<p><strong>ಮುಂಬೈ</strong>: ಶಿವಸೇನಾ (ಯುಬಿಟಿ) ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಪಕ್ಷಗಳು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆಗೆ ಮೈತ್ರಿ ಮಾಡಿಕೊಳ್ಳಲಿವೆ ಎಂಬ ವದಂತಿಗಳ ನಡುವೆ ಎರಡೂ ಪಕ್ಷಗಳ ಮುಖ್ಯಸ್ಥರು ಬುಧವಾರ ಭೇಟಿಯಾಗಿದ್ದಾರೆ.</p><p>ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಹಾಗೂ ಶಿವಸೇನಾ (ಯುಬಿಟಿ) ಮುಖ್ಯಸ್ಥ ಯುದ್ಧವ್ ಠಾಕ್ರೆ ಅವರು ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ಅವರ ನಿವಾಸ 'ಶಿವತೀರ್ಥ'ದಲ್ಲಿ ಬುಧವಾರ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. 'ಶಿವತೀರ್ಥ' – ಮುಂಬೈನ ದಾದರ್ ಪ್ರದೇಶದಲ್ಲಿದೆ.</p><p>ವಿಶೇಷವೆಂದರೆ, ಕಾಂಗ್ರೆಸ್ ನಾಯಕರು ಸೋಮವಾರವಷ್ಟೇ ಉದ್ಧವ್ ಅವರನ್ನು ಭೇಟಿಯಾಗಿದ್ದರು. ಏತನ್ಮಧ್ಯೆ, ಸೇನಾ, ಎಂಎನ್ಎಸ್ ಮೈತ್ರಿ ವಿಚಾರ ಮುನ್ನಲೆಗೆ ಬಂದಿದೆ. ತನ್ನ ಮಿತ್ರ ಪಕ್ಷವಾಗಿರುವ ಸೇನಾದ ಮುಂದಿನ ನಡೆ ಕುರಿತು ಹೈಕಮಾಂಡ್ ಚರ್ಚಿಸಲಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.</p><p><strong>ಉದ್ಧವ್ ಮತ್ತೆ 'ಶಿವತೀರ್ಥ'ಕ್ಕೆ<br></strong>ಬಹು ಸಮಯದಿಂದ ಅಂತರ ಕಾಯ್ದುಕೊಂಡಿದ್ದ 'ಠಾಕ್ರೆ' ಸಹೋದರರು ಜುಲೈನಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಮರಾಠಿ ಭಾಷೆ, ರಾಜ್ಯದ ವಿಚಾರವಾಗಿ ಒಂದಾಗುತ್ತಿರುವುದಾಗಿ ಇಬ್ಬರೂ ಹೇಳಿಕೊಂಡಿದ್ದರು. ಹೀಗಾಗಿ, ಇವರಿಬ್ಬರ ಪಕ್ಷಗಳು ರಾಜಕೀಯವಾಗಿ ಒಂದಾಗಲಿವೆ ಎಂಬ ಚರ್ಚೆಗಳು ಬಿರುಸು ಪಡೆದುಕೊಂಡಿವೆ.</p><p>ಉದ್ಧವ್ ಅವರು ಕೆಲವೇ ದಿನಗಳ ಅಂತರದಲ್ಲಿ 'ಶಿವತೀರ್ಥ'ಕ್ಕೆ ನೀಡಿದ ಎರಡನೇ ಭೇಟಿ ಇದಾಗಿದೆ. ಗಣೇಶೋತ್ಸವ ಆಚರಣೆ ಸಲುವಾಗಿ ಉದ್ಧವ್ ಅವರು ಹದಿನೈದು ದಿನಗಳ ಹಿಂದಷ್ಟೇ ರಾಜ್ ಮನೆಗೆ ಹೋಗಿದ್ದರು.</p><p>ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಸೇನಾ ಸಂಸದ ಸಂಜಯ್ ರಾವುತ್, ಉದ್ಧವ್ ಅವರು ತಮ್ಮ ತಾಯಿಯ ಸಹೋದರಿ ಹಾಗೂ ರಾಜ್ ಅವರ ತಾಯಿ ಕುಂದಾ ಅವರನ್ನು ಭೇಟಿಯಾಗುವ ಸಲುವಾಗಿ 'ಶಿವತೀರ್ಥ'ಕ್ಕೆ ಹೋಗಿದ್ದಾರೆ. ಇದಕ್ಕೆ ರಾಜಕೀಯ ಅರ್ಥ ನೀಡಬೇಕಿಲ್ಲ ಎಂದಿದ್ದಾರೆ.</p>.ರಾಜ್ ಠಾಕ್ರೆ MNS ಜೊತೆ ಮೈತ್ರಿ: ರಾಜಕೀಯ ವಿದ್ಯಮಾನದ ಬಗ್ಗೆ ಉದ್ಧವ್ ಹೇಳಿದ್ದೇನು?.’ಮಹಾ’ ಮೈತ್ರಿ ಸುಳಿವು: ಮುನಿಸು ಮರೆತು ಒಂದಾಗುವರೇ ರಾಜ್–ಉದ್ಧವ್ ಠಾಕ್ರೆ ಸೋದರರು?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಶಿವಸೇನಾ (ಯುಬಿಟಿ) ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಪಕ್ಷಗಳು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆಗೆ ಮೈತ್ರಿ ಮಾಡಿಕೊಳ್ಳಲಿವೆ ಎಂಬ ವದಂತಿಗಳ ನಡುವೆ ಎರಡೂ ಪಕ್ಷಗಳ ಮುಖ್ಯಸ್ಥರು ಬುಧವಾರ ಭೇಟಿಯಾಗಿದ್ದಾರೆ.</p><p>ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಹಾಗೂ ಶಿವಸೇನಾ (ಯುಬಿಟಿ) ಮುಖ್ಯಸ್ಥ ಯುದ್ಧವ್ ಠಾಕ್ರೆ ಅವರು ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ಅವರ ನಿವಾಸ 'ಶಿವತೀರ್ಥ'ದಲ್ಲಿ ಬುಧವಾರ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. 'ಶಿವತೀರ್ಥ' – ಮುಂಬೈನ ದಾದರ್ ಪ್ರದೇಶದಲ್ಲಿದೆ.</p><p>ವಿಶೇಷವೆಂದರೆ, ಕಾಂಗ್ರೆಸ್ ನಾಯಕರು ಸೋಮವಾರವಷ್ಟೇ ಉದ್ಧವ್ ಅವರನ್ನು ಭೇಟಿಯಾಗಿದ್ದರು. ಏತನ್ಮಧ್ಯೆ, ಸೇನಾ, ಎಂಎನ್ಎಸ್ ಮೈತ್ರಿ ವಿಚಾರ ಮುನ್ನಲೆಗೆ ಬಂದಿದೆ. ತನ್ನ ಮಿತ್ರ ಪಕ್ಷವಾಗಿರುವ ಸೇನಾದ ಮುಂದಿನ ನಡೆ ಕುರಿತು ಹೈಕಮಾಂಡ್ ಚರ್ಚಿಸಲಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.</p><p><strong>ಉದ್ಧವ್ ಮತ್ತೆ 'ಶಿವತೀರ್ಥ'ಕ್ಕೆ<br></strong>ಬಹು ಸಮಯದಿಂದ ಅಂತರ ಕಾಯ್ದುಕೊಂಡಿದ್ದ 'ಠಾಕ್ರೆ' ಸಹೋದರರು ಜುಲೈನಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಮರಾಠಿ ಭಾಷೆ, ರಾಜ್ಯದ ವಿಚಾರವಾಗಿ ಒಂದಾಗುತ್ತಿರುವುದಾಗಿ ಇಬ್ಬರೂ ಹೇಳಿಕೊಂಡಿದ್ದರು. ಹೀಗಾಗಿ, ಇವರಿಬ್ಬರ ಪಕ್ಷಗಳು ರಾಜಕೀಯವಾಗಿ ಒಂದಾಗಲಿವೆ ಎಂಬ ಚರ್ಚೆಗಳು ಬಿರುಸು ಪಡೆದುಕೊಂಡಿವೆ.</p><p>ಉದ್ಧವ್ ಅವರು ಕೆಲವೇ ದಿನಗಳ ಅಂತರದಲ್ಲಿ 'ಶಿವತೀರ್ಥ'ಕ್ಕೆ ನೀಡಿದ ಎರಡನೇ ಭೇಟಿ ಇದಾಗಿದೆ. ಗಣೇಶೋತ್ಸವ ಆಚರಣೆ ಸಲುವಾಗಿ ಉದ್ಧವ್ ಅವರು ಹದಿನೈದು ದಿನಗಳ ಹಿಂದಷ್ಟೇ ರಾಜ್ ಮನೆಗೆ ಹೋಗಿದ್ದರು.</p><p>ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಸೇನಾ ಸಂಸದ ಸಂಜಯ್ ರಾವುತ್, ಉದ್ಧವ್ ಅವರು ತಮ್ಮ ತಾಯಿಯ ಸಹೋದರಿ ಹಾಗೂ ರಾಜ್ ಅವರ ತಾಯಿ ಕುಂದಾ ಅವರನ್ನು ಭೇಟಿಯಾಗುವ ಸಲುವಾಗಿ 'ಶಿವತೀರ್ಥ'ಕ್ಕೆ ಹೋಗಿದ್ದಾರೆ. ಇದಕ್ಕೆ ರಾಜಕೀಯ ಅರ್ಥ ನೀಡಬೇಕಿಲ್ಲ ಎಂದಿದ್ದಾರೆ.</p>.ರಾಜ್ ಠಾಕ್ರೆ MNS ಜೊತೆ ಮೈತ್ರಿ: ರಾಜಕೀಯ ವಿದ್ಯಮಾನದ ಬಗ್ಗೆ ಉದ್ಧವ್ ಹೇಳಿದ್ದೇನು?.’ಮಹಾ’ ಮೈತ್ರಿ ಸುಳಿವು: ಮುನಿಸು ಮರೆತು ಒಂದಾಗುವರೇ ರಾಜ್–ಉದ್ಧವ್ ಠಾಕ್ರೆ ಸೋದರರು?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>