ಮಂಗಳೂರು ಗಲಭೆ ಉಲ್ಲೇಖಿಸಿ ಮಾತನಾಡಿದ ಅವರು,‘ಕೆಲವರು ಕಲ್ಲಲ್ಲಿ ಹೊಡೆದಿದ್ದನ್ನು ಪೊಲೀಸ್ ಕಮಿಷನರ್ ಭಾಸ್ಕರರಾವ್ಗೆ ಹೇಳಿದ್ದೇವೆ ಎಂದು ಸಿಎಎ ಪರವಾಗಿ ಬೆಂಗಳೂರಿನ ಟೌನ್ ಹಾಲ್ ಮುಂದೆ ಈಚೆಗೆ ರ್ಯಾಲಿ ಮಾಡಿದ ಗುಂಪು ಹೇಳಿದೆ. ಏಳು ಕಲ್ಲು ಬಿದ್ದಿವೆ ಎಂದು ಕಮಿಷನರ್ ಹೇಳಿದ್ದಾರೆ. ಈವರೆಗೆ ಯಾಕೆ ಈ ವಿಷಯ ಹೇಳಿರಲಿಲ್ಲ. ಒಂದು ವರ್ಗವನ್ನು ಒಲೈಸಲು ಅಮಾಯಕರನ್ನು ಬಲಿ ಹಾಕುವ ವಾತಾವರಣ ಸೃಷ್ಟಿಸಬಾರದು. ಜನರಲ್ಲಿ ವೈಷಮ್ಯ ಉಂಟು ಮಾಡಿ ದೇಶದಲ್ಲಿ ಬೆಂಕಿ ಹಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ಆ ಕೆಲಸ ಮಾಡಬಾರದು’ ಎಂದು ಉತ್ತರಿಸಿದರು.