<p><strong>ಹೊಸಕೋಟೆ</strong>: ‘ತಾಲ್ಲೂಕಿನ ಶಾಂತನಪುರ ಗ್ರಾಮದ ಸರ್ವೆ ನಂ. 9ರಲ್ಲಿರುವ ಪರಿಶಿಷ್ಟ ಜಾತಿಯವರಿಗೆ ಸೇರಿದ 26 ಎಕರೆ ಜಮೀನನ್ನು ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ಅವರ ಕುಟುಂಬ ಕಬಳಿಕೆ ಮಾಡಿದೆ’ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್ ಗಂಭೀರ ಆರೋಪ ಮಾಡಿದ್ದಾರೆ.</p>.<p>‘ಹಿಂದೆ ಪ್ಲೇಗ್ ರೋಗ ಕಾಣಿಸಿಕೊಂಡಾಗ ಗ್ರಾಮಸ್ಥರು ಈ ಜಮೀನಿನಲ್ಲಿ ಊರು ನಿರ್ಮಿಸಿಕೊಂಡಿದ್ದರು. ರೋಗ ನಿವಾರಣೆಯಾದ ಬಳಿಕ ಖಾಲಿ ಮಾಡಿದ್ದರು. ಇದು ಸರ್ಕಾರಿ ಜಮೀನಾಗಿತ್ತು. ಇದನ್ನು ಸಂಸದ ಬಚ್ಚೇಗೌಡ ಕುಟುಂಬದವರು ಕಬಳಿಸಿದ್ದಾರೆ’ ಎಂದು ಸಚಿವರು ಆರೋಪಿಸಿದ್ದಾರೆ.</p>.<p>‘ಪರಿಶಿಷ್ಟ ಜಾತಿಯವರ ಬಳಿ ಜಮೀನಿನ ದಾಖಲೆಗಳಿವೆ. ಜಮೀನು ಪಡೆಯಲು ಅವರು ಭೂ ಕಬಳಿಕೆ ತಡೆ ನ್ಯಾಯಾಲಯಕ್ಕೂ ಹೋಗಿದ್ದರು. ಅಲ್ಲಿ ಅವರಿಗೆ ನ್ಯಾಯ ವಿಳಂಬವಾಯಿತು. ನಂತರ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು. ಡಿ.ಸಿ ಅವರು 26 ಎಕರೆಯು ಸರ್ಕಾರಿ ಜಮೀನಾಗಿದೆ ಎಂದು ಆದೇಶಿಸಿದ್ದಾರೆ. ಈ ಆದೇಶದ ಪ್ರತಿಯೂ ನನ್ನ ಬಳಿ ಇದೆ’ ಎಂದು ತಿಳಿಸಿದ್ದಾರೆ.</p>.<p class="Subhead">ನ್ಯಾಯ ಕೊಡಿಸುತ್ತೇನೆ:‘ಜಮೀನಿನ ಸಂಬಂಧ ಬಡಜನರು ಹೈಕೋರ್ಟ್ಗೂ ಮೊರೆ ಹೋಗಿದ್ದರು. ನ್ಯಾಯಾಲಯ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ. ಈ ಆದೇಶದನ್ವಯ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಬಡವರಿಗೆ ಜಮೀನು ಬಿಟ್ಟುಕೊಡುವಂತೆ ಸೂಚಿಸಿದ್ದರು. ಆದರೆ, ಜಮೀನು ಬಿಟ್ಟುಕೊಡದೆ ಬಚ್ಚೇಗೌಡರ ಕುಟುಂಬ ಅನ್ಯಾಯ ಎಸಗುತ್ತಿದೆ. ನಾನು ಬಡವರ ಪರ ಹೋರಾಟಕ್ಕೆ ಸಿದ್ಧ’ ಎಂದು ಸಚಿವ ಎಂ.ಟಿ.ಬಿ. ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಶಾಂತನಪುರ ಬೇಚಾರಕ್ ಹಳ್ಳಿಯಾಗಿದೆ. ಅಲ್ಲಿ ಯಾರೂ ವಾಸವಾಗಿಲ್ಲ. ನಮ್ಮ ತಾತ ಭೈರೇಗೌಡರು ಈ ಜಮೀನಿನ ಒಡೆಯರಾಗಿದ್ದರು. ಅವರು ನನ್ನ ತಂದೆ ಮತ್ತು ಅವರ ಅಣ್ಣ, ತಮ್ಮಂದಿರಿಗೆ ನೀಡಿರುವ ಪಿತ್ರಾರ್ಜಿತ ಆಸ್ತಿಯಾಗಿದ್ದು ನಮ್ಮ ಹೆಸರಿನಲ್ಲಿಯೇ ಇದೆ. ಈಗ ನನ್ನ ತಮ್ಮ ಗೋಪಾಲಗೌಡ ನೋಡಿಕೊಳ್ಳುತ್ತಿದ್ದಾರೆ’ ಎಂದು ಸಂಸದ ಬಚ್ಚೇಗೌಡ ಪ್ರತಿಕ್ರಿಯಿಸಿದರು.</p>.<p>‘ಮಹಾರಾಜರ ಕಾಲದಲ್ಲಿ ಜೋಡಿದಾರರಾಗಿದ್ದ ಕುಟುಂಬ ನಮ್ಮದು. ತಾಲ್ಲೂಕಿನಲ್ಲಿ ನಮಗೆ ನೂರಾರು ಎಕರೆ ಜಮೀನಿದೆ. ನಾವೇ ಕೆಲವರಿಗೆ ಜಮೀನನ್ನು ದಾನವಾಗಿ ನೀಡಿದ್ದೇವೆ. ಸರ್ಕಾರಿ ಅಥವಾ ಬೇರೆಯವರ ಜಮೀನು ಕಬಳಿಸುವ ಅಗತ್ಯ ನಮಗಿಲ್ಲ’ ಎಂದು ಸ್ಪಷ್ಟಪಡಿಸಿದರು.</p>.<p>‘ಸಚಿವರು ಬಡವರಿಗೆ ನ್ಯಾಯ ಕೊಡಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಅವರ ಕೆಲಸಕ್ಕೆ ಅಡ್ಡಿ ಬರುವುದಿಲ್ಲ. ಈ ಜಮೀನಿನ ಸಂಬಂಧ ಯಾವುದೇ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿಲ್ಲ. ಅವರು ಹೇಳುವ ರೀತಿಯಲ್ಲಿ ಜಮೀನಿನ ಪ್ರಕರಣ ಕೋರ್ಟ್ನಲ್ಲಿದ್ದರೆ ನ್ಯಾಯಾಲಯ ನೀಡುವ ತೀರ್ಪಿಗೆ ನಾವು ಬದ್ಧ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಕೋಟೆ</strong>: ‘ತಾಲ್ಲೂಕಿನ ಶಾಂತನಪುರ ಗ್ರಾಮದ ಸರ್ವೆ ನಂ. 9ರಲ್ಲಿರುವ ಪರಿಶಿಷ್ಟ ಜಾತಿಯವರಿಗೆ ಸೇರಿದ 26 ಎಕರೆ ಜಮೀನನ್ನು ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ಅವರ ಕುಟುಂಬ ಕಬಳಿಕೆ ಮಾಡಿದೆ’ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್ ಗಂಭೀರ ಆರೋಪ ಮಾಡಿದ್ದಾರೆ.</p>.<p>‘ಹಿಂದೆ ಪ್ಲೇಗ್ ರೋಗ ಕಾಣಿಸಿಕೊಂಡಾಗ ಗ್ರಾಮಸ್ಥರು ಈ ಜಮೀನಿನಲ್ಲಿ ಊರು ನಿರ್ಮಿಸಿಕೊಂಡಿದ್ದರು. ರೋಗ ನಿವಾರಣೆಯಾದ ಬಳಿಕ ಖಾಲಿ ಮಾಡಿದ್ದರು. ಇದು ಸರ್ಕಾರಿ ಜಮೀನಾಗಿತ್ತು. ಇದನ್ನು ಸಂಸದ ಬಚ್ಚೇಗೌಡ ಕುಟುಂಬದವರು ಕಬಳಿಸಿದ್ದಾರೆ’ ಎಂದು ಸಚಿವರು ಆರೋಪಿಸಿದ್ದಾರೆ.</p>.<p>‘ಪರಿಶಿಷ್ಟ ಜಾತಿಯವರ ಬಳಿ ಜಮೀನಿನ ದಾಖಲೆಗಳಿವೆ. ಜಮೀನು ಪಡೆಯಲು ಅವರು ಭೂ ಕಬಳಿಕೆ ತಡೆ ನ್ಯಾಯಾಲಯಕ್ಕೂ ಹೋಗಿದ್ದರು. ಅಲ್ಲಿ ಅವರಿಗೆ ನ್ಯಾಯ ವಿಳಂಬವಾಯಿತು. ನಂತರ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು. ಡಿ.ಸಿ ಅವರು 26 ಎಕರೆಯು ಸರ್ಕಾರಿ ಜಮೀನಾಗಿದೆ ಎಂದು ಆದೇಶಿಸಿದ್ದಾರೆ. ಈ ಆದೇಶದ ಪ್ರತಿಯೂ ನನ್ನ ಬಳಿ ಇದೆ’ ಎಂದು ತಿಳಿಸಿದ್ದಾರೆ.</p>.<p class="Subhead">ನ್ಯಾಯ ಕೊಡಿಸುತ್ತೇನೆ:‘ಜಮೀನಿನ ಸಂಬಂಧ ಬಡಜನರು ಹೈಕೋರ್ಟ್ಗೂ ಮೊರೆ ಹೋಗಿದ್ದರು. ನ್ಯಾಯಾಲಯ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ. ಈ ಆದೇಶದನ್ವಯ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಬಡವರಿಗೆ ಜಮೀನು ಬಿಟ್ಟುಕೊಡುವಂತೆ ಸೂಚಿಸಿದ್ದರು. ಆದರೆ, ಜಮೀನು ಬಿಟ್ಟುಕೊಡದೆ ಬಚ್ಚೇಗೌಡರ ಕುಟುಂಬ ಅನ್ಯಾಯ ಎಸಗುತ್ತಿದೆ. ನಾನು ಬಡವರ ಪರ ಹೋರಾಟಕ್ಕೆ ಸಿದ್ಧ’ ಎಂದು ಸಚಿವ ಎಂ.ಟಿ.ಬಿ. ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಶಾಂತನಪುರ ಬೇಚಾರಕ್ ಹಳ್ಳಿಯಾಗಿದೆ. ಅಲ್ಲಿ ಯಾರೂ ವಾಸವಾಗಿಲ್ಲ. ನಮ್ಮ ತಾತ ಭೈರೇಗೌಡರು ಈ ಜಮೀನಿನ ಒಡೆಯರಾಗಿದ್ದರು. ಅವರು ನನ್ನ ತಂದೆ ಮತ್ತು ಅವರ ಅಣ್ಣ, ತಮ್ಮಂದಿರಿಗೆ ನೀಡಿರುವ ಪಿತ್ರಾರ್ಜಿತ ಆಸ್ತಿಯಾಗಿದ್ದು ನಮ್ಮ ಹೆಸರಿನಲ್ಲಿಯೇ ಇದೆ. ಈಗ ನನ್ನ ತಮ್ಮ ಗೋಪಾಲಗೌಡ ನೋಡಿಕೊಳ್ಳುತ್ತಿದ್ದಾರೆ’ ಎಂದು ಸಂಸದ ಬಚ್ಚೇಗೌಡ ಪ್ರತಿಕ್ರಿಯಿಸಿದರು.</p>.<p>‘ಮಹಾರಾಜರ ಕಾಲದಲ್ಲಿ ಜೋಡಿದಾರರಾಗಿದ್ದ ಕುಟುಂಬ ನಮ್ಮದು. ತಾಲ್ಲೂಕಿನಲ್ಲಿ ನಮಗೆ ನೂರಾರು ಎಕರೆ ಜಮೀನಿದೆ. ನಾವೇ ಕೆಲವರಿಗೆ ಜಮೀನನ್ನು ದಾನವಾಗಿ ನೀಡಿದ್ದೇವೆ. ಸರ್ಕಾರಿ ಅಥವಾ ಬೇರೆಯವರ ಜಮೀನು ಕಬಳಿಸುವ ಅಗತ್ಯ ನಮಗಿಲ್ಲ’ ಎಂದು ಸ್ಪಷ್ಟಪಡಿಸಿದರು.</p>.<p>‘ಸಚಿವರು ಬಡವರಿಗೆ ನ್ಯಾಯ ಕೊಡಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಅವರ ಕೆಲಸಕ್ಕೆ ಅಡ್ಡಿ ಬರುವುದಿಲ್ಲ. ಈ ಜಮೀನಿನ ಸಂಬಂಧ ಯಾವುದೇ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿಲ್ಲ. ಅವರು ಹೇಳುವ ರೀತಿಯಲ್ಲಿ ಜಮೀನಿನ ಪ್ರಕರಣ ಕೋರ್ಟ್ನಲ್ಲಿದ್ದರೆ ನ್ಯಾಯಾಲಯ ನೀಡುವ ತೀರ್ಪಿಗೆ ನಾವು ಬದ್ಧ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>