‘ಶೀಘ್ರದಲ್ಲೇ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಬೇರೆ ಕ್ಷೇತ್ರದಿಂದ ಕಣಕ್ಕೆ ಕಳಿಸಲು ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಆರು ತಿಂಗಳಿಂದ ಯೋಚಿಸುತ್ತಿದ್ದರು. 15 ದಿನಗಳ ಹಿಂದೆ ಇದು ಬಹಿರಂಗಗೊಂಡಿತು. ರಾಜೀನಾಮೆ ಮೂಲಕ ನಾನೇ ಇದಕ್ಕೆ ಇತಿಶ್ರೀ ಹಾಡಿರುವೆ. ನರಸರಾವ್ಪೇಟ ಕ್ಷೇತ್ರವನ್ನು ಬಿಟ್ಟು ನಾನು ಬೇರೆ ಕಡೆ ಹೋಗಲ್ಲ’ ಎಂದು ಅವರು ತಿಳಿಸಿದ್ದಾರೆ.