<p><strong>ಬೆಂಗಳೂರು</strong>: ಬುದ್ಧ, ಬಸವ ಮತ್ತು ಅಂಬೇಡ್ಕರ್ ಮಾಡಲಾಗದ್ದನ್ನು ಮೊಬೈಲ್ ಫೋನ್ಗಳು ಮಾಡಿವೆ!</p>.<p>‘ಅಂತರ್ಜಾತಿ ವಿವಾಹ ಹೆಚ್ಚು ಹೆಚ್ಚು ಆಗಬೇಕು. ಇದರಿಂದ ಜಾತಿ ವ್ಯವಸ್ಥೆ ಅಳಿದು ಹೋಗುತ್ತದೆ ಎಂದು ಅಂಬೇಡ್ಕರ್ ಹೇಳಿದ್ದರು. ಅದು ಸಾಧ್ಯವಾಗಿದ್ದು ಮೊಬೈಲ್ ಫೋನ್ಗಳಿಂದ. ಮೊಬೈಲ್ ಫೋನ್ ಬಂದ ಮೇಲೆ ಲಕ್ಷಾಂತರ ಅಂತರ್ಜಾತಿ ವಿವಾಹಗಳು ನಡೆ<br />ದಿವೆ’ ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್ನ ನಾರಾಯಣರಾವ್ ಹೇಳಿದರು.</p>.<p>ಸಂವಿಧಾನದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಅವರು ಮೊಬೈಲ್ ಫೋನ್ಗಳು ಅಂತರ್ಜಾತಿ ವಿವಾಹದ ಕ್ರಾಂತಿ ಸೃಷ್ಟಿಸುತ್ತಿರುವುದನ್ನು ಸ್ವಾರಸ್ಯಕರವಾಗಿ ವಿವರಿಸಿದರು.</p>.<p>ಅಂಬೇಡ್ಕರ್ ಅವರು ಸಂವಿಧಾನಸಭೆಗೆ ಆಯ್ಕೆ ಆಗಿ ಬರಲು ಅವರನ್ನು ಬೆಂಬಲಿಸಿದ ಮುಸ್ಲಿಂ ಲೀಗ್ ಕಾರಣ. ಈ ದೇಶದಲ್ಲಿ ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶ ನೀಡಲಿಲ್ಲ. ಆದರೆ, ಮುಸ್ಲಿಮರು ದರ್ಗಾಗಳಲ್ಲಿ ಮುಕ್ತಾವಕಾಶ ನೀಡಿದರು. ಮೊಹರಂ ಅನ್ನು<br />ದಲಿತರು, ಹಿಂದುಳಿದವರು ಈಗಲೂ ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಆದ್ದರಿಂದ ಹಿಂದೂ–ಮುಸ್ಲಿಮರ ಹೃದಯವನ್ನು ಒಡೆಯುವ ಪೌರತ್ವ ಕಾಯ್ದೆ ಜಾರಿ ಮಾಡಿದ್ದು ಸರಿಯಲ್ಲ ಎಂದರು.</p>.<p>‘ಅಂಬೇಡ್ಕರ್ ಅವರು ಈ ದೇಶದಲ್ಲಿ ಜನ್ಮ ತಳೆಯದೇ ಇದಿದ್ದರೆ. ನಾವು ಈ ಸದನಕ್ಕೆ ಬರಲು ಸಾಧ್ಯವಿರಲಿಲ್ಲ. ತುಳಿತಕ್ಕೆ ಒಳಗಾದವರ ಜೀವನ ಹಸನಾಗಲು ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಕಾರಣ’ ಎಂದು ನಾರಾಯಣರಾವ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬುದ್ಧ, ಬಸವ ಮತ್ತು ಅಂಬೇಡ್ಕರ್ ಮಾಡಲಾಗದ್ದನ್ನು ಮೊಬೈಲ್ ಫೋನ್ಗಳು ಮಾಡಿವೆ!</p>.<p>‘ಅಂತರ್ಜಾತಿ ವಿವಾಹ ಹೆಚ್ಚು ಹೆಚ್ಚು ಆಗಬೇಕು. ಇದರಿಂದ ಜಾತಿ ವ್ಯವಸ್ಥೆ ಅಳಿದು ಹೋಗುತ್ತದೆ ಎಂದು ಅಂಬೇಡ್ಕರ್ ಹೇಳಿದ್ದರು. ಅದು ಸಾಧ್ಯವಾಗಿದ್ದು ಮೊಬೈಲ್ ಫೋನ್ಗಳಿಂದ. ಮೊಬೈಲ್ ಫೋನ್ ಬಂದ ಮೇಲೆ ಲಕ್ಷಾಂತರ ಅಂತರ್ಜಾತಿ ವಿವಾಹಗಳು ನಡೆ<br />ದಿವೆ’ ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್ನ ನಾರಾಯಣರಾವ್ ಹೇಳಿದರು.</p>.<p>ಸಂವಿಧಾನದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಅವರು ಮೊಬೈಲ್ ಫೋನ್ಗಳು ಅಂತರ್ಜಾತಿ ವಿವಾಹದ ಕ್ರಾಂತಿ ಸೃಷ್ಟಿಸುತ್ತಿರುವುದನ್ನು ಸ್ವಾರಸ್ಯಕರವಾಗಿ ವಿವರಿಸಿದರು.</p>.<p>ಅಂಬೇಡ್ಕರ್ ಅವರು ಸಂವಿಧಾನಸಭೆಗೆ ಆಯ್ಕೆ ಆಗಿ ಬರಲು ಅವರನ್ನು ಬೆಂಬಲಿಸಿದ ಮುಸ್ಲಿಂ ಲೀಗ್ ಕಾರಣ. ಈ ದೇಶದಲ್ಲಿ ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶ ನೀಡಲಿಲ್ಲ. ಆದರೆ, ಮುಸ್ಲಿಮರು ದರ್ಗಾಗಳಲ್ಲಿ ಮುಕ್ತಾವಕಾಶ ನೀಡಿದರು. ಮೊಹರಂ ಅನ್ನು<br />ದಲಿತರು, ಹಿಂದುಳಿದವರು ಈಗಲೂ ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಆದ್ದರಿಂದ ಹಿಂದೂ–ಮುಸ್ಲಿಮರ ಹೃದಯವನ್ನು ಒಡೆಯುವ ಪೌರತ್ವ ಕಾಯ್ದೆ ಜಾರಿ ಮಾಡಿದ್ದು ಸರಿಯಲ್ಲ ಎಂದರು.</p>.<p>‘ಅಂಬೇಡ್ಕರ್ ಅವರು ಈ ದೇಶದಲ್ಲಿ ಜನ್ಮ ತಳೆಯದೇ ಇದಿದ್ದರೆ. ನಾವು ಈ ಸದನಕ್ಕೆ ಬರಲು ಸಾಧ್ಯವಿರಲಿಲ್ಲ. ತುಳಿತಕ್ಕೆ ಒಳಗಾದವರ ಜೀವನ ಹಸನಾಗಲು ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಕಾರಣ’ ಎಂದು ನಾರಾಯಣರಾವ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>