<p><strong>ಫಿರೋಝಾಬಾದ್:</strong> ಉತ್ತರ ಪ್ರದೇಶದ ಫಿರೋಝಾಬಾದ್ ಬಳಿ ಪ್ರಾಚೀನ ದೇಗುಲಗಳು ಪತ್ತೆಯಾಗಿದ್ದು, ಪುರಾತತ್ವ ಇಲಾಖೆಯು ಉತ್ಖನನ ಆರಂಭಿಸಿದೆ.</p><p>ರಸಲ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಶ್ಮೀರಿ ಗೇಟ್ ಪ್ರದೇಶದ ಮೊಹಮ್ಮದಿ ಮಸೀದಿ ಬಳಿ ಎರಡು ಸ್ಥಳಗಳಲ್ಲಿ ಈ ದೇವಾಲಯಗಳು ಎರಡು ದಿನಗಳ ಹಿಂದೆ ಪತ್ತೆಯಾಗಿವೆ. ದೇವಾಲಯ ಪತ್ತೆಯಾದ ಸ್ಥಳದಲ್ಲಿ ಉತ್ಖನನ ನಡೆಸುವಂತೆ ಹಿಂದೂ ಪರ ಸಂಘಟನೆಗಳು ಒತ್ತಾಯಿಸಿದ ನಂತರ ಪೊಲೀಸ್ ಕಣ್ಗಾವಲಿನಲ್ಲಿ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಈ ಕುರಿತು ಮಾಹಿತಿ ನೀಡಿದ ಠಾಣಾಧಿಕಾರಿ ಅಂಜು ಕುಮಾರ್ ಸಿಂಗ್, ‘ಹಿಂದೂ ಸಂಘಟನೆಗಳ ಒತ್ತಾಯದ ನಂತರ ಮುಸ್ಲಿಂ ಸಂಘಟನೆಗಳ ಮುಖಂಡರನ್ನೂ ಸಂಪರ್ಕಿಸಿ ಶಾಂತಿ ಸಭೆ ನಡೆಸಲಾಯಿತು. ನಂತರ ಉತ್ಖನನ ಆರಂಭಿಸಲಾಗಿದೆ’ ಎಂದರು.</p><p>ಬಜರಂಗದಳದ ಜಿಲ್ಲಾಧ್ಯಕ್ಷ ಮೋಹನ್ ಬಜರಂಗಿ ಅವರು ಸ್ಥಳದಲ್ಲಿದ್ದು, ‘ದೇವಾಲಯದ ರಚನೆ ನೋಡಿದರೆ ಇದು ಶಿವನ ದೇಗುಲದಂತೆ ಕಾಣಿಸುತ್ತಿದೆ. ಉತ್ಖನನ ಪೂರ್ಣಗೊಂಡ ನಂತರವಷ್ಟೇ ಅಲ್ಲಿರುವ ಮೂರ್ತಿ ಹಾಗೂ ಗೋಚರಿಸುವ ಇನ್ನಿತರ ಕಲಾಕೃತಿಗಳಿಂದ ದೇಗುಲದ ಇನ್ನಷ್ಟು ಮಾಹಿತಿ ಸಿಗಲಿದೆ’ ಎಂದರು.</p><p>ಸ್ಥಳೀಯರಾದ ಅಕೀಲ್ ಅಹ್ಮದ್ ಅವರು ಮಾಹಿತಿ ನೀಡಿ, ‘60 ವರ್ಷಗಳ ಹಿಂದೆ ಈ ಕೃಷಿ ಭೂಮಿಯು ಹಿಂದೂ ಕುಟುಂಬಕ್ಕೆ ಸೇರಿದ್ದಾಗಿತ್ತು. ಈ ಪ್ರದೇಶದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಳವಾದಂತೆ ಹಿಂದೂ ಕುಟುಂಬಗಳು ಈ ಸ್ಥಳ ತೊರೆದಿರುವ ಸಾಧ್ಯತೆ ಇದೆ. ರಾಮಗಢ ಪೊಲೀಸ್ ಠಾಣೆ ವ್ಯಾಪ್ತಿಯ 60 ಅಡಿ ರಸ್ತೆಯಲ್ಲಿರುವ ಚಿಶ್ತಿ ನಗರದಲ್ಲೂ ಒಂದು ದೇವಾಲಯ ಪತ್ತೆಯಾಗಿತ್ತು’ ಎಂದಿದ್ದಾರೆ.</p><p>ರಾಮಗಢ ಠಾಣಾಧಿಕಾರಿ ಸಂಜೀವ್ ದುಬೇ ಅವರು ಮಾಹಿತಿ ನೀಡಿ, ‘50 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆಗ ಇಲ್ಲಿ ದೇವಾಲಯ ನಿರ್ಮಾಣವಾಗಿತ್ತು. ಈಗ ಈ ಪ್ರದೇಶದಲ್ಲಿ ಮುಸ್ಲಿಂ ಪ್ರಾಬಲ್ಯ ಹೆಚ್ಚಾಗಿದೆ. ಉತ್ಖನನ ಆರಂಭಗೊಂಡಿದೆ. ಜತೆಗೆ ಈ ಪ್ರದೇಶದಲ್ಲಿ ಎರಡೂ ಧರ್ಮದವರಲ್ಲಿ ಭಾಂದವ್ಯ ಉತ್ತಮವಾಗಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಫಿರೋಝಾಬಾದ್:</strong> ಉತ್ತರ ಪ್ರದೇಶದ ಫಿರೋಝಾಬಾದ್ ಬಳಿ ಪ್ರಾಚೀನ ದೇಗುಲಗಳು ಪತ್ತೆಯಾಗಿದ್ದು, ಪುರಾತತ್ವ ಇಲಾಖೆಯು ಉತ್ಖನನ ಆರಂಭಿಸಿದೆ.</p><p>ರಸಲ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಶ್ಮೀರಿ ಗೇಟ್ ಪ್ರದೇಶದ ಮೊಹಮ್ಮದಿ ಮಸೀದಿ ಬಳಿ ಎರಡು ಸ್ಥಳಗಳಲ್ಲಿ ಈ ದೇವಾಲಯಗಳು ಎರಡು ದಿನಗಳ ಹಿಂದೆ ಪತ್ತೆಯಾಗಿವೆ. ದೇವಾಲಯ ಪತ್ತೆಯಾದ ಸ್ಥಳದಲ್ಲಿ ಉತ್ಖನನ ನಡೆಸುವಂತೆ ಹಿಂದೂ ಪರ ಸಂಘಟನೆಗಳು ಒತ್ತಾಯಿಸಿದ ನಂತರ ಪೊಲೀಸ್ ಕಣ್ಗಾವಲಿನಲ್ಲಿ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಈ ಕುರಿತು ಮಾಹಿತಿ ನೀಡಿದ ಠಾಣಾಧಿಕಾರಿ ಅಂಜು ಕುಮಾರ್ ಸಿಂಗ್, ‘ಹಿಂದೂ ಸಂಘಟನೆಗಳ ಒತ್ತಾಯದ ನಂತರ ಮುಸ್ಲಿಂ ಸಂಘಟನೆಗಳ ಮುಖಂಡರನ್ನೂ ಸಂಪರ್ಕಿಸಿ ಶಾಂತಿ ಸಭೆ ನಡೆಸಲಾಯಿತು. ನಂತರ ಉತ್ಖನನ ಆರಂಭಿಸಲಾಗಿದೆ’ ಎಂದರು.</p><p>ಬಜರಂಗದಳದ ಜಿಲ್ಲಾಧ್ಯಕ್ಷ ಮೋಹನ್ ಬಜರಂಗಿ ಅವರು ಸ್ಥಳದಲ್ಲಿದ್ದು, ‘ದೇವಾಲಯದ ರಚನೆ ನೋಡಿದರೆ ಇದು ಶಿವನ ದೇಗುಲದಂತೆ ಕಾಣಿಸುತ್ತಿದೆ. ಉತ್ಖನನ ಪೂರ್ಣಗೊಂಡ ನಂತರವಷ್ಟೇ ಅಲ್ಲಿರುವ ಮೂರ್ತಿ ಹಾಗೂ ಗೋಚರಿಸುವ ಇನ್ನಿತರ ಕಲಾಕೃತಿಗಳಿಂದ ದೇಗುಲದ ಇನ್ನಷ್ಟು ಮಾಹಿತಿ ಸಿಗಲಿದೆ’ ಎಂದರು.</p><p>ಸ್ಥಳೀಯರಾದ ಅಕೀಲ್ ಅಹ್ಮದ್ ಅವರು ಮಾಹಿತಿ ನೀಡಿ, ‘60 ವರ್ಷಗಳ ಹಿಂದೆ ಈ ಕೃಷಿ ಭೂಮಿಯು ಹಿಂದೂ ಕುಟುಂಬಕ್ಕೆ ಸೇರಿದ್ದಾಗಿತ್ತು. ಈ ಪ್ರದೇಶದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಳವಾದಂತೆ ಹಿಂದೂ ಕುಟುಂಬಗಳು ಈ ಸ್ಥಳ ತೊರೆದಿರುವ ಸಾಧ್ಯತೆ ಇದೆ. ರಾಮಗಢ ಪೊಲೀಸ್ ಠಾಣೆ ವ್ಯಾಪ್ತಿಯ 60 ಅಡಿ ರಸ್ತೆಯಲ್ಲಿರುವ ಚಿಶ್ತಿ ನಗರದಲ್ಲೂ ಒಂದು ದೇವಾಲಯ ಪತ್ತೆಯಾಗಿತ್ತು’ ಎಂದಿದ್ದಾರೆ.</p><p>ರಾಮಗಢ ಠಾಣಾಧಿಕಾರಿ ಸಂಜೀವ್ ದುಬೇ ಅವರು ಮಾಹಿತಿ ನೀಡಿ, ‘50 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆಗ ಇಲ್ಲಿ ದೇವಾಲಯ ನಿರ್ಮಾಣವಾಗಿತ್ತು. ಈಗ ಈ ಪ್ರದೇಶದಲ್ಲಿ ಮುಸ್ಲಿಂ ಪ್ರಾಬಲ್ಯ ಹೆಚ್ಚಾಗಿದೆ. ಉತ್ಖನನ ಆರಂಭಗೊಂಡಿದೆ. ಜತೆಗೆ ಈ ಪ್ರದೇಶದಲ್ಲಿ ಎರಡೂ ಧರ್ಮದವರಲ್ಲಿ ಭಾಂದವ್ಯ ಉತ್ತಮವಾಗಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>