‘ಬಿಜೆಪಿಯ ಅನಾವಶ್ಯಕ ರಾಜಕಾರಣಕ್ಕೆ ಮಹಾರಾಷ್ಟ್ರದಲ್ಲಿ ನಡೆದ ಬೆಳವಣಿಗೆ ಉತ್ತಮ ಉದಾಹರಣೆಯಾಗಿದೆ. ಬಿಜೆಪಿ ಮತ್ತು ವಿಭಜಿತ ಶಿವಸೇನಾಗೆ ಸ್ಪಷ್ಟ ಬಹುಮತ ಇದ್ದರೂ, ಅಜಿತ್ ಪವಾರ್ ನೇತೃತ್ವದ ಎನ್ಸಿಪಿಯನ್ನು ಸೇರಿಸಿಕೊಳ್ಳಲಾಯಿತು. ಮುಂದಿನ ಒಂದೆರಡು ವರ್ಷಗಳಲ್ಲಿ ಶರದ್ ಪವಾರ್ ವರ್ಚಸ್ಸು ಕಡಿಮೆಯಾಗುತ್ತಿತ್ತಲ್ಲದೆ, ಅವರ ಕುಟುಂಬದೊಳಗಿನ ಕಚ್ಚಾಟದಿಂದಾಗಿ ಎನ್ಸಿಪಿ ತನ್ನ ಶಕ್ತಿ ಕಳೆದುಕೊಳ್ಳುತ್ತಿತ್ತು’ ಎಂದಿದ್ದಾರೆ.