ಉಡುಪಿ: ಮಂಗಳೂರಿನಿಂದ ಮುಂಬೈಗೆ ಹೊರಟಿದ್ದ ಮತ್ಸ್ಯಗಂಧ ರೈಲಿಗೆ ಶನಿವಾರ ಕುಂದಾಪುರ ತಾಲ್ಲೂಕಿನ ಇನ್ನಂಜೆ ಸಮೀಪ ನವಿಲು ಡಿಕ್ಕಿಯಾದ ಪರಿಣಾಮ ರೈಲಿನ ಮುಂಭಾಗದ ಗಾಜು ಒಡೆದು 1 ತಾಸು ರೈಲು ಸಂಚಾರ ಸ್ಥಗಿತವಾಗಿತ್ತು.
ಎಂಜಿನ್ ಮುಂಭಾಗದ ಗಾಜು ಒಡೆದಿದ್ದರಿಂದ ಪ್ರಯಾಣಿಕರು ಕೆಲಕಾಲ ಗಾಬರಿಯಾಗಿದ್ದರು.
‘ಗಾಜು ಒಡೆದಿದ್ದರಿಂದ ರಾತ್ರಿ ಹೊತ್ತು ಪ್ರಯಾಣಕ್ಕೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ನಿಜಾಮುದ್ದೀನ್–ಎರ್ನಾಕುಲಂ ರೈಲಿನ ಎಂಜಿನ್ ಬದಲಿಸಿಕೊಂಡು ಮತ್ಸ್ಯಗಂಧ ರೈಲು ಸಂಚಾರ ಮುಂದುವರಿಸಿತು’ ಎಂದು ಕೊಂಕಣ್ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ಮಾಹಿತಿ ನೀಡಿದರು.