‘ಶಿವಸೇನಾ ಎಂದಿಗೂ ಹಿಂದುತ್ವವನ್ನು ನಿರಾಕರಿಸಿಲ್ಲ. ಅದನ್ನು ಮರೆಯುವುದೂ ಇಲ್ಲ. ಹಿಂದುತ್ವ ಎಂಬುದು ಶಿವಸೇನಾದ ಆತ್ಮ. ಶಿವಸೇನಾವನ್ನು ಪ್ರಶ್ನಿಸಿದವರು ಈ ವಿಚಾರದ ಬಗ್ಗೆ ಸ್ವಯಂ ವಿಮರ್ಶಿಸಿಕೊಳ್ಳಲಿ. ಉದ್ಧವ್ ಠಾಕ್ರೆ ನೇತೃತ್ವದ ಮೂರು ಪಕ್ಷಗಳ ಮೈತ್ರಿಯ ರಾಜ್ಯ ಸರ್ಕಾರವು ಗಟ್ಟಿಯಾಗಿದೆ ಹಾಗೂ ನಿಯಮಗಳನ್ನು ಅನುಸರಿಸುತ್ತಿದೆ. ಸಂವಿಧಾನವನ್ನು ಪಾಲಿಸುತ್ತಿದೆ’ ಎಂದೂ ಅವರು ಹೇಳಿದ್ದಾರೆ.