ಬೆಂಗಳೂರಿನ ವಿದ್ವಾನ್ ಮಳಗಿ ರಾಮಾಚಾರ್, ಮೈಸೂರಿನ ವಿದ್ವಾನ್ ಸಿ.ಎಚ್.ಶ್ರೀನಿವಾಸಮೂರ್ತಿ ಮತ್ತು ಹುಬ್ಬಳ್ಳಿಯ ಹೃದ್ರೋಗ ತಜ್ಞ ಡಾ.ವಿ.ಜಿ.ನಾಡಗೌಡ ಸೇರಿ ದೇಶದ ವಿವಿಧ ರಾಜ್ಯಗಳ ವಿದ್ವಾಂಸರು ಪ್ರಶಸ್ತಿ ಸ್ವೀಕರಿಸಿದರು. ರಾಯರ ಮಧ್ಯಾರಾಧನೆ ದಿನವಾದ ಶನಿವಾರ, ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನದ ಅರ್ಚಕರು ಶೇಷವಸ್ತ್ರದೊಂದಿಗೆ ಮಂತ್ರಾಲಯಕ್ಕೆ ಬರುವರು. ರಾಯರಿಗೆ ಸಮರ್ಪಿಸಲು ಸುಬುಧೇಂದ್ರ ತೀರ್ಥರಿಗೆ ಶೇಷವಸ್ತ್ರ ನೀಡುವರು.