಅವರು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>