ಜೆಎಂಎಂ, ಕಾಂಗ್ರೆಸ್ ಹಾಗೂ ಆರ್ಜೆಡಿ ಪಕ್ಷಗಳ32 ಶಾಸಕರನ್ನು ಹೊತ್ತ ವಿಶೇಷ ವಿಮಾನವು ಸಂಜೆ 5.30ಕ್ಕೆ ರಾಯಪುರದ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣವನ್ನು ತಲುಪಿತು. ಶಾಸಕರು ಮೂರು ಬಸ್ಗಳಲ್ಲಿ ನವರಾಯಪುರ ಸಮೀಪದ ಮೇಫೇರ್ ಲೇಕ್ ರೆಸಾರ್ಟ್ಗೆ ಬಂದರು ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.
ಬಸ್ಗಳಿಗೆ ಬೆಂಗಾವಲು ವಾಹನಗಳು ಭದ್ರತೆ ಒದಗಿಸಿದ್ದವು.ರೆಸಾರ್ಟ್ ಸುತ್ತಮುತ್ತ ಬಿಗಿಭದ್ರತೆ ಒದಗಿಸಲಾಗಿದ್ದು, ಮಾಧ್ಯಮದವರಿಗೆ ಪ್ರವೇಶ ನಿರಾಕರಿಸಲಾಗಿದೆ.ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಶಾಸಕರನ್ನು ರಾಂಚಿ ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟು ವಾಪಸಾದರು.