ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ ನನ್ನ 15 ವರ್ಷದ ಸಂಸದೀಯ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಫಲಕ ಹಿಡಿದು ಸದನದ ಬಾವಿಗೆ ಇಳಿದಿದ್ದೆ‘ ಎಂದು ಸಂಸತ್ತಿನಿಂದ ಅಮಾನತುಗೊಳ್ಳುವ ಮುನ್ನ ತರೂರ್ ಹೇಳಿದ್ದಾರೆ.
ಮುಂದುವರಿದು, ಅಧಿವೇಶನದಲ್ಲಿ ವಿರೋಧ ಪಕ್ಷಗಳ ಸಂಸದರನ್ನು ಅನ್ಯಾಯದ ಕ್ರಮದಿಂದ ಒಬ್ಬರನ್ನು ಅನರ್ಹಗೊಳಿಸುವುದನ್ನು ಅವರು ಗೌರವದ ಸಂಕೇತ ಎಂದು ಭಾವಿಸಿದ್ದಾರೇ? ಎಂದು ಕಿಡಿಕಾರಿದ್ದಾರೆ.
ಸದನದಿಂದ ಹೊರಬಂದು ಮಾತನಾಡಿದ ತರೂರ್ ಅಮಾನತು ಕ್ರಮವನ್ನು ಏಕಪಕ್ಷೀಯ, ಅನ್ಯಾಯ ಹಾಗೂ ಸಂಸದೀಯ ಪ್ರಜಾಪ್ರಭುತ್ವದ ದ್ರೋಹ ಎಂದು ಆಕ್ರೋಶ ವ್ಯಕ್ತಡಿಸಿದ್ದಾರೆ.