<p><strong>ಕಲಬುರಗಿ:</strong> ಮಹಾರಾಷ್ಟ್ರದ ಅಕ್ಕಲಕೋಟದ ಶಿಕ್ಷಕ ದಾನಯ್ಯ ಕೌಟಗಿಮಠ ಅವರು ಸಾಮಾಜಿಕ ಮಾಧ್ಯಮದ ಮೂಲಕ ಪಾಠ ಮಾಡಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ನೆರವಾಗಿದ್ದಾರೆ. ಈ ಮೂಲಕ ‘ಕನ್ನಡ ಭಾಷಾ ಪ್ರೇಮ’ ಮೆರೆಯುತ್ತಿದ್ದಾರೆ.</p><p>ಸೊಲ್ಲಾಪುರ ಜಿಲ್ಲೆಯ ಅಕ್ಕಲ ಕೋಟದ ಕೆ.ಎಲ್.ಇ. ಮಂಗರುಳೆ ಹೈಸ್ಕೂಲ್ನಲ್ಲಿ ದಾನಯ್ಯ ಶಿಕ್ಷಕ<br>ರಾಗಿದ್ದಾರೆ. ಅವರ ಮಾರ್ಗದರ್ಶನ ಪಡೆದ 309 ವಿದ್ಯಾರ್ಥಿಗಳು, ಇದೇ ನವೆಂಬರ್ 21ರಂದು ನಡೆದ ಕರ್ನಾಟಕ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆ (ಕೆ–ಸೆಟ್)–2025ರಲ್ಲಿ ಉತ್ತೀರ್ಣರಾಗಿದ್ದಾರೆ.</p><p>ಸ್ವತಃ ದಾನಯ್ಯ ಕೌಟಗಿಮಠ, ದೇಶದ ವಿವಿಧ ರಾಜ್ಯಗಳಲ್ಲಿನ ಸೆಟ್, ನೆಟ್, ಟಿಇಟಿ ಮತ್ತಿತರ ಅರ್ಹತಾ ಪರೀಕ್ಷೆ ಗಳಲ್ಲಿ ಒಟ್ಟು 79 ಬಾರಿ ಉತ್ತೀರ್ಣ ರಾಗಿದ್ದಾರೆ. ಸಾಮಾನ್ಯ ವಿದ್ಯಾರ್ಥಿ ಕೂಡ ಕೆ–ಸೆಟ್ ಉತ್ತೀರ್ಣನಾಗಬೇಕು ಎಂದು ಸಂಕಲ್ಪ ಮಾಡಿ, ಯೂಟ್ಯೂಬ್ ಚಾನೆಲ್ ಮೂಲಕ ಈ ಬಾರಿಯಕೆ–ಸೆಟ್ ಪರೀಕ್ಷಾಂಕ್ಷಿಗಳಿಗೆ ಮಾರ್ಗ ದರ್ಶನ ನೀಡಿದ್ದರು.</p><p>ಬಡ ಕುಟುಂಬಗಳ ವಿದ್ಯಾರ್ಥಿಗಳು, ಕಾರ್ಮಿಕರು, ಗುಮಾಸ್ತರು, ಭದ್ರತಾ ಸಿಬ್ಬಂದಿ, ಪೆಟ್ರೋಲ್ ಬಂಕ್ ನೌಕರರು, ಮಹಿಳೆಯರು, ವಿಶೇಷ ಚೇತನರು ಸೇರಿದಂತೆ ಹಲವರು ಹೀಗೆ ಮಾರ್ಗದರ್ಶನ ಪಡೆದು ಕೆ–ಸೆಟ್ ಉತ್ತಿರ್ಣರಾಗಿದ್ದಾರೆ.</p><p>‘ನಾನು ಮೈಸೂರು ಸ್ಯಾಂಡಲ್ ಫ್ಯಾಕ್ಟರಿಯಲ್ಲಿ ರಾತ್ರಿ ಪಾಳಿಯಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದೇನೆ. ದಾನಯ್ಯ ಕೌಟಗಿಮಠ ಸರ್ ವಿಡಿಯೊಗಳನ್ನು ನೋಡಿ ಪ್ರೇರಣೆ ಸಿಕ್ಕಿತು. ಹಠಕ್ಕೆ ಬಿದ್ದು ಓದಿ ಕೆ–ಸೆಟ್ ಪಾಸ್ ಆಗಿದ್ದೇನೆ’ ಎಂದು ಮೈಸೂರಿನ ರೇವಣ ಸಿದ್ದಪ್ಪ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.</p><p>ಮಹಾರಾಷ್ಟ್ರದ ಅಕ್ಕಲಕೋಟ, ಸೊಲ್ಲಾಪುರ, ಸಾಂಗ್ಲಿ ನಗರಗಳಲ್ಲಿ ಮಾತ್ರವಲ್ಲದೇ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು, ಕರ್ನಾಟಕದ ಬಹುತೇಕ ಜಿಲ್ಲೆಗಳ ವಿದ್ಯಾರ್ಥಿಗಳು ಇವರ ಉಪನ್ಯಾಸಗಳ ಲಾಭ ಪಡೆದುಕೊಂಡಿದ್ದಾರೆ. ಯೂಟ್ಯೂಬ್ನಲ್ಲಿ ಪ್ರಸ್ತುತ 52 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ದಾನಯ್ಯ ಅವರ ಉಪನ್ಯಾಸಗಳನ್ನು ಅನುಸರಿಸುತ್ತಿದ್ದಾರೆ.</p><p><strong>‘ಭಾಷಾ ಪ್ರೇಮವೇ ಕಾರಣ’</strong></p><p>‘ನಾನು ಗಡಿನಾಡು ಕನ್ನಡಿಗ. ಹೊರನಾಡಿನಲ್ಲಿ ಉದ್ಯೋಗ ಸಿಕ್ಕಿತು. ಕನ್ನಡ ಭಾಷಾ ಶಿಕ್ಷಕನಾಗಿದ್ದು, ಮಾತೃಭಾಷೆ ಕೂಡಾ ಕನ್ನಡ. ಕನ್ನಡ ಮಾಧ್ಯಮದಲ್ಲಿಯೇ ನಾನು ಓದಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಹೆಚ್ಚು ಉತ್ತೀರ್ಣರಾಗಲಿ ಎಂಬ ಉದ್ದೇಶದಿಂದ ಈ ಕೆಲಸ ಮಾಡುತ್ತಿದ್ದೇನೆ. ಕನ್ನಡ ಭಾಷಾ ಪ್ರೇಮವೇ ಅದಕ್ಕೆ ಕಾರಣ’ ಎಂದು ದಾನಯ್ಯ ಕೌಟಗಿಮಠ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<div><blockquote>ಕೌಟಗಿಮಠ ಸರ್ ವಿಡಿಯೊಗಳನ್ನು ನಾನು ನಿತ್ಯ ವೀಕ್ಷಿಸಿ, ನೋಟ್ಸ್ ಮಾಡಿಕೊಂಡೆ. ಅದರ ಫಲವಾಗಿ ನಾನು ಕೆ–ಸೆಟ್ ಉತ್ತೀರ್ಣನಾಗಿದ್ದೇನೆ</blockquote><span class="attribution">ಅರುಣ, ಪೆಟ್ರೋಲ್ ಪಂಪ್ ನೌಕರ, ಬೆಂಗಳೂರು </span></div>.<div><blockquote>ದಾನಯ್ಯ ಸರ್ ವಿಡಿಯೊಗಳನ್ನು ನಿಯಮಿತವಾಗಿ ನೋಡುತ್ತಿದ್ದೆ. ಆತ್ಮವಿಶ್ವಾಸ ಹೆಚ್ಚಾಯಿತು. ಮೂರನೇ ಪ್ರಯತ್ನದಲ್ಲಿಯೇ ಕೆ–ಸೆಟ್ನಲ್ಲಿ ಉತ್ತೀರ್ಣಳಾಗಿದ್ದೇನೆ</blockquote><span class="attribution">ಜ್ಯೋತಿ, ವಿಶೇಷಚೇತನ ವಿದ್ಯಾರ್ಥಿನಿ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಮಹಾರಾಷ್ಟ್ರದ ಅಕ್ಕಲಕೋಟದ ಶಿಕ್ಷಕ ದಾನಯ್ಯ ಕೌಟಗಿಮಠ ಅವರು ಸಾಮಾಜಿಕ ಮಾಧ್ಯಮದ ಮೂಲಕ ಪಾಠ ಮಾಡಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ನೆರವಾಗಿದ್ದಾರೆ. ಈ ಮೂಲಕ ‘ಕನ್ನಡ ಭಾಷಾ ಪ್ರೇಮ’ ಮೆರೆಯುತ್ತಿದ್ದಾರೆ.</p><p>ಸೊಲ್ಲಾಪುರ ಜಿಲ್ಲೆಯ ಅಕ್ಕಲ ಕೋಟದ ಕೆ.ಎಲ್.ಇ. ಮಂಗರುಳೆ ಹೈಸ್ಕೂಲ್ನಲ್ಲಿ ದಾನಯ್ಯ ಶಿಕ್ಷಕ<br>ರಾಗಿದ್ದಾರೆ. ಅವರ ಮಾರ್ಗದರ್ಶನ ಪಡೆದ 309 ವಿದ್ಯಾರ್ಥಿಗಳು, ಇದೇ ನವೆಂಬರ್ 21ರಂದು ನಡೆದ ಕರ್ನಾಟಕ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆ (ಕೆ–ಸೆಟ್)–2025ರಲ್ಲಿ ಉತ್ತೀರ್ಣರಾಗಿದ್ದಾರೆ.</p><p>ಸ್ವತಃ ದಾನಯ್ಯ ಕೌಟಗಿಮಠ, ದೇಶದ ವಿವಿಧ ರಾಜ್ಯಗಳಲ್ಲಿನ ಸೆಟ್, ನೆಟ್, ಟಿಇಟಿ ಮತ್ತಿತರ ಅರ್ಹತಾ ಪರೀಕ್ಷೆ ಗಳಲ್ಲಿ ಒಟ್ಟು 79 ಬಾರಿ ಉತ್ತೀರ್ಣ ರಾಗಿದ್ದಾರೆ. ಸಾಮಾನ್ಯ ವಿದ್ಯಾರ್ಥಿ ಕೂಡ ಕೆ–ಸೆಟ್ ಉತ್ತೀರ್ಣನಾಗಬೇಕು ಎಂದು ಸಂಕಲ್ಪ ಮಾಡಿ, ಯೂಟ್ಯೂಬ್ ಚಾನೆಲ್ ಮೂಲಕ ಈ ಬಾರಿಯಕೆ–ಸೆಟ್ ಪರೀಕ್ಷಾಂಕ್ಷಿಗಳಿಗೆ ಮಾರ್ಗ ದರ್ಶನ ನೀಡಿದ್ದರು.</p><p>ಬಡ ಕುಟುಂಬಗಳ ವಿದ್ಯಾರ್ಥಿಗಳು, ಕಾರ್ಮಿಕರು, ಗುಮಾಸ್ತರು, ಭದ್ರತಾ ಸಿಬ್ಬಂದಿ, ಪೆಟ್ರೋಲ್ ಬಂಕ್ ನೌಕರರು, ಮಹಿಳೆಯರು, ವಿಶೇಷ ಚೇತನರು ಸೇರಿದಂತೆ ಹಲವರು ಹೀಗೆ ಮಾರ್ಗದರ್ಶನ ಪಡೆದು ಕೆ–ಸೆಟ್ ಉತ್ತಿರ್ಣರಾಗಿದ್ದಾರೆ.</p><p>‘ನಾನು ಮೈಸೂರು ಸ್ಯಾಂಡಲ್ ಫ್ಯಾಕ್ಟರಿಯಲ್ಲಿ ರಾತ್ರಿ ಪಾಳಿಯಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದೇನೆ. ದಾನಯ್ಯ ಕೌಟಗಿಮಠ ಸರ್ ವಿಡಿಯೊಗಳನ್ನು ನೋಡಿ ಪ್ರೇರಣೆ ಸಿಕ್ಕಿತು. ಹಠಕ್ಕೆ ಬಿದ್ದು ಓದಿ ಕೆ–ಸೆಟ್ ಪಾಸ್ ಆಗಿದ್ದೇನೆ’ ಎಂದು ಮೈಸೂರಿನ ರೇವಣ ಸಿದ್ದಪ್ಪ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.</p><p>ಮಹಾರಾಷ್ಟ್ರದ ಅಕ್ಕಲಕೋಟ, ಸೊಲ್ಲಾಪುರ, ಸಾಂಗ್ಲಿ ನಗರಗಳಲ್ಲಿ ಮಾತ್ರವಲ್ಲದೇ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು, ಕರ್ನಾಟಕದ ಬಹುತೇಕ ಜಿಲ್ಲೆಗಳ ವಿದ್ಯಾರ್ಥಿಗಳು ಇವರ ಉಪನ್ಯಾಸಗಳ ಲಾಭ ಪಡೆದುಕೊಂಡಿದ್ದಾರೆ. ಯೂಟ್ಯೂಬ್ನಲ್ಲಿ ಪ್ರಸ್ತುತ 52 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ದಾನಯ್ಯ ಅವರ ಉಪನ್ಯಾಸಗಳನ್ನು ಅನುಸರಿಸುತ್ತಿದ್ದಾರೆ.</p><p><strong>‘ಭಾಷಾ ಪ್ರೇಮವೇ ಕಾರಣ’</strong></p><p>‘ನಾನು ಗಡಿನಾಡು ಕನ್ನಡಿಗ. ಹೊರನಾಡಿನಲ್ಲಿ ಉದ್ಯೋಗ ಸಿಕ್ಕಿತು. ಕನ್ನಡ ಭಾಷಾ ಶಿಕ್ಷಕನಾಗಿದ್ದು, ಮಾತೃಭಾಷೆ ಕೂಡಾ ಕನ್ನಡ. ಕನ್ನಡ ಮಾಧ್ಯಮದಲ್ಲಿಯೇ ನಾನು ಓದಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಹೆಚ್ಚು ಉತ್ತೀರ್ಣರಾಗಲಿ ಎಂಬ ಉದ್ದೇಶದಿಂದ ಈ ಕೆಲಸ ಮಾಡುತ್ತಿದ್ದೇನೆ. ಕನ್ನಡ ಭಾಷಾ ಪ್ರೇಮವೇ ಅದಕ್ಕೆ ಕಾರಣ’ ಎಂದು ದಾನಯ್ಯ ಕೌಟಗಿಮಠ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<div><blockquote>ಕೌಟಗಿಮಠ ಸರ್ ವಿಡಿಯೊಗಳನ್ನು ನಾನು ನಿತ್ಯ ವೀಕ್ಷಿಸಿ, ನೋಟ್ಸ್ ಮಾಡಿಕೊಂಡೆ. ಅದರ ಫಲವಾಗಿ ನಾನು ಕೆ–ಸೆಟ್ ಉತ್ತೀರ್ಣನಾಗಿದ್ದೇನೆ</blockquote><span class="attribution">ಅರುಣ, ಪೆಟ್ರೋಲ್ ಪಂಪ್ ನೌಕರ, ಬೆಂಗಳೂರು </span></div>.<div><blockquote>ದಾನಯ್ಯ ಸರ್ ವಿಡಿಯೊಗಳನ್ನು ನಿಯಮಿತವಾಗಿ ನೋಡುತ್ತಿದ್ದೆ. ಆತ್ಮವಿಶ್ವಾಸ ಹೆಚ್ಚಾಯಿತು. ಮೂರನೇ ಪ್ರಯತ್ನದಲ್ಲಿಯೇ ಕೆ–ಸೆಟ್ನಲ್ಲಿ ಉತ್ತೀರ್ಣಳಾಗಿದ್ದೇನೆ</blockquote><span class="attribution">ಜ್ಯೋತಿ, ವಿಶೇಷಚೇತನ ವಿದ್ಯಾರ್ಥಿನಿ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>