‘ನನ್ನ ಜೀವನವನ್ನು ಅರ್ಥಪೂರ್ಣವಾಗಿಸಲು, ನೀತಿ ಮಾರ್ಗದಲ್ಲಿ ಸಾಗಲು ಪ್ರತಿದಿನ ಭಗವದ್ಗೀತೆಯ ಒಂದು ಶ್ಲೋಕವನ್ನು ಕಲಿಯಲು ವಿದ್ವಾಂಸರೊಬ್ಬರು ನನಗೆ ಸಲಹೆ ನೀಡಿದ್ದರು. ಗೀತೋಪದೇಶವು ಅಪ್ರತಿಮವಾದದ್ದು. ನನ್ನ ಈಗಿನ ಪಿಎಚ್ಡಿ ಅಧ್ಯಯನ ಮೂರು ತಿಂಗಳಲ್ಲಿ ಪೂರ್ಣಗೊಳ್ಳುತ್ತದೆ. ನಂತರ ನಾನು ಸಂಸ್ಕೃತ ಕಲಿಯಲು ಪ್ರಾರಂಭಿಸುತ್ತೇನೆ. ಮಹಾಭಾರತದ ಮೇಲೆ ಪಿಎಚ್ಡಿ ಮಾಡುತ್ತೇನೆ,’ ಎಂದು ಅವರು ಹೇಳಿದರು.