<p><strong>ಬೆಂಗಳೂರು:</strong> ‘ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಈವರೆಗೆ ಶೇ 61ರಷ್ಟು (50.57 ಹೆಕ್ಟೇರ್ ಪ್ರದೇಶ) ಬಿತ್ತನೆಯಾಗಿದ್ದು, ಮುಂಗಾರು ಹಂಗಾಮಿನಲ್ಲಿ 84 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ತಲುಪುವ ವಿಶ್ವಾಸವಿದೆ’ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.</p>.<p>ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಮುಂಗಾರು ಹಂಗಾಮಿನಲ್ಲಿ ಕೆಲವು ಭಾಗಗಳಲ್ಲಿ ಆಗಸ್ಟ್ 15ರ ವರೆಗೆ ಬಿತ್ತನೆ ನಡೆಯಲಿದೆ. ಹೀಗಾಗಿ, ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಆಗದಂತೆ ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳಲಾಗಿದೆ’ ಎಂದರು.</p>.<p>‘ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 26.77 ಲಕ್ಷ ಟನ್ ರಸಗೊಬ್ಬರ ಬೇಡಿಕೆಯ ನಿರೀಕ್ಷೆ ಇದೆ. ಜುಲೈ 3ರವರೆಗೆ 13.73 ಲಕ್ಷ ಟನ್ ರಸಗೊಬ್ಬರ ಮಾರಾಟವಾಗಿದ್ದು, 9 ಲಕ್ಷ ಟನ್ ದಾಸ್ತಾನಿದೆ’ ಎಂದರು.</p>.<p>‘ಯೂರಿಯಾ ಬಳಕೆ ಪ್ರಮಾಣ ಕಡಿಮೆ ಮಾಡಬೇಕೆಂದು ರೈತರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ತಕ್ಷಣವೇ ಸಂಪೂರ್ಣ ಬಳಕೆ ತಗ್ಗಿಸಲು ಸಾಧ್ಯವಾಗದ ಕಾರಣ ಹಂತ ಹಂತವಾಗಿ ಬಳಕೆ ಪ್ರಮಾಣ ಕಡಿಮೆ ಮಾಡುವ ಪ್ರಯತ್ನ ನಡೆದಿದೆ’ ಎಂದರು.</p>.<p>‘ಅಡಿಕೆ ಹಾಗೂ ಮೆಕ್ಕೆ ಜೋಳಕ್ಕೆ ಯೂರಿಯಾ ಬಳಕೆ ಹೆಚ್ಚು. ಅಡಿಕೆ, ಮೆಕ್ಕೆಜೋಳ ಬೆಳೆಯುವ ಪ್ರದೇಶ ವಿಸ್ತರಣೆಯಾದಂತೆ ಯೂರಿಯಾ ಬಳಕೆಯೂ ಹೆಚ್ಚುತ್ತಿದೆ. ಇತರ ಬೆಳೆಗಳಿಗೆ ಯೂರಿಯಾ ಬಳಕೆ ಪ್ರಮಾಣ ಕಡಿಮೆಯಾಗಿದೆ. ಈ ವಿಚಾರವನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಯತ್ನಿಸಿದರೂ ಒಪ್ಪುತ್ತಿಲ್ಲ. ವಾರ್ಷಿಕವಾಗಿ 11.17 ಲಕ್ಷ ಟನ್ ಯೂರಿಯಾಗೆ ಬೇಡಿಕೆಯಿದ್ದು, ಬಹುತೇಕ ಅಷ್ಟೂ ಬಳಕೆಯಾಗುತ್ತಿದೆ. ಆದರೆ, ಡಿಎಪಿ ಬಳಕೆ ಪ್ರಮಾಣ 30 ಸಾವಿರ ಟನ್ನಷ್ಟು ತಗ್ಗಿದೆ’ ಎಂದು ಕೃಷಿ ಆಯುಕ್ತ ವೈ.ಎಸ್. ಪಾಟೀಲ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಈವರೆಗೆ ಶೇ 61ರಷ್ಟು (50.57 ಹೆಕ್ಟೇರ್ ಪ್ರದೇಶ) ಬಿತ್ತನೆಯಾಗಿದ್ದು, ಮುಂಗಾರು ಹಂಗಾಮಿನಲ್ಲಿ 84 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ತಲುಪುವ ವಿಶ್ವಾಸವಿದೆ’ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.</p>.<p>ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಮುಂಗಾರು ಹಂಗಾಮಿನಲ್ಲಿ ಕೆಲವು ಭಾಗಗಳಲ್ಲಿ ಆಗಸ್ಟ್ 15ರ ವರೆಗೆ ಬಿತ್ತನೆ ನಡೆಯಲಿದೆ. ಹೀಗಾಗಿ, ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಆಗದಂತೆ ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳಲಾಗಿದೆ’ ಎಂದರು.</p>.<p>‘ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 26.77 ಲಕ್ಷ ಟನ್ ರಸಗೊಬ್ಬರ ಬೇಡಿಕೆಯ ನಿರೀಕ್ಷೆ ಇದೆ. ಜುಲೈ 3ರವರೆಗೆ 13.73 ಲಕ್ಷ ಟನ್ ರಸಗೊಬ್ಬರ ಮಾರಾಟವಾಗಿದ್ದು, 9 ಲಕ್ಷ ಟನ್ ದಾಸ್ತಾನಿದೆ’ ಎಂದರು.</p>.<p>‘ಯೂರಿಯಾ ಬಳಕೆ ಪ್ರಮಾಣ ಕಡಿಮೆ ಮಾಡಬೇಕೆಂದು ರೈತರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ತಕ್ಷಣವೇ ಸಂಪೂರ್ಣ ಬಳಕೆ ತಗ್ಗಿಸಲು ಸಾಧ್ಯವಾಗದ ಕಾರಣ ಹಂತ ಹಂತವಾಗಿ ಬಳಕೆ ಪ್ರಮಾಣ ಕಡಿಮೆ ಮಾಡುವ ಪ್ರಯತ್ನ ನಡೆದಿದೆ’ ಎಂದರು.</p>.<p>‘ಅಡಿಕೆ ಹಾಗೂ ಮೆಕ್ಕೆ ಜೋಳಕ್ಕೆ ಯೂರಿಯಾ ಬಳಕೆ ಹೆಚ್ಚು. ಅಡಿಕೆ, ಮೆಕ್ಕೆಜೋಳ ಬೆಳೆಯುವ ಪ್ರದೇಶ ವಿಸ್ತರಣೆಯಾದಂತೆ ಯೂರಿಯಾ ಬಳಕೆಯೂ ಹೆಚ್ಚುತ್ತಿದೆ. ಇತರ ಬೆಳೆಗಳಿಗೆ ಯೂರಿಯಾ ಬಳಕೆ ಪ್ರಮಾಣ ಕಡಿಮೆಯಾಗಿದೆ. ಈ ವಿಚಾರವನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಯತ್ನಿಸಿದರೂ ಒಪ್ಪುತ್ತಿಲ್ಲ. ವಾರ್ಷಿಕವಾಗಿ 11.17 ಲಕ್ಷ ಟನ್ ಯೂರಿಯಾಗೆ ಬೇಡಿಕೆಯಿದ್ದು, ಬಹುತೇಕ ಅಷ್ಟೂ ಬಳಕೆಯಾಗುತ್ತಿದೆ. ಆದರೆ, ಡಿಎಪಿ ಬಳಕೆ ಪ್ರಮಾಣ 30 ಸಾವಿರ ಟನ್ನಷ್ಟು ತಗ್ಗಿದೆ’ ಎಂದು ಕೃಷಿ ಆಯುಕ್ತ ವೈ.ಎಸ್. ಪಾಟೀಲ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>