ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Andhra Pradesh Politics: ವೈಎಸ್‌ಆರ್‌ಸಿಪಿ ತೊರೆದ ಶ್ರೀಕೃಷ್ಣ ದೇವರಾಯಲು

Published 23 ಜನವರಿ 2024, 13:06 IST
Last Updated 23 ಜನವರಿ 2024, 13:06 IST
ಅಕ್ಷರ ಗಾತ್ರ

ಅಮರಾವತಿ: ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‌ಆರ್‌ಸಿಪಿಯ ಸಂಸದ ಶ್ರೀಕೃಷ್ಣ ದೇವರಾಯಲು ಅವರು ಮಂಗಳವಾರ ಪಕ್ಷಕ್ಕೆ ಹಾಗೂ ಲೋಕಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

‘ಶೀಘ್ರದಲ್ಲೇ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಬೇರೆ ಕ್ಷೇತ್ರದಿಂದ ಕಣಕ್ಕೆ ಕಳಿಸಲು ಮುಖ್ಯಮಂತ್ರಿ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಆರು ತಿಂಗಳಿಂದ ಯೋಚಿಸುತ್ತಿದ್ದರು. 15 ದಿನಗಳ ಹಿಂದೆ ಇದು ಬಹಿರಂಗಗೊಂಡಿತು. ರಾಜೀನಾಮೆ ಮೂಲಕ ನಾನೇ ಇದಕ್ಕೆ ಇತಿಶ್ರೀ ಹಾಡಿರುವೆ. ನರಸರಾವ್‌ಪೇಟ ಕ್ಷೇತ್ರವನ್ನು ಬಿಟ್ಟು ನಾನು ಬೇರೆ ಕಡೆ ಹೋಗಲ್ಲ’ ಎಂದು ಅವರು ತಿಳಿಸಿದ್ದಾರೆ.

‘ಬೇರೆ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ಆಲೋಚಿಸಿಲ್ಲ. ಎಲ್ಲವನ್ನೂ ಸಮಯವೇ ನಿರ್ಧರಿಸಲಿದೆ’ ಎಂದು ಹೇಳಿದ್ದಾರೆ. ಮಚಲಿಪಟ್ಟಣಂನ ಸಂಸದ ಬಾಲಶೌರಿ ವಲ್ಲಭನೇನಿ ವೈಎಸ್‌ಆರ್‌ಸಿಪಿ ತೊರೆದ ಬೆನ್ನಲ್ಲೇ ದೇವರಾಯಲು ರಾಜೀನಾಮೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT