<p><strong>ಬೆಂಗಳೂರು: </strong>ತಮ್ಮ ರಾಜ್ಯಕ್ಕೆ ತೆರಳಲು ಒಡಿಶಾ ರಾಜ್ಯಕ್ಕೆ ಸೇರಿದ ವಲಸಿಗರು ಸಾವಿರಾರು ಸಂಖ್ಯೆಯಲ್ಲಿ ಅರಮನೆ ಮೈದಾನಕ್ಕೆ ಆಗಮಿಸಿದ್ದು ಬಸ್ಸುಗಳನ್ನು ಹತ್ತಲು ನೂಕು ನುಗ್ಗಲು ಉಂಟಾಗಿತ್ತು.</p>.<p>ಎಲ್ಲಾ ವಲಸಿಗರಿಗೂಒಡಿಶಾಗೆ ತೆರಳಲು ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ ಎಂಬ ಸಂದೇಶ ಶುಕ್ರವಾರ ಬಂದಿದ್ದರಿಂದವಲಸಿಗರು ಗುಂಪು ಗುಂಪಾಗಿ ಅರಮನೆ ಮೈದಾನದ ತ್ರಿಪುರವಾಸಿನಿ ದ್ವಾರದ ಬಳಿಗೆ ಆಗಮಿಸಿದ್ದರು.</p>.<p>ರೈಲನ್ನುಪುರಿವರೆಗೆ ಮಾತ್ರ ವ್ಯವಸ್ಥೆ ಮಾಡಲಾಗಿದೆ, ಮುಂದಿನ ಸ್ಥಳಗಳಿಗೆ ಯಾವುದೇ ವ್ಯವಸ್ಥೆ ಇಲ್ಲ ಎಂದು ವ್ಯವಸ್ಥಾಪಕರು ಮೈಕಿನಲ್ಲಿ ಹೇಳುತ್ತಿದ್ದಂತೆ ಜನರು ಗೊಂದಲಕ್ಕೆ ಒಳಗಾಗಿದ್ದರು.ಪುರಿ ಸುತ್ತಮುತ್ತಲಿನ ವಲಸಿಗರೂಸೇರಿದಂತೆಒಡಿಶಾ ರಾಜ್ಯಕ್ಕೆ ಸೇರಿದವರು ಅರಮನೆ ಮೈದಾನಕ್ಕೆ ಬಂದಿದ್ದರಿಂದ ನೂಕು ನುಗ್ಗಲಿಗೆ ಕಾರಣವಾಗಿದೆ ಎನ್ನಲಾಗಿದೆ.</p>.<p>ಇವರಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ವಿವಿಧ ಕೆಲಸಗಳಲ್ಲಿ ತೊಡಗಿದ್ದವರೂ ಸೇರಿದ್ದಾರೆ. ಶನಿವಾರ ಬೆಂಗಳೂರಿನಿಂದ ರೈಲು ಹೊರಡಲಿದ್ದು, ಎಲ್ಲರೂ ರೈಲು ನಿಲ್ದಾಣಕ್ಕೆ ತಲುಪಲಿದ್ದಾರೆ.ಎಲ್ಲರನ್ನೂ ಸರ್ಕಾರಿ ಬಸ್ಸುಗಳಲ್ಲಿ ರೈಲು ನಿಲ್ದಾಣಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.</p>.<p>ಇವರಿಗೆ ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ರೈಲು ನಿಲ್ದಾಣಕ್ಕೆ ಕರೆದೊಯ್ಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.<br />ಬೆಳಿಗ್ಗೆಯಿಂದಲೇ ಅರಮನೆ ಮೈದಾನಕ್ಕೆ ಬರಲಾರಂಭಿಸಿದ್ದು,ಎಲ್ಲಾ ವಲಸಿಗರು ತಮ್ಮ ಲಗ್ಗೇಜುಗಳನ್ನು ಹೊತ್ತು, ಮಹಿಳೆಯರು ಹಾಗೂ ಮಕ್ಕಳೊಡನೆ ಆಗಮಿಸುತ್ತಿರುವುದು ಕಂಡು ಬಂತು.</p>.<p>ಬಸ್ಸಿಗೆ ಹೋಗುವ ಆತುರದಲ್ಲಿ ಎಲ್ಲಾ ವಲಸಿಗರು ಅಂತರ ಕಾಯ್ದುಕೊಂಡಿರಲಿಲ್ಲ. ಕೆಲವರು ಮಾಸ್ಕ್ಧರಿಸಿರಲಿಲ್ಲ.ಪೊಲೀಸರನ್ನು ಕಂಡರೆ ಮಾತ್ರ ಮಾಸ್ಕ್ ಧರಿಸುವುದು ಕಂಡು ಬಂತು.ಸ್ಥಳದಲ್ಲಿ ನಗರ ಸಂಚಾರ ಪೊಲೀಸರು ಹಾಗೂ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರು ಹಾಜರಿದ್ದು ಬಿಗಿ ಭದ್ರತೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ತಮ್ಮ ರಾಜ್ಯಕ್ಕೆ ತೆರಳಲು ಒಡಿಶಾ ರಾಜ್ಯಕ್ಕೆ ಸೇರಿದ ವಲಸಿಗರು ಸಾವಿರಾರು ಸಂಖ್ಯೆಯಲ್ಲಿ ಅರಮನೆ ಮೈದಾನಕ್ಕೆ ಆಗಮಿಸಿದ್ದು ಬಸ್ಸುಗಳನ್ನು ಹತ್ತಲು ನೂಕು ನುಗ್ಗಲು ಉಂಟಾಗಿತ್ತು.</p>.<p>ಎಲ್ಲಾ ವಲಸಿಗರಿಗೂಒಡಿಶಾಗೆ ತೆರಳಲು ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ ಎಂಬ ಸಂದೇಶ ಶುಕ್ರವಾರ ಬಂದಿದ್ದರಿಂದವಲಸಿಗರು ಗುಂಪು ಗುಂಪಾಗಿ ಅರಮನೆ ಮೈದಾನದ ತ್ರಿಪುರವಾಸಿನಿ ದ್ವಾರದ ಬಳಿಗೆ ಆಗಮಿಸಿದ್ದರು.</p>.<p>ರೈಲನ್ನುಪುರಿವರೆಗೆ ಮಾತ್ರ ವ್ಯವಸ್ಥೆ ಮಾಡಲಾಗಿದೆ, ಮುಂದಿನ ಸ್ಥಳಗಳಿಗೆ ಯಾವುದೇ ವ್ಯವಸ್ಥೆ ಇಲ್ಲ ಎಂದು ವ್ಯವಸ್ಥಾಪಕರು ಮೈಕಿನಲ್ಲಿ ಹೇಳುತ್ತಿದ್ದಂತೆ ಜನರು ಗೊಂದಲಕ್ಕೆ ಒಳಗಾಗಿದ್ದರು.ಪುರಿ ಸುತ್ತಮುತ್ತಲಿನ ವಲಸಿಗರೂಸೇರಿದಂತೆಒಡಿಶಾ ರಾಜ್ಯಕ್ಕೆ ಸೇರಿದವರು ಅರಮನೆ ಮೈದಾನಕ್ಕೆ ಬಂದಿದ್ದರಿಂದ ನೂಕು ನುಗ್ಗಲಿಗೆ ಕಾರಣವಾಗಿದೆ ಎನ್ನಲಾಗಿದೆ.</p>.<p>ಇವರಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ವಿವಿಧ ಕೆಲಸಗಳಲ್ಲಿ ತೊಡಗಿದ್ದವರೂ ಸೇರಿದ್ದಾರೆ. ಶನಿವಾರ ಬೆಂಗಳೂರಿನಿಂದ ರೈಲು ಹೊರಡಲಿದ್ದು, ಎಲ್ಲರೂ ರೈಲು ನಿಲ್ದಾಣಕ್ಕೆ ತಲುಪಲಿದ್ದಾರೆ.ಎಲ್ಲರನ್ನೂ ಸರ್ಕಾರಿ ಬಸ್ಸುಗಳಲ್ಲಿ ರೈಲು ನಿಲ್ದಾಣಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.</p>.<p>ಇವರಿಗೆ ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ರೈಲು ನಿಲ್ದಾಣಕ್ಕೆ ಕರೆದೊಯ್ಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.<br />ಬೆಳಿಗ್ಗೆಯಿಂದಲೇ ಅರಮನೆ ಮೈದಾನಕ್ಕೆ ಬರಲಾರಂಭಿಸಿದ್ದು,ಎಲ್ಲಾ ವಲಸಿಗರು ತಮ್ಮ ಲಗ್ಗೇಜುಗಳನ್ನು ಹೊತ್ತು, ಮಹಿಳೆಯರು ಹಾಗೂ ಮಕ್ಕಳೊಡನೆ ಆಗಮಿಸುತ್ತಿರುವುದು ಕಂಡು ಬಂತು.</p>.<p>ಬಸ್ಸಿಗೆ ಹೋಗುವ ಆತುರದಲ್ಲಿ ಎಲ್ಲಾ ವಲಸಿಗರು ಅಂತರ ಕಾಯ್ದುಕೊಂಡಿರಲಿಲ್ಲ. ಕೆಲವರು ಮಾಸ್ಕ್ಧರಿಸಿರಲಿಲ್ಲ.ಪೊಲೀಸರನ್ನು ಕಂಡರೆ ಮಾತ್ರ ಮಾಸ್ಕ್ ಧರಿಸುವುದು ಕಂಡು ಬಂತು.ಸ್ಥಳದಲ್ಲಿ ನಗರ ಸಂಚಾರ ಪೊಲೀಸರು ಹಾಗೂ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರು ಹಾಜರಿದ್ದು ಬಿಗಿ ಭದ್ರತೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>