<p><strong>ಮೈಸೂರು: </strong>ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರಿಗೆ ಶಿವಮೊಗ್ಗ<br />ದಿಂದ ನ.28ರಂದು ಬೆದರಿಕೆ ಪತ್ರ ಬಂದಿದ್ದು, ಇಲ್ಲಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ಅವರು ಅಂದೇ ದೂರು ನೀಡಿದ್ದಾರೆ.</p>.<p>‘ಸಾಯುವ, ಕೊಲೆ ಆಗುವ ಹಂತ ತಲುಪಿದ್ದೀರ. ನೀವು ನಂಬಿರುವ ದೇವರು ಸಹ ಉಳಿಸುವುದಿಲ್ಲವೆಂದು<br />ಬೆದರಿಕೆ ಒಡ್ಡಿದ್ದಾರೆ. ಪತ್ರವು ಶ್ರೀರಾಂ, ಕೋಟ ರಸ್ತೆ, ಬ್ರಾಹ್ಮಣ ಬೀದಿ, ಶಿವಮೊಗ್ಗ ಜಿಲ್ಲೆ –ವಿಳಾಸದಿಂದ ಬಂದಿದೆ. ಅಲ್ಲಿಂದಲೇ ಇನ್ನೊಂದು ಅಂಚೆ ಕಾರ್ಡ್ ಕೂಡ ಬಂದಿದೆ. ಜೀವಹಾನಿಯಾಗುವ ಸಂಭವವಿರುವುದರಿಂದ ರಕ್ಷಣೆ ನೀಡಿ’ ಎಂದು ದೂರಿನಲ್ಲಿ ಕೋರಿದ್ದಾರೆ.</p>.<p>‘ಮಹೇಶಚಂದ್ರ ಗುರು ಅವರು ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸಿ, ಆ ವಿಡಿಯೊವನ್ನು ಪ್ರಸಾರ ಮಾಡುತ್ತಿದ್ದು, ಅದರಿಂದ ಪ್ರಚೋದನೆಗೊಂಡ ಕೆಲವರು ಕೂಡ ನಿಂದಿಸಲು ತೊಡಗಿದ್ದಾರೆ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರಿಗೆ ಶಿವಮೊಗ್ಗ<br />ದಿಂದ ನ.28ರಂದು ಬೆದರಿಕೆ ಪತ್ರ ಬಂದಿದ್ದು, ಇಲ್ಲಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ಅವರು ಅಂದೇ ದೂರು ನೀಡಿದ್ದಾರೆ.</p>.<p>‘ಸಾಯುವ, ಕೊಲೆ ಆಗುವ ಹಂತ ತಲುಪಿದ್ದೀರ. ನೀವು ನಂಬಿರುವ ದೇವರು ಸಹ ಉಳಿಸುವುದಿಲ್ಲವೆಂದು<br />ಬೆದರಿಕೆ ಒಡ್ಡಿದ್ದಾರೆ. ಪತ್ರವು ಶ್ರೀರಾಂ, ಕೋಟ ರಸ್ತೆ, ಬ್ರಾಹ್ಮಣ ಬೀದಿ, ಶಿವಮೊಗ್ಗ ಜಿಲ್ಲೆ –ವಿಳಾಸದಿಂದ ಬಂದಿದೆ. ಅಲ್ಲಿಂದಲೇ ಇನ್ನೊಂದು ಅಂಚೆ ಕಾರ್ಡ್ ಕೂಡ ಬಂದಿದೆ. ಜೀವಹಾನಿಯಾಗುವ ಸಂಭವವಿರುವುದರಿಂದ ರಕ್ಷಣೆ ನೀಡಿ’ ಎಂದು ದೂರಿನಲ್ಲಿ ಕೋರಿದ್ದಾರೆ.</p>.<p>‘ಮಹೇಶಚಂದ್ರ ಗುರು ಅವರು ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸಿ, ಆ ವಿಡಿಯೊವನ್ನು ಪ್ರಸಾರ ಮಾಡುತ್ತಿದ್ದು, ಅದರಿಂದ ಪ್ರಚೋದನೆಗೊಂಡ ಕೆಲವರು ಕೂಡ ನಿಂದಿಸಲು ತೊಡಗಿದ್ದಾರೆ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>