<p><strong>ಬೆಂಗಳೂರು</strong>: ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯು ಜಿಎಸ್ಟಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ನೀಡುವಲ್ಲಿ ಭಾರಿ ಲೋಪವಾಗಿದ್ದು, ₹1,143.58 ಕೋಟಿಯಷ್ಟು ಲೆಕ್ಕ ಸಿಗುತ್ತಿಲ್ಲ ಎಂದು ಭಾರತದ ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.</p>.<p>ಮಂಗಳವಾರ ಮಂಡಿಸಲಾದ ‘ರಾಜ್ಯ ಕಂದಾಯ ವರದಿ–2023ರ ಮಾರ್ಚ್’ರಲ್ಲಿ ಸಿಎಜಿ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.</p>.<p>‘ಜಿಎಸ್ಟಿ ಪಾವತಿದಾರರು, ತಾವು ಪಾವತಿಸುವ ಜಿಎಸ್ಟಿಗೆ ಐಟಿಸಿ ಪಡೆಯುತ್ತಿದ್ದಾರೆ. ಆದರೆ ಇದರಲ್ಲಿ ಜಿಎಸ್ಟಿ ಇನ್ವಾಯ್ಸ್ಗಳು ತಾಳೆಯಾಗದೇ ಇರುವ ಬಗ್ಗೆ ಅನುಮಾನಗಳಿದ್ದವು. ಈ ಸಂದೇಹಗಳನ್ನು ಪರಿಹರಿಸಿಕೊಳ್ಳುವ ಸಲುವಾಗಿ, ಅತ್ಯಂತ ದೊಡ್ಡ ಮೊತ್ತದ ವರ್ಗಾವಣೆ ನಡೆದಿದ್ದ 699 ಐಟಿಸಿ ಪ್ರಕರಣಗಳನ್ನು ಪರಿಶೀಲಿಸಲು ನಿರ್ಧರಿಸಲಾಗಿತ್ತು. ಆದರೆ ವಾಣಿಜ್ಯ ತೆರಿಗೆ ಇಲಾಖೆಯು 679 ಪ್ರಕರಣಗಳ ಮಾಹಿತಿಯನ್ನಷ್ಟೇ ಸಲ್ಲಿಸಿತು’ ಎಂದು ಸಿಎಜಿ ತನ್ನ ವರದಿಯಲ್ಲಿ ಹೇಳಿದೆ.</p>.<p>‘ಈ 679ರ ಪೈಕಿ 232 ಪ್ರಕರಣಗಳಲ್ಲಿ ಐಟಿಸಿ ಕ್ಲೇಮು ಮಾಡಿದ್ದವರು ತಮ್ಮ ಇನ್ವಾಯ್ಸ್ಗಳಲ್ಲಿ ಉಲ್ಲೇಖಿಸಿದ್ದ ವ್ಯಾಪಾರಿಗಳ (ವೆಂಡರ್) ಜಿಎಸ್ಟಿ ಕಡತಗಳನ್ನು ಪರಿಶೀಲಿಸಲಾಯಿತು. ಕ್ಲೇಮು ಮಾಡಲಾದ ಐಟಿಸಿ ಪ್ರಕರಣಗಳಲ್ಲಿ ಈ ವ್ಯಾಪಾರಿಗಳು ಜಿಎಸ್ಟಿಯನ್ನು ಪಾವತಿಸಿಯೇ ಇಲ್ಲ ಎಂಬುದು ಗೊತ್ತಾಯಿತು. ಅದನ್ನು ವಸೂಲಿ ಮಾಡಲೂ ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ’ ಎಂದು ವಿವರಿಸಿದೆ.</p>.<p>‘ಸರ್ಕಾರಕ್ಕೆ ಜಿಎಸ್ಟಿ ಪಾವತಿಯಾಗದೇ ಇದ್ದರೂ, ₹1,143.58 ಕೋಟಿಯಷ್ಟು ಐಟಿಸಿ ಕ್ಲೇಮುಗಳನ್ನು ಮಂಜೂರು ಮಾಡಲಾಗಿದೆ. ವ್ಯಾಪಾರಿಗಳು ತೆರಿಗೆ ವಂಚಿಸಿರುವುದು ಮಾತ್ರವಲ್ಲದೆ, ಐಟಿಸಿ ಕ್ಲೇಮು ಪಡೆದಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟವಾಗಿದೆ. ಈ ಹಣ ಎಲ್ಲಿ ಹೋಗಿದೆ ಎಂಬುದಕ್ಕೆ ಲೆಕ್ಕವೇ ಇಲ್ಲ’ ಎಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯು ಜಿಎಸ್ಟಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ನೀಡುವಲ್ಲಿ ಭಾರಿ ಲೋಪವಾಗಿದ್ದು, ₹1,143.58 ಕೋಟಿಯಷ್ಟು ಲೆಕ್ಕ ಸಿಗುತ್ತಿಲ್ಲ ಎಂದು ಭಾರತದ ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.</p>.<p>ಮಂಗಳವಾರ ಮಂಡಿಸಲಾದ ‘ರಾಜ್ಯ ಕಂದಾಯ ವರದಿ–2023ರ ಮಾರ್ಚ್’ರಲ್ಲಿ ಸಿಎಜಿ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.</p>.<p>‘ಜಿಎಸ್ಟಿ ಪಾವತಿದಾರರು, ತಾವು ಪಾವತಿಸುವ ಜಿಎಸ್ಟಿಗೆ ಐಟಿಸಿ ಪಡೆಯುತ್ತಿದ್ದಾರೆ. ಆದರೆ ಇದರಲ್ಲಿ ಜಿಎಸ್ಟಿ ಇನ್ವಾಯ್ಸ್ಗಳು ತಾಳೆಯಾಗದೇ ಇರುವ ಬಗ್ಗೆ ಅನುಮಾನಗಳಿದ್ದವು. ಈ ಸಂದೇಹಗಳನ್ನು ಪರಿಹರಿಸಿಕೊಳ್ಳುವ ಸಲುವಾಗಿ, ಅತ್ಯಂತ ದೊಡ್ಡ ಮೊತ್ತದ ವರ್ಗಾವಣೆ ನಡೆದಿದ್ದ 699 ಐಟಿಸಿ ಪ್ರಕರಣಗಳನ್ನು ಪರಿಶೀಲಿಸಲು ನಿರ್ಧರಿಸಲಾಗಿತ್ತು. ಆದರೆ ವಾಣಿಜ್ಯ ತೆರಿಗೆ ಇಲಾಖೆಯು 679 ಪ್ರಕರಣಗಳ ಮಾಹಿತಿಯನ್ನಷ್ಟೇ ಸಲ್ಲಿಸಿತು’ ಎಂದು ಸಿಎಜಿ ತನ್ನ ವರದಿಯಲ್ಲಿ ಹೇಳಿದೆ.</p>.<p>‘ಈ 679ರ ಪೈಕಿ 232 ಪ್ರಕರಣಗಳಲ್ಲಿ ಐಟಿಸಿ ಕ್ಲೇಮು ಮಾಡಿದ್ದವರು ತಮ್ಮ ಇನ್ವಾಯ್ಸ್ಗಳಲ್ಲಿ ಉಲ್ಲೇಖಿಸಿದ್ದ ವ್ಯಾಪಾರಿಗಳ (ವೆಂಡರ್) ಜಿಎಸ್ಟಿ ಕಡತಗಳನ್ನು ಪರಿಶೀಲಿಸಲಾಯಿತು. ಕ್ಲೇಮು ಮಾಡಲಾದ ಐಟಿಸಿ ಪ್ರಕರಣಗಳಲ್ಲಿ ಈ ವ್ಯಾಪಾರಿಗಳು ಜಿಎಸ್ಟಿಯನ್ನು ಪಾವತಿಸಿಯೇ ಇಲ್ಲ ಎಂಬುದು ಗೊತ್ತಾಯಿತು. ಅದನ್ನು ವಸೂಲಿ ಮಾಡಲೂ ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ’ ಎಂದು ವಿವರಿಸಿದೆ.</p>.<p>‘ಸರ್ಕಾರಕ್ಕೆ ಜಿಎಸ್ಟಿ ಪಾವತಿಯಾಗದೇ ಇದ್ದರೂ, ₹1,143.58 ಕೋಟಿಯಷ್ಟು ಐಟಿಸಿ ಕ್ಲೇಮುಗಳನ್ನು ಮಂಜೂರು ಮಾಡಲಾಗಿದೆ. ವ್ಯಾಪಾರಿಗಳು ತೆರಿಗೆ ವಂಚಿಸಿರುವುದು ಮಾತ್ರವಲ್ಲದೆ, ಐಟಿಸಿ ಕ್ಲೇಮು ಪಡೆದಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟವಾಗಿದೆ. ಈ ಹಣ ಎಲ್ಲಿ ಹೋಗಿದೆ ಎಂಬುದಕ್ಕೆ ಲೆಕ್ಕವೇ ಇಲ್ಲ’ ಎಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>