<p><strong>ಪತ್ತನಂತಿಟ್ಟ (ಕೇರಳ):</strong> ತೀರ್ಥಯಾತ್ರೆ ಋತುವಿನಲ್ಲಿ ಶಬರಿಮಲೆ ಯಾತ್ರಿಗಳು ಪ್ರಯಾಣಿಸುವ ವಾಹನಗಳಿಗೆ ರಸ್ತೆ ಬದಿ ನೆರವು ನೀಡುವ ಸೇವೆಯನ್ನು ಕೇರಳ ಮೋಟಾರು ವಾಹನ ಇಲಾಖೆ (ಎಂವಿಡಿ) ಆರಂಭಿಸಿದ್ದಾಗಿ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.</p>.ಶಬರಿಮಲೆ ದರ್ಶನ: ಸ್ಥಳದಲ್ಲಿ ಬುಕಿಂಗ್ ಮಾಡಲು ದಿನಕ್ಕೆ 5 ಸಾವಿರ ಜನರಿಗಷ್ಟೇ ಅವಕಾಶ.<p>ಅಪಘಾತ, ಕೆಟ್ಟುಹೋದ ಅಥವಾ ಇನ್ನಿತರ ಯಾವುದೇ ತುರ್ತು ಸಂದರ್ಭದಲ್ಲಿ ಪತ್ತನಂತಿಟ್ಟ, ಕೋಟಯಂ ಹಾಗೂ ಇಡುಕ್ಕಿ ಜಿಲ್ಲೆಗಳ ರಸ್ತೆಯಲ್ಲಿ ಪ್ರಯಾಣಿಸುವಾಗ ಈ ಸೇವೆಯನ್ನು ಬಳಸಿಕೊಳ್ಳಬಹುದು ಎಂದು ಎಂವಿಡಿ ಹೇಳಿದೆ. ಇದಕ್ಕಾಗಿ ‘ಶಬರಿಮಲೆ ಸೇಫ್ ಝೋನ್ ಸಹಾಯವಾಣಿ’ಯನ್ನು ಆರಂಭಿಸಿದ್ದು, ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ.</p><p> ಎಳವುಂಕಲ್, ಎರುಮೇಲಿ ಹಾಗೂ ಕುಟ್ಟಿಕಾನಂನಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದ್ದು, ಯಾವುದೇ ಸಮಯದಲ್ಲಿ ತುರ್ತು ಸಹಾಯ ಪಡೆಯಬಹುದಾಗಿದೆ. ಕೆಟ್ಟು ಹೋದರೆ, ಕ್ರೇನ್ ಅಗತ್ಯ ಇದ್ದರೆ, ಆ್ಯಂಬುಲೆನ್ಸ್ ಸೇವೆ ಹಾಗೂ ಪ್ರಮುಖ ವಾಹನ ತಯಾರಕರಿಂದ ಸೇವೆಗಳು ಲಭ್ಯವಿರಲಿದೆ ಎಂದು ಎಂವಿಡಿ ಹೇಳಿದೆ.</p>.ಶಬರಿಮಲೆ: ಸರತಿಯಲ್ಲಿ ಲಕ್ಷಾಂತರ ಭಕ್ತರು, ನೀರು ಸಿಗದೆ ಪರದಾಟ .<p>ಶಬರಿಮಲೆಗೆ ಬರುವ ಯಾತ್ರಿಗಳಿಗೆ ಅಪಘಾತ ರಹಿತ ಸುರಕ್ಷಿತ ತೀರ್ಥಯಾತ್ರೆ ಅನುಭಯ ನೀಡಲು ಈ ಉಪಕ್ರಮ ಪರಿಚಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಶಬರಿಮಲೆ ಸೇಫ್ ಝೋನ್ ಸಹಾಯವಾಣಿ</p><p>ಎಳವುಂಕಲ್: 9400044991, 9562318181</p><p>ಎರುಮೇಲಿ: 9496367974, 8547639173</p><p>ಕುಟ್ಟಿಕಾನಂ: 9446037100, 8547639176</p><p>ಯಾವುದೇ ವಿಚಾರಣೆಗೆ safezonesabarimala@gmail.com ಮೂಲಕ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬಹುದು.</p>.Sabarimala | ಶಬರಿಮಲೆ ದೇವಾಲಯದಲ್ಲಿ ಜನದಟ್ಟಣೆ: ಹೈಕೋರ್ಟ್ ತರಾಟೆ
<p><strong>ಪತ್ತನಂತಿಟ್ಟ (ಕೇರಳ):</strong> ತೀರ್ಥಯಾತ್ರೆ ಋತುವಿನಲ್ಲಿ ಶಬರಿಮಲೆ ಯಾತ್ರಿಗಳು ಪ್ರಯಾಣಿಸುವ ವಾಹನಗಳಿಗೆ ರಸ್ತೆ ಬದಿ ನೆರವು ನೀಡುವ ಸೇವೆಯನ್ನು ಕೇರಳ ಮೋಟಾರು ವಾಹನ ಇಲಾಖೆ (ಎಂವಿಡಿ) ಆರಂಭಿಸಿದ್ದಾಗಿ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.</p>.ಶಬರಿಮಲೆ ದರ್ಶನ: ಸ್ಥಳದಲ್ಲಿ ಬುಕಿಂಗ್ ಮಾಡಲು ದಿನಕ್ಕೆ 5 ಸಾವಿರ ಜನರಿಗಷ್ಟೇ ಅವಕಾಶ.<p>ಅಪಘಾತ, ಕೆಟ್ಟುಹೋದ ಅಥವಾ ಇನ್ನಿತರ ಯಾವುದೇ ತುರ್ತು ಸಂದರ್ಭದಲ್ಲಿ ಪತ್ತನಂತಿಟ್ಟ, ಕೋಟಯಂ ಹಾಗೂ ಇಡುಕ್ಕಿ ಜಿಲ್ಲೆಗಳ ರಸ್ತೆಯಲ್ಲಿ ಪ್ರಯಾಣಿಸುವಾಗ ಈ ಸೇವೆಯನ್ನು ಬಳಸಿಕೊಳ್ಳಬಹುದು ಎಂದು ಎಂವಿಡಿ ಹೇಳಿದೆ. ಇದಕ್ಕಾಗಿ ‘ಶಬರಿಮಲೆ ಸೇಫ್ ಝೋನ್ ಸಹಾಯವಾಣಿ’ಯನ್ನು ಆರಂಭಿಸಿದ್ದು, ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ.</p><p> ಎಳವುಂಕಲ್, ಎರುಮೇಲಿ ಹಾಗೂ ಕುಟ್ಟಿಕಾನಂನಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದ್ದು, ಯಾವುದೇ ಸಮಯದಲ್ಲಿ ತುರ್ತು ಸಹಾಯ ಪಡೆಯಬಹುದಾಗಿದೆ. ಕೆಟ್ಟು ಹೋದರೆ, ಕ್ರೇನ್ ಅಗತ್ಯ ಇದ್ದರೆ, ಆ್ಯಂಬುಲೆನ್ಸ್ ಸೇವೆ ಹಾಗೂ ಪ್ರಮುಖ ವಾಹನ ತಯಾರಕರಿಂದ ಸೇವೆಗಳು ಲಭ್ಯವಿರಲಿದೆ ಎಂದು ಎಂವಿಡಿ ಹೇಳಿದೆ.</p>.ಶಬರಿಮಲೆ: ಸರತಿಯಲ್ಲಿ ಲಕ್ಷಾಂತರ ಭಕ್ತರು, ನೀರು ಸಿಗದೆ ಪರದಾಟ .<p>ಶಬರಿಮಲೆಗೆ ಬರುವ ಯಾತ್ರಿಗಳಿಗೆ ಅಪಘಾತ ರಹಿತ ಸುರಕ್ಷಿತ ತೀರ್ಥಯಾತ್ರೆ ಅನುಭಯ ನೀಡಲು ಈ ಉಪಕ್ರಮ ಪರಿಚಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಶಬರಿಮಲೆ ಸೇಫ್ ಝೋನ್ ಸಹಾಯವಾಣಿ</p><p>ಎಳವುಂಕಲ್: 9400044991, 9562318181</p><p>ಎರುಮೇಲಿ: 9496367974, 8547639173</p><p>ಕುಟ್ಟಿಕಾನಂ: 9446037100, 8547639176</p><p>ಯಾವುದೇ ವಿಚಾರಣೆಗೆ safezonesabarimala@gmail.com ಮೂಲಕ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬಹುದು.</p>.Sabarimala | ಶಬರಿಮಲೆ ದೇವಾಲಯದಲ್ಲಿ ಜನದಟ್ಟಣೆ: ಹೈಕೋರ್ಟ್ ತರಾಟೆ