‘ಸಿ.ಎಂ ಹುದ್ದೆ ಮೇಲೆ ಕಣ್ಣು’
ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿರಿಸಿ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ನ ಮೇಲೆ ಮುಗಿಬಿದ್ದಿದ್ದಾರೆ. ಕರ್ನಾಟಕದ ರಾಜಕೀಯ ವಲಯದಲ್ಲಿ ಅಧಿಕಾರ ಹಸ್ತಾಂತರದ ಮಾತುಗಳು ಜೋರಾಗಿ ಕೇಳುತ್ತಿರುವಾಗ ಜೂನಿಯರ್ ಖರ್ಗೆ ಅವರು ತಮ್ಮ ಸೈದ್ಧಾಂತಿಕ ಬದ್ಧತೆಯನ್ನು ಪ್ರದರ್ಶಿಸುತ್ತಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಏನು ಇಷ್ಟವಾಗುತ್ತದೆ ಎಂಬುದು ಜೂನಿಯರ್ ಖರ್ಗೆ ಅವರಿಗೆ ಚೆನ್ನಾಗಿ ಗೊತ್ತಿದೆ. ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಜಿ.ಪರಮೇಶ್ವರ ಎಚ್.ಕೆ.ಪಾಟೀಲ ಕೃಷ್ಣ ಬೈರೇಗೌಡ ಅವರಿಗಿಂತ ರಾಹುಲ್ ಗಾಂಧಿ ಅವರ ಸಿದ್ಧಾಂತಕ್ಕೆ ಇವರು ಹೆಚ್ಚು ನಿಷ್ಠರಾಗಿದ್ದಾರೆ. ಪ್ರಯತ್ನಪಟ್ಟರೆ ಉಪ ಮುಖ್ಯಮಂತ್ರಿ ಹುದ್ದೆಯಾದರೂ ಸಿಗುತ್ತದೆ ಎಂಬುದು ಜೂನಿಯರ್ ಖರ್ಗೆಗೆ ಗೊತ್ತಿದೆ. –ಲಹರ್ ಸಿಂಗ್ ಸಿರೋಯಾ ರಾಜ್ಯಸಭಾ ಸದಸ್ಯ ಬಿಜೆಪಿ