ನೀವು ಅನುದಾನ ಕೊಡಲು ಸಾಧ್ಯವೇ ಇಲ್ಲ ಎನ್ನುತ್ತೀರಿ. ಆದರೆ, ಕಮಿಷನ್ ಕೊಟ್ಟರೆ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್ಐಡಿಎಲ್) ಮೂಲಕ ಅನುದಾನ ಕೊಡಿಸುವುದಾಗಿ ಮಧ್ಯವರ್ತಿಗಳು ನಮ್ಮ ಬಳಿ ಬರುತ್ತಿದ್ದಾರೆ. ಹೀಗಿರುವಾಗ ನಾವು ಶಾಸಕರಾಗಿಆಯ್ಕೆಯಾಗಿರುವುದು ಏಕೆ?ಯಶವಂತರಾಯಗೌಡ ಪಾಟೀಲ, ಇಂಡಿ
ಡಿ.ಕೆ. ಶಿವಕುಮಾರ್ ಮತ್ತು ನಾನು ಒಟ್ಟಿಗೆ ವಿಧಾನಸಭೆಗೆ ಬಂದವರು. ಆರನೇ ಬಾರಿ ಶಾಸಕನಾದರೂ ಕಾರಣಾಂತರಗಳಿಂದ ನಾನು ಹೀಗೆ ಉಳಿದಿರಬಹುದು. ನನ್ನ ಕ್ಷೇತ್ರದಲ್ಲಿ ಬಿಜೆಪಿ ಅವಧಿಯಲ್ಲಿ ನೇಮಿಸಿದ್ದ ಅಧಿಕಾರಿಗಳ ಬದಲಾವಣೆ ಆಗುತ್ತಿಲ್ಲ. ಪಕ್ಷ ಕಾರ್ಯಕರ್ತರು ನನ್ನನ್ನೇ ಅಣಕಿಸುವಂತಾಗಿದೆ.ಸಿ.ಎಸ್. ನಾಡಗೌಡ, ಮುದ್ದೇಬಿಹಾಳ
ನನ್ನ ಕ್ಷೇತ್ರದಲ್ಲಿ ಶಾಸಕರ ಅಧಿಕಾರದ ವ್ಯಾಪ್ತಿಯ ವಿಚಾರಗಳಿಗೂ ಮುಖ್ಯಮಂತ್ರಿ ಕಚೇರಿ ಹೆಸರಿನಲ್ಲಿ ಟಿಪ್ಪಣಿಗಳು ಬಂದಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಶಾಸಕನಾಗಿ ಏನು ಮಾಡಬೇಕು?ವಿಜಯಾನಂದ ಕಾಶಪ್ಪನವರ, ಹುನಗುಂದ
ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ₹ 12 ಲಕ್ಷ ಅನುದಾನ ಬೇಕಿದೆ. ಅದನ್ನು ಕೇಳಲು ಹೋದರೆ ಸಚಿವರು ಸ್ಪಂದಿಸುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಬಂದು ಹೀಗಾದರೆ ಗತಿ ಏನು?ಜೆ.ಎನ್. ಗಣೇಶ್, ಕಂಪ್ಲಿ
ಕಟ್ಟಪಟ್ಟು ಗೆದ್ದು ಬಂದವರು ನಾವು. ಕೆಲವು ಸಚಿವರು ಶಾಸಕರಿಗೆ ಮರ್ಯಾದೆ ಕೊಡುತ್ತಿಲ್ಲ.ಪಿ.ಎಂ. ನರೇಂದ್ರಸ್ವಾಮಿ, ಮಳವಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.