<figcaption>""</figcaption>.<p><strong>ಬೆಂಗಳೂರು:</strong> ಮಹಾ ಮಳೆ, ಪ್ರವಾಹಕ್ಕೆ ನೆಲಕಚ್ಚಿದ ಮನೆಗಳು, ಕುಸಿದ ಗುಡ್ಡಗಳು, ಮುಳುಗಿದ ಸೇತುವೆಗಳು, ಕಂಗಾಲಾದ ಸಂತ್ರಸ್ತರು, ಸಾಂತ್ವನ ಹೇಳುವ ಸಚಿವರು, ನಿಯಮಗಳನ್ನು ಮುಂದಿಡುವ ಅಧಿಕಾರಿಗಳು, ಕಂತುಗಳಲ್ಲಿ ಬಿಡುಗಡೆಯಾಗುವ ಅರ್ಧಂಬರ್ಧ ಪರಿಹಾರ.... ಇವೆಲ್ಲವೂ ನೆರೆ, ನಂತರದ ದಿನಗಳಲ್ಲಿ ಕಾಣಸಿಗುವ ಮಾಮೂಲಿ ಚಿತ್ರಣ ಎಂಬಂತಾಗಿದೆ.</p>.<p>ರಾಜ್ಯದ 12 ಜಿಲ್ಲೆಗಳಲ್ಲಿ ಇತ್ತೀಚಿನ ಮಳೆ ಮತ್ತು ಪ್ರವಾಹ, ಅವಾಂತರವನ್ನೇ ಉಂಟುಮಾಡಿದೆ. ಆದರೆ ವರ್ಷದ ಹಿಂದೆ, ಆಗಸ್ಟ್ ತಿಂಗಳಲ್ಲೇ ರಾಜ್ಯದ 22 ಜಿಲ್ಲೆಗಳಲ್ಲಿ ಅತಿವೃಷ್ಟಿಯಾಗಿತ್ತು. ಆಗ ತೊಂದರೆ ಅನುಭವಿಸಿದ್ದ ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ಇನ್ನೂ<br />ಹೆಣಗಾಡುತ್ತಿದ್ದಾರೆ. ಸೂರು ಕಳೆದುಕೊಂಡವರಲ್ಲಿ ಹಲವು ಮಂದಿ ಈಗಲೂ ಸಮುದಾಯ ಭವನ, ಶಾಲೆ, ಶೆಡ್, ಬಾಡಿಗೆ ಮನೆಗಳಲ್ಲಿ ನೆಲೆಸಿದ್ದಾರೆ ಎಂಬುದು ಈ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿದಾಗ ಕಂಡುಬಂದ ನೋಟ.</p>.<p>‘ಪರಿಹಾರಕ್ಕಾಗಿ ಹಲವು ಸಲ ಅಧಿಕಾರಿಗಳನ್ನು ಭೇಟಿಯಾಗಿದ್ದರೂ ಪ್ರಯೋಜನವಾಗಿಲ್ಲ. ಈವರೆಗೂ ಶಾಲೆಯಲ್ಲಿಯೇ ವಾಸವಾಗಿದ್ದೇವೆ’ ಎನ್ನುತ್ತಾರೆ ಗೋಕಾಕ ಕಲಾರಕೊಪ್ಪದ ಯಲ್ಲವ್ವ ಕೃಷ್ಣಪ್ಪ ವಾಳಿ.</p>.<p>ಕೆಲವೆಡೆ ಸಂಕ, ಸೇತುವೆಗಳು ಪೂರ್ಣಗೊಂಡಿವೆ. ಶಾಲಾ ಕಟ್ಟಡಗಳಲ್ಲಿ ಕೆಲವಷ್ಟೇ ಪೂರ್ಣಗೊಂಡಿವೆ.</p>.<p>ಕಳೆದ ವರ್ಷದ ಮಹಾಮಳೆಯಿಂದ ₹ 35,160 ಕೋಟಿ ನಷ್ಟ ಅಂದಾಜಿಸಲಾಗಿತ್ತು. ರಾಜ್ಯ ವಿಪತ್ತು ಪರಿಹಾರ ನಿಧಿಯಡಿ (ಎಸ್ಡಿಆರ್ಎಫ್) ಮಾರ್ಗಸೂಚಿ ಅನ್ವಯ ₹ 3,891.80 ಕೋಟಿ ಪರಿಹಾರ ಕೇಳಲು ಅವಕಾಶ ಇತ್ತು. ಆದರೆ ನಷ್ಟವನ್ನು ಸಂಪೂರ್ಣ ಭರಿಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿತ್ತು. ಕೇಂದ್ರ ಸರ್ಕಾರ ವಿಪತ್ತು ನಿರ್ವಹಣಾ ನಿಧಿಯಡಿ ರಾಜ್ಯಕ್ಕೆ ತುರ್ತು ಪರಿಹಾರವಾಗಿ ಅಕ್ಟೋಬರ್ನಲ್ಲಿ ₹ 1,200 ಕೋಟಿ, ಎರಡನೇ ಬಾರಿ ₹ 669.95 ಕೋಟಿ ಮಾತ್ರ ಬಿಡುಗಡೆ ಮಾಡಿತ್ತು.</p>.<p><strong>ಅಕ್ರಮದ ದೂರು:</strong>ನೆರೆ ಪರಿಹಾರ ವಿತರಣೆಯಲ್ಲಿ ಭಾರಿ ಅಕ್ರಮ ನಡೆದಿರುವ ಆರೋಪಗಳಿವೆ. ಪರಿಹಾರ ಮೊತ್ತ ವಿತರಣೆಯಲ್ಲಿಯೂ ತಾರತಮ್ಯ ನಡೆದಿದೆ. ರಾಜಕೀಯ ಬೆಂಬಲ ಇರುವ ವ್ಯಕ್ತಿಗಳಿಗೆ ಹೆಚ್ಚು ಪರಿಹಾರ ಮೊದಲಾದ ದೂರುಗಳು ನೆರೆಪೀಡಿತ ಪ್ರದೇಶಗಳ ರೈತರದ್ದಾಗಿವೆ.</p>.<p>ಪ್ರವಾಹದಿಂದ ತೀವ್ರ ಹಾನಿಗೀಡಾದ ‘ಎ’ ಮತ್ತು ‘ಬಿ’ ವರ್ಗದ ಮನೆಗಳ ಪುನರ್ ನಿರ್ಮಾಣಕ್ಕೆ ಸರ್ಕಾರ ₹ 5 ಲಕ್ಷ ನೆರವು ಘೋಷಿಸಿದೆ. ಆದರೆ, ಈ ಮೊತ್ತದಲ್ಲಿ ₹ 1 ಲಕ್ಷ ನೆರೆ ಸಂತ್ರಸ್ತರ ಖಾತೆಗೆ ಜಮೆಗೊಂಡರೂ ಅದರಲ್ಲಿ ಅರ್ಧದಷ್ಟು ಸಂತ್ರಸ್ತರ ಖಾತೆಗೆ ಹಣ ಜಮೆ ಆಗಿಲ್ಲ. ಉಳಿದ ₹ 4 ಲಕ್ಷ ಅನುದಾನವನ್ನು ನಿರ್ಮಾಣವಾಗುತ್ತಿರುವ ಮನೆಗಳಿಗೆ, ನಿರ್ಮಾಣ ಹಂತದ ಜಿಪಿಎಸ್ ಛಾಯಾಚಿತ್ರಗಳ ಆಧಾರದ ಮೇಲೆಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತದೆ ಎನ್ನುತ್ತವೆ ಕಂದಾಯ ಇಲಾಖೆ ಮೂಲಗಳು.</p>.<p>ಈಗಾಗಲೇ ಶೇ 50ರಷ್ಟು ಜನ ಮನೆ ನಿರ್ಮಾಣದ ಕಾರ್ಯದಲ್ಲಿ ತೊಡಗಿದ್ದು, ಇನ್ನುಳಿದ ಜನರು ನಿರ್ಮಾಣ ಕಾರ್ಯದಿಂದ ತಟಸ್ಥರಾಗಿದ್ದಾರೆ ಎಂದೂ ತಿಳಿಸಿವೆ.</p>.<p>‘ನೆರೆಯಿಂದ ಹಾನಿಗೀಡಾದ ರೈತರ ಬೆಳೆಗೆ ಪರಿಹಾರವನ್ನು ಗರಿಷ್ಠ 2 ಹೆಕ್ಟೇರ್ಗೆ ಸೀಮಿತಗೊಳಿಸಿ ನೀಡಲಾಗುವುದು’ ಎಂದು ಸರ್ಕಾರ ನಿಯಮ ರೂಪಿಸಿತ್ತು. ಒಣಭೂಮಿ ಪ್ರದೇಶಕ್ಕೆ ಪ್ರತಿ ಹೆಕ್ಟೇರ್ಗೆ ₹ 16,500, ನೀರಾವರಿ ಭೂಮಿಗೆ ಪ್ರತಿ ಹೆಕ್ಟೇರ್ಗೆ ₹ 23 ಸಾವಿರ, ತೋಟಗಾರಿಕಾ ಬೆಳೆಗೆಪ್ರತಿ ಹೆಕ್ಟೇರ್ಗೆ ₹ 25 ಸಾವಿರ. ಆದರೆ, ಅನೇಕ ಜಿಲ್ಲೆಗಳಲ್ಲಿ ಈ ಪರಿಹಾರ ಘೋಷಣೆಯಲ್ಲಷ್ಟೇ ಉಳಿದಿದೆ. ಸಂತ್ರಸ್ತರು ಪರಿಹಾರ ಪಡೆಯಲು ಕಚೇರಿಗಳಿಗೆ ಸುತ್ತಾಡಿದ್ದೇ ಬಂದಿದೆ.</p>.<p><strong>₹ 10 ಸಾವಿರ ಆಸೆ– ಸಂತ್ರಸ್ತರ ಸಂಖ್ಯೆ ಇಮ್ಮಡಿ!</strong><br />ನೆರೆ ಸಂತ್ರಸ್ತ ಕುಟುಂಬಗಳಿಗೆ ತಕ್ಷಣದ ಪರಿಹಾರವಾಗಿ ಸರ್ಕಾರ ₹ 10 ಸಾವಿರ ಘೋಷಿಸಿತ್ತು. ಜಿಲ್ಲಾಡಳಿತ ಆಯಾ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಸರ್ವೇ ನಡೆಸಿ ಅಂಥ ಕುಟುಂಬಗಳ ಪಟ್ಟಿ ತಯಾರಿಸಿತ್ತು. ಆದರೆ, ಪರಿಹಾರ ಘೋಷಣೆ ಆಗುತ್ತಿದ್ದಂತೆ ಅರ್ಜಿಗಳ ಮಹಾಪೂರವೇ ಹರಿದುಬಂದಿತ್ತು. ಬೆಳಗಾವಿ, ಹಾವೇರಿ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಂತ್ರಸ್ತರಲ್ಲದವರ ಖಾತೆಗಳಿಗೂ ಹಣ ಸಂದಾಯವಾಗಿದೆ.</p>.<p>‘ಪಟ್ಟಿ ನೀಡುವಾಗ ಸ್ಥಳೀಯ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಸಂತ್ರಸ್ತ ಕುಟುಂಬಗಳ ಜೊತೆ ತಮ್ಮ ಹಿಂಬಾಲಕರ ಬ್ಯಾಂಕ್ ಖಾತೆ, ಮನೆಯ ದಾಖಲೆಗಳನ್ನು ಸಲ್ಲಿಸಿದ್ದಾರೆ.</p>.<p>ಹೀಗಾಗಿ ಸಂತ್ರಸ್ತರ ಸಂಖ್ಯೆ ದ್ವಿಗುಣವಾಗಿ, ಹಣವೂ ಸಂದಾಯವಾಗಿತ್ತು. ಕೆಲವು ಕಡೆ ವಾಪಸ್ ಪಡೆಯಲಾಗಿದೆ’ ಎನ್ನುತ್ತಾರೆ ಕಂದಾಯ ಇಲಾಖೆಯ ಅಧಿಕಾರಿ ಒಬ್ಬರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p><strong>ಬೆಂಗಳೂರು:</strong> ಮಹಾ ಮಳೆ, ಪ್ರವಾಹಕ್ಕೆ ನೆಲಕಚ್ಚಿದ ಮನೆಗಳು, ಕುಸಿದ ಗುಡ್ಡಗಳು, ಮುಳುಗಿದ ಸೇತುವೆಗಳು, ಕಂಗಾಲಾದ ಸಂತ್ರಸ್ತರು, ಸಾಂತ್ವನ ಹೇಳುವ ಸಚಿವರು, ನಿಯಮಗಳನ್ನು ಮುಂದಿಡುವ ಅಧಿಕಾರಿಗಳು, ಕಂತುಗಳಲ್ಲಿ ಬಿಡುಗಡೆಯಾಗುವ ಅರ್ಧಂಬರ್ಧ ಪರಿಹಾರ.... ಇವೆಲ್ಲವೂ ನೆರೆ, ನಂತರದ ದಿನಗಳಲ್ಲಿ ಕಾಣಸಿಗುವ ಮಾಮೂಲಿ ಚಿತ್ರಣ ಎಂಬಂತಾಗಿದೆ.</p>.<p>ರಾಜ್ಯದ 12 ಜಿಲ್ಲೆಗಳಲ್ಲಿ ಇತ್ತೀಚಿನ ಮಳೆ ಮತ್ತು ಪ್ರವಾಹ, ಅವಾಂತರವನ್ನೇ ಉಂಟುಮಾಡಿದೆ. ಆದರೆ ವರ್ಷದ ಹಿಂದೆ, ಆಗಸ್ಟ್ ತಿಂಗಳಲ್ಲೇ ರಾಜ್ಯದ 22 ಜಿಲ್ಲೆಗಳಲ್ಲಿ ಅತಿವೃಷ್ಟಿಯಾಗಿತ್ತು. ಆಗ ತೊಂದರೆ ಅನುಭವಿಸಿದ್ದ ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ಇನ್ನೂ<br />ಹೆಣಗಾಡುತ್ತಿದ್ದಾರೆ. ಸೂರು ಕಳೆದುಕೊಂಡವರಲ್ಲಿ ಹಲವು ಮಂದಿ ಈಗಲೂ ಸಮುದಾಯ ಭವನ, ಶಾಲೆ, ಶೆಡ್, ಬಾಡಿಗೆ ಮನೆಗಳಲ್ಲಿ ನೆಲೆಸಿದ್ದಾರೆ ಎಂಬುದು ಈ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿದಾಗ ಕಂಡುಬಂದ ನೋಟ.</p>.<p>‘ಪರಿಹಾರಕ್ಕಾಗಿ ಹಲವು ಸಲ ಅಧಿಕಾರಿಗಳನ್ನು ಭೇಟಿಯಾಗಿದ್ದರೂ ಪ್ರಯೋಜನವಾಗಿಲ್ಲ. ಈವರೆಗೂ ಶಾಲೆಯಲ್ಲಿಯೇ ವಾಸವಾಗಿದ್ದೇವೆ’ ಎನ್ನುತ್ತಾರೆ ಗೋಕಾಕ ಕಲಾರಕೊಪ್ಪದ ಯಲ್ಲವ್ವ ಕೃಷ್ಣಪ್ಪ ವಾಳಿ.</p>.<p>ಕೆಲವೆಡೆ ಸಂಕ, ಸೇತುವೆಗಳು ಪೂರ್ಣಗೊಂಡಿವೆ. ಶಾಲಾ ಕಟ್ಟಡಗಳಲ್ಲಿ ಕೆಲವಷ್ಟೇ ಪೂರ್ಣಗೊಂಡಿವೆ.</p>.<p>ಕಳೆದ ವರ್ಷದ ಮಹಾಮಳೆಯಿಂದ ₹ 35,160 ಕೋಟಿ ನಷ್ಟ ಅಂದಾಜಿಸಲಾಗಿತ್ತು. ರಾಜ್ಯ ವಿಪತ್ತು ಪರಿಹಾರ ನಿಧಿಯಡಿ (ಎಸ್ಡಿಆರ್ಎಫ್) ಮಾರ್ಗಸೂಚಿ ಅನ್ವಯ ₹ 3,891.80 ಕೋಟಿ ಪರಿಹಾರ ಕೇಳಲು ಅವಕಾಶ ಇತ್ತು. ಆದರೆ ನಷ್ಟವನ್ನು ಸಂಪೂರ್ಣ ಭರಿಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿತ್ತು. ಕೇಂದ್ರ ಸರ್ಕಾರ ವಿಪತ್ತು ನಿರ್ವಹಣಾ ನಿಧಿಯಡಿ ರಾಜ್ಯಕ್ಕೆ ತುರ್ತು ಪರಿಹಾರವಾಗಿ ಅಕ್ಟೋಬರ್ನಲ್ಲಿ ₹ 1,200 ಕೋಟಿ, ಎರಡನೇ ಬಾರಿ ₹ 669.95 ಕೋಟಿ ಮಾತ್ರ ಬಿಡುಗಡೆ ಮಾಡಿತ್ತು.</p>.<p><strong>ಅಕ್ರಮದ ದೂರು:</strong>ನೆರೆ ಪರಿಹಾರ ವಿತರಣೆಯಲ್ಲಿ ಭಾರಿ ಅಕ್ರಮ ನಡೆದಿರುವ ಆರೋಪಗಳಿವೆ. ಪರಿಹಾರ ಮೊತ್ತ ವಿತರಣೆಯಲ್ಲಿಯೂ ತಾರತಮ್ಯ ನಡೆದಿದೆ. ರಾಜಕೀಯ ಬೆಂಬಲ ಇರುವ ವ್ಯಕ್ತಿಗಳಿಗೆ ಹೆಚ್ಚು ಪರಿಹಾರ ಮೊದಲಾದ ದೂರುಗಳು ನೆರೆಪೀಡಿತ ಪ್ರದೇಶಗಳ ರೈತರದ್ದಾಗಿವೆ.</p>.<p>ಪ್ರವಾಹದಿಂದ ತೀವ್ರ ಹಾನಿಗೀಡಾದ ‘ಎ’ ಮತ್ತು ‘ಬಿ’ ವರ್ಗದ ಮನೆಗಳ ಪುನರ್ ನಿರ್ಮಾಣಕ್ಕೆ ಸರ್ಕಾರ ₹ 5 ಲಕ್ಷ ನೆರವು ಘೋಷಿಸಿದೆ. ಆದರೆ, ಈ ಮೊತ್ತದಲ್ಲಿ ₹ 1 ಲಕ್ಷ ನೆರೆ ಸಂತ್ರಸ್ತರ ಖಾತೆಗೆ ಜಮೆಗೊಂಡರೂ ಅದರಲ್ಲಿ ಅರ್ಧದಷ್ಟು ಸಂತ್ರಸ್ತರ ಖಾತೆಗೆ ಹಣ ಜಮೆ ಆಗಿಲ್ಲ. ಉಳಿದ ₹ 4 ಲಕ್ಷ ಅನುದಾನವನ್ನು ನಿರ್ಮಾಣವಾಗುತ್ತಿರುವ ಮನೆಗಳಿಗೆ, ನಿರ್ಮಾಣ ಹಂತದ ಜಿಪಿಎಸ್ ಛಾಯಾಚಿತ್ರಗಳ ಆಧಾರದ ಮೇಲೆಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತದೆ ಎನ್ನುತ್ತವೆ ಕಂದಾಯ ಇಲಾಖೆ ಮೂಲಗಳು.</p>.<p>ಈಗಾಗಲೇ ಶೇ 50ರಷ್ಟು ಜನ ಮನೆ ನಿರ್ಮಾಣದ ಕಾರ್ಯದಲ್ಲಿ ತೊಡಗಿದ್ದು, ಇನ್ನುಳಿದ ಜನರು ನಿರ್ಮಾಣ ಕಾರ್ಯದಿಂದ ತಟಸ್ಥರಾಗಿದ್ದಾರೆ ಎಂದೂ ತಿಳಿಸಿವೆ.</p>.<p>‘ನೆರೆಯಿಂದ ಹಾನಿಗೀಡಾದ ರೈತರ ಬೆಳೆಗೆ ಪರಿಹಾರವನ್ನು ಗರಿಷ್ಠ 2 ಹೆಕ್ಟೇರ್ಗೆ ಸೀಮಿತಗೊಳಿಸಿ ನೀಡಲಾಗುವುದು’ ಎಂದು ಸರ್ಕಾರ ನಿಯಮ ರೂಪಿಸಿತ್ತು. ಒಣಭೂಮಿ ಪ್ರದೇಶಕ್ಕೆ ಪ್ರತಿ ಹೆಕ್ಟೇರ್ಗೆ ₹ 16,500, ನೀರಾವರಿ ಭೂಮಿಗೆ ಪ್ರತಿ ಹೆಕ್ಟೇರ್ಗೆ ₹ 23 ಸಾವಿರ, ತೋಟಗಾರಿಕಾ ಬೆಳೆಗೆಪ್ರತಿ ಹೆಕ್ಟೇರ್ಗೆ ₹ 25 ಸಾವಿರ. ಆದರೆ, ಅನೇಕ ಜಿಲ್ಲೆಗಳಲ್ಲಿ ಈ ಪರಿಹಾರ ಘೋಷಣೆಯಲ್ಲಷ್ಟೇ ಉಳಿದಿದೆ. ಸಂತ್ರಸ್ತರು ಪರಿಹಾರ ಪಡೆಯಲು ಕಚೇರಿಗಳಿಗೆ ಸುತ್ತಾಡಿದ್ದೇ ಬಂದಿದೆ.</p>.<p><strong>₹ 10 ಸಾವಿರ ಆಸೆ– ಸಂತ್ರಸ್ತರ ಸಂಖ್ಯೆ ಇಮ್ಮಡಿ!</strong><br />ನೆರೆ ಸಂತ್ರಸ್ತ ಕುಟುಂಬಗಳಿಗೆ ತಕ್ಷಣದ ಪರಿಹಾರವಾಗಿ ಸರ್ಕಾರ ₹ 10 ಸಾವಿರ ಘೋಷಿಸಿತ್ತು. ಜಿಲ್ಲಾಡಳಿತ ಆಯಾ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಸರ್ವೇ ನಡೆಸಿ ಅಂಥ ಕುಟುಂಬಗಳ ಪಟ್ಟಿ ತಯಾರಿಸಿತ್ತು. ಆದರೆ, ಪರಿಹಾರ ಘೋಷಣೆ ಆಗುತ್ತಿದ್ದಂತೆ ಅರ್ಜಿಗಳ ಮಹಾಪೂರವೇ ಹರಿದುಬಂದಿತ್ತು. ಬೆಳಗಾವಿ, ಹಾವೇರಿ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಂತ್ರಸ್ತರಲ್ಲದವರ ಖಾತೆಗಳಿಗೂ ಹಣ ಸಂದಾಯವಾಗಿದೆ.</p>.<p>‘ಪಟ್ಟಿ ನೀಡುವಾಗ ಸ್ಥಳೀಯ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಸಂತ್ರಸ್ತ ಕುಟುಂಬಗಳ ಜೊತೆ ತಮ್ಮ ಹಿಂಬಾಲಕರ ಬ್ಯಾಂಕ್ ಖಾತೆ, ಮನೆಯ ದಾಖಲೆಗಳನ್ನು ಸಲ್ಲಿಸಿದ್ದಾರೆ.</p>.<p>ಹೀಗಾಗಿ ಸಂತ್ರಸ್ತರ ಸಂಖ್ಯೆ ದ್ವಿಗುಣವಾಗಿ, ಹಣವೂ ಸಂದಾಯವಾಗಿತ್ತು. ಕೆಲವು ಕಡೆ ವಾಪಸ್ ಪಡೆಯಲಾಗಿದೆ’ ಎನ್ನುತ್ತಾರೆ ಕಂದಾಯ ಇಲಾಖೆಯ ಅಧಿಕಾರಿ ಒಬ್ಬರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>