<p><strong>ಅಲಿಗಢ (ಉತ್ತರ ಪ್ರದೇಶ) (ಪಿಟಿಐ):</strong> ಇಲ್ಲಿನ ಮುಸ್ಲಿಂ ಬಹುಸಂಖ್ಯಾತ ಪ್ರದೇಶದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿ ಪಾಳುಬಿದ್ದಿದ್ದ ಶಿವ ದೇವಾಲಯವನ್ನು ಬಲಪಂಥೀಯ ಸಂಘಟನೆಗಳ ಮುಖಂಡರು, ಕೆಲ ಸ್ಥಳೀಯ ಬಿಜೆಪಿ ನಾಯಕರು ಪುನಃ ತೆರೆದು, ಶುದ್ಧೀಕರಣ ಕಾರ್ಯಗಳನ್ನು ನೆರವೇರಿಸಿ ಹನುಮಾನ್ ಚಾಲೀಸ ಪಠಿಸಿದರು.</p>.<p>ಬಜರಂಗದಳ ಮತ್ತು ಅಖಿಲ ಭಾರತ ಕರ್ಣಿ ಸೇನಾ ಗುಂಪುಗಳು ಈ ಕಾರ್ಯಕ್ರಮ ಆಯೋಜಿಸಿದ್ದವು. ಕೆಲ ಸ್ಥಳೀಯರೂ ಇದರಲ್ಲಿ ಭಾಗಿಯಾಗಿದ್ದರು. ಸ್ಥಳದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು.</p>.<p>‘ಪೂಜಾ ಸ್ಥಳಗಳನ್ನು ಶೋಧಿಸುವ ವೇಳೆ ನಮ್ಮ ಸಂಘಟನೆಯ ಸದಸ್ಯರು ಈ ಶಿವ ಮಂದಿರವನ್ನು ಬುಧವಾರ ಗುರುತಿಸಿದರು’ ಎಂದು ಅಖಿಲ ಭಾರತ ಕರ್ಣಿ ಸೇನಾದ ರಾಜ್ಯ ಕಾರ್ಯದರ್ಶಿ ಜ್ಞಾನೆಂದ್ರ ಸಿಂಗ್ ಚೌಹಾಣ್ ತಿಳಿಸಿದರು.</p>.<p>ನಿರ್ವಹಣೆಯಿಲ್ಲದೆ ಸೊರಗಿದ್ದ ದೇವಾಲಯದ ಸ್ಥಿತಿ ಬಗ್ಗೆ ಅಲಿಗಢದ ಮಾಜಿ ಮೇಯರ್, ಬಿಜೆಪಿಯ ನಾಯಕರಾದ ಶಕುಂತಲಾ ಭಾರತಿ ಕಳವಳ ವ್ಯಕ್ತಪಡಿಸಿದರು.</p>.<p>‘ಈ ದೇವಾಲಯ ಶಿಥಿಲಾವಸ್ಥೆಯಲ್ಲಿದ್ದು, ಅದರ ಜಾಗ ಒತ್ತುವರಿಯಾಗಿದೆ. ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ಈ ಕುರಿತು ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ’ ಎಂದು ಅವರು ಹೇಳಿದರು.</p>.<p>‘ಒತ್ತುವರಿಯನ್ನು ತೆರವುಗೊಳಿಸಿ, ದೇಗುಲದಲ್ಲಿ ನಿಯಮಿತವಾಗಿ ಪೂಜಾ ಕಾರ್ಯಗಳು ನಡೆಯುವಂತೆ ಆಗಬೇಕು. ಅಲ್ಲದೆ ದೇವಾಲಯದ ಸುತ್ತಲಿನ ಜಾಗದ ಸಮೀಕ್ಷೆ ನಡೆಯಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ’ ಎಂದು ಅವರು ತಿಳಿಸಿದರು.</p>.<p>ದೇಗುಲಕ್ಕೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ಕಲ್ಪಿಸಲು ಸ್ಥಳೀಯ ನಿವಾಸಿ ಫತೇ ಮೊಹಮ್ಮದ್ ಎಂಬುವರು ನೆರವಾದರು. ಅವರ ಪ್ರಕಾರ, ಈ ದೇವಾಲಯ 50 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, ಸುಮಾರು ಐದು ವರ್ಷಗಳ ಹಿಂದಿನಿಂದ ದೇವಾಲಯದಲ್ಲಿ ಪೂಜಾ ಕಾರ್ಯಗಳು ನಿಂತಿವೆ.</p>.<p>‘ದೇವಾಲಯದ ಜೀರ್ಣೋದ್ಧಾರವನ್ನು ನಾವು ಬೆಂಬಲಿಸುತ್ತೇವೆ ಮತ್ತು ನಿರ್ವಹಣೆಗೆ ನೆರವು ನೀಡುತ್ತೇವೆ’ ಎಂದು ಮೊಹಮ್ಮದ್ ಪ್ರತಿಕ್ರಿಯಿಸಿದರು.</p>.<p>‘ಈ ಭಾಗದಲ್ಲಿನ ಜನದಟ್ಟಣೆ ಹೆಚ್ಚಾದ್ದರಿಂದ ಮತ್ತು ಮೂಲ ಸೌಕರ್ಯದ ಕೊರತೆ ಕಾರಣ ಕೆಲ ದಶಕಗಳಿಂದ ಹಿಂದೂಗಳು ಬೇರೆಡೆಗೆ ಸ್ಥಳಾಂತರವಾಗಿದ್ದಾರೆ. ಇಲ್ಲಿದ್ದ ಕೊನೆಯ ಹಿಂದೂ ಕುಟುಂಬ ನಮ್ಮದು. ನಮ್ಮ ಕುಟುಂಬ ಸಹ ದಶಕದ ಹಿಂದೆ ಇಲ್ಲಿಂದ ಸ್ಥಳಾಂತರವಾಯಿತು. ಐದು ವರ್ಷಗಳಿಂದ ಈ ದೇವಾಲಯದಲ್ಲಿ ಯಾವುದೇ ಪೂಜೆ ನಡೆದಿಲ್ಲ’ ಎಂದು ಸ್ಥಳೀಯ ನಿವಾಸಿ ಪ್ರದೀಪ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಲಿಗಢ (ಉತ್ತರ ಪ್ರದೇಶ) (ಪಿಟಿಐ):</strong> ಇಲ್ಲಿನ ಮುಸ್ಲಿಂ ಬಹುಸಂಖ್ಯಾತ ಪ್ರದೇಶದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿ ಪಾಳುಬಿದ್ದಿದ್ದ ಶಿವ ದೇವಾಲಯವನ್ನು ಬಲಪಂಥೀಯ ಸಂಘಟನೆಗಳ ಮುಖಂಡರು, ಕೆಲ ಸ್ಥಳೀಯ ಬಿಜೆಪಿ ನಾಯಕರು ಪುನಃ ತೆರೆದು, ಶುದ್ಧೀಕರಣ ಕಾರ್ಯಗಳನ್ನು ನೆರವೇರಿಸಿ ಹನುಮಾನ್ ಚಾಲೀಸ ಪಠಿಸಿದರು.</p>.<p>ಬಜರಂಗದಳ ಮತ್ತು ಅಖಿಲ ಭಾರತ ಕರ್ಣಿ ಸೇನಾ ಗುಂಪುಗಳು ಈ ಕಾರ್ಯಕ್ರಮ ಆಯೋಜಿಸಿದ್ದವು. ಕೆಲ ಸ್ಥಳೀಯರೂ ಇದರಲ್ಲಿ ಭಾಗಿಯಾಗಿದ್ದರು. ಸ್ಥಳದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು.</p>.<p>‘ಪೂಜಾ ಸ್ಥಳಗಳನ್ನು ಶೋಧಿಸುವ ವೇಳೆ ನಮ್ಮ ಸಂಘಟನೆಯ ಸದಸ್ಯರು ಈ ಶಿವ ಮಂದಿರವನ್ನು ಬುಧವಾರ ಗುರುತಿಸಿದರು’ ಎಂದು ಅಖಿಲ ಭಾರತ ಕರ್ಣಿ ಸೇನಾದ ರಾಜ್ಯ ಕಾರ್ಯದರ್ಶಿ ಜ್ಞಾನೆಂದ್ರ ಸಿಂಗ್ ಚೌಹಾಣ್ ತಿಳಿಸಿದರು.</p>.<p>ನಿರ್ವಹಣೆಯಿಲ್ಲದೆ ಸೊರಗಿದ್ದ ದೇವಾಲಯದ ಸ್ಥಿತಿ ಬಗ್ಗೆ ಅಲಿಗಢದ ಮಾಜಿ ಮೇಯರ್, ಬಿಜೆಪಿಯ ನಾಯಕರಾದ ಶಕುಂತಲಾ ಭಾರತಿ ಕಳವಳ ವ್ಯಕ್ತಪಡಿಸಿದರು.</p>.<p>‘ಈ ದೇವಾಲಯ ಶಿಥಿಲಾವಸ್ಥೆಯಲ್ಲಿದ್ದು, ಅದರ ಜಾಗ ಒತ್ತುವರಿಯಾಗಿದೆ. ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ಈ ಕುರಿತು ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ’ ಎಂದು ಅವರು ಹೇಳಿದರು.</p>.<p>‘ಒತ್ತುವರಿಯನ್ನು ತೆರವುಗೊಳಿಸಿ, ದೇಗುಲದಲ್ಲಿ ನಿಯಮಿತವಾಗಿ ಪೂಜಾ ಕಾರ್ಯಗಳು ನಡೆಯುವಂತೆ ಆಗಬೇಕು. ಅಲ್ಲದೆ ದೇವಾಲಯದ ಸುತ್ತಲಿನ ಜಾಗದ ಸಮೀಕ್ಷೆ ನಡೆಯಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ’ ಎಂದು ಅವರು ತಿಳಿಸಿದರು.</p>.<p>ದೇಗುಲಕ್ಕೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ಕಲ್ಪಿಸಲು ಸ್ಥಳೀಯ ನಿವಾಸಿ ಫತೇ ಮೊಹಮ್ಮದ್ ಎಂಬುವರು ನೆರವಾದರು. ಅವರ ಪ್ರಕಾರ, ಈ ದೇವಾಲಯ 50 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, ಸುಮಾರು ಐದು ವರ್ಷಗಳ ಹಿಂದಿನಿಂದ ದೇವಾಲಯದಲ್ಲಿ ಪೂಜಾ ಕಾರ್ಯಗಳು ನಿಂತಿವೆ.</p>.<p>‘ದೇವಾಲಯದ ಜೀರ್ಣೋದ್ಧಾರವನ್ನು ನಾವು ಬೆಂಬಲಿಸುತ್ತೇವೆ ಮತ್ತು ನಿರ್ವಹಣೆಗೆ ನೆರವು ನೀಡುತ್ತೇವೆ’ ಎಂದು ಮೊಹಮ್ಮದ್ ಪ್ರತಿಕ್ರಿಯಿಸಿದರು.</p>.<p>‘ಈ ಭಾಗದಲ್ಲಿನ ಜನದಟ್ಟಣೆ ಹೆಚ್ಚಾದ್ದರಿಂದ ಮತ್ತು ಮೂಲ ಸೌಕರ್ಯದ ಕೊರತೆ ಕಾರಣ ಕೆಲ ದಶಕಗಳಿಂದ ಹಿಂದೂಗಳು ಬೇರೆಡೆಗೆ ಸ್ಥಳಾಂತರವಾಗಿದ್ದಾರೆ. ಇಲ್ಲಿದ್ದ ಕೊನೆಯ ಹಿಂದೂ ಕುಟುಂಬ ನಮ್ಮದು. ನಮ್ಮ ಕುಟುಂಬ ಸಹ ದಶಕದ ಹಿಂದೆ ಇಲ್ಲಿಂದ ಸ್ಥಳಾಂತರವಾಯಿತು. ಐದು ವರ್ಷಗಳಿಂದ ಈ ದೇವಾಲಯದಲ್ಲಿ ಯಾವುದೇ ಪೂಜೆ ನಡೆದಿಲ್ಲ’ ಎಂದು ಸ್ಥಳೀಯ ನಿವಾಸಿ ಪ್ರದೀಪ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>