‘ತಾವು ಹುಟ್ಟಿ ಬೆಳೆದ ಮನೆಯನ್ನು ದಿಕ್ಕರಿಸಿ, ಶತ್ರುಗಳ ಮನೆಗೆ ಆಶ್ರಯ ಬೇಡಿ ಹೋಗುವವರನ್ನು ಏನೆನ್ನಬೇಕು? ಪಕ್ಷಾಂತರಿಗಳು ಬೇಕಾದಷ್ಟು ಕಾರಣಗಳನ್ನು ತಮ್ಮ ಸಮರ್ಥನೆಗೆ ಕೊಡುತ್ತಾರೆ. ನಮ್ಮವರೇ ನನಗೆ ಮೋಸ ಮಾಡಿದರು. ಸ್ಥಾನ–ಮಾನ ಕೊಡಲಿಲ್ಲ. ನನ್ನ ಜಾತಿಯನ್ನು ಕಡೆಗಣಿಸಿದರು ಇತ್ಯಾದಿ. ಅವರು ಕೊಡುವ ಕಾರಣಗಳು ಎಷ್ಟು ಪೊಳ್ಳು ಅಂತ ಸ್ವತಃ ಅವರಿಗೇ ಗೊತ್ತಿರುತ್ತದೆ. ಅವರು ಹೊಸ ಹಲ್ಲುಗಾವಲಿನಲ್ಲಿ ಸಮೃದ್ಧವಾಗಿ ಮೇಯಲು ಹೊರಟಿರುತ್ತಾರೆ ಅಷ್ಟೇ,’ ಎಂದು ಪುಸ್ತಕದ ವಾಕ್ಯ ಖಂಡಿಕೆಯಲ್ಲಿ ಬರೆಯಲಾಗಿದೆ.