<p><strong>ನವದೆಹಲಿ: </strong>ಬೆಂಗಳೂರಿನಲ್ಲಿ ಗೋಡ್ರೆಜ್ ಪ್ರಾಪರ್ಟೀಸ್ ಲಿಮಿಟೆಡ್ ಹಾಗೂ ವಂಡರ್ ಪ್ರೊಜೆಕ್ಟ್ಸ್ ಡೆವಲಪ್ಮೆಂಟ್ ಪ್ರೈ.ಲಿ. ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ನೀಡಲಾಗಿದ್ದ ಪರಿಸರ ಇಲಾಖೆ ನೀಡಿದ್ದ ಅನುಮತಿ(ಇಸಿ) ರದ್ದುಗೊಳಿಸಿದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ(ಎನ್ಜಿಟಿ) ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.</p>.<p>‘ಈ ಪ್ರಕರಣವನ್ನು ಪುನರ್ಪರಿಶೀಲಿಸಬೇಕು’ ಎಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್.ಭೋಪಣ್ಣ ಹಾಗೂ ವಿ.ರಾಮಸುಬ್ರಮಣಿಯನ್ ಅವರಿದ್ದ ನ್ಯಾಯಪೀಠವು ಎನ್ಜಿಟಿಗೆ ಸೂಚಿಸಿತು.ಅಲ್ಲಿಯವರೆಗೂ ಯಾವುದೇ ನಿರ್ಮಾಣ ಚಟುವಟಿಕೆ ಮಾಡಬಾರದು ಎಂದು ಪೀಠ ಆದೇಶಿಸಿತು.</p>.<p>ಕೈಕೊಂಡ್ರಹಳ್ಳಿ ಕೆರೆ ಪ್ರದೇಶದ ಬಫರ್ ವಲಯದಲ್ಲೇ ಈ ಯೋಜನೆಯು ಇದೆ ಎಂದಿದ್ದ ಎನ್ಜಿಟಿ ಅನುಮತಿಯನ್ನು ರದ್ದುಗೊಳಿಸಿತ್ತು. ಕೆರೆಯೊಂದರ ಬಫರ್ ವಲಯವನ್ನು ಉಲ್ಲಂಘಿಸುವ ಯಾವುದೇ ಯೋಜನೆಗಳಿಗೆ ಪರಿಸರ ಇಲಾಖೆ ಅನುಮತಿ ನೀಡಬಾರದು ಎಂದು ಎನ್ಜಿಟಿ ಸೂಚಿಸಿತ್ತು.</p>.<p>‘ಈ ಪ್ರಕರಣದ ಪುನರ್ಪರಿಶೀಲನೆ ಆರಂಭಿಸಿದ ಬಳಿಕ ಆರು ವಾರದೊಳಗಾಗಿ ವಿಚಾರಣೆ ಪೂರ್ಣಗೊಳಿಸಬೇಕು. ಈಗಾಗಲೇ ನೀಡಿರುವ ಇಸಿ ಅವಧಿ ಎನ್ಜಿಟಿಯ ಹೊಸ ಆದೇಶಕ್ಕೆ ಒಳಪಡಲಿದೆ ಹಾಗೂ ಈ ಸನ್ನಿವೇಶದಲ್ಲಿ ಇಸಿ ಪುನರೂರ್ಜಿತವಾಗಿದೆ ಎಂದಲ್ಲ. ಈ ನ್ಯಾಯಾಲಯವು ಯಾವುದೇ ಅಭಿಪ್ರಾಯವನ್ನು ತಿಳಿಸಿಲ್ಲ’ ಎಂದು ಪೀಠ ಸ್ಪಷ್ಟಪಡಿಸಿತು.</p>.<p>‘ಈ ಪ್ರಕರಣದಲ್ಲಿ ಹೆಚ್ಚುವರಿ ದಾಖಲೆಗಳು ಅಥವಾ ಆಕ್ಷೇಪಣೆಗಳನ್ನು ಸಲ್ಲಿಸಲು ಸಂಬಂಧಪಟ್ಟವರಿಗೆ ಎನ್ಜಿಟಿ ಅವಕಾಶ ನೀಡಬೇಕು. ಪೀಠದ ಆದೇಶ ತಲುಪಿದ ಕೂಡಲೇ ವಿಚಾರಣೆ ದಿನಾಂಕವನ್ನು ಎನ್ಜಿಟಿ ನಿಗದಿ ಪಡಿಸಬೇಕು’ ಎಂದು ಆದೇಶಿಸಿದೆ.</p>.<p><strong>ಪ್ರಕರಣವೇನು?: </strong>ಬೆಂಗಳೂರು ನಿವಾಸಿಯಾದ ಎಚ್.ಪಿ.ರಾಜಣ್ಣ ಎನ್ನುವವರು ಬೆಂಗಳೂರು ನಗರ ಜಿಲ್ಲೆಯ ವರ್ತೂರು ಹೋಬಳಿಯಲ್ಲಿ ಕೈಕೊಂಡ್ರಹಳ್ಳಿ ಕೆರೆಯ ಸಮೀಪ ನಿರ್ಮಾಣವಾಗಲಿರುವ ಯೋಜನೆಗಳ ವಿರುದ್ಧ ಎನ್ಜಿಟಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಬಫರ್ ವಲಯದಲ್ಲೇ ಯೋಜನೆಯಿದ್ದು, ಇದಕ್ಕೆ 2018 ಜನವರಿ 10ರಂದು ಇಸಿ ನೀಡಿರುವುದನ್ನು ಅವರು ಪ್ರಶ್ನಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಬೆಂಗಳೂರಿನಲ್ಲಿ ಗೋಡ್ರೆಜ್ ಪ್ರಾಪರ್ಟೀಸ್ ಲಿಮಿಟೆಡ್ ಹಾಗೂ ವಂಡರ್ ಪ್ರೊಜೆಕ್ಟ್ಸ್ ಡೆವಲಪ್ಮೆಂಟ್ ಪ್ರೈ.ಲಿ. ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ನೀಡಲಾಗಿದ್ದ ಪರಿಸರ ಇಲಾಖೆ ನೀಡಿದ್ದ ಅನುಮತಿ(ಇಸಿ) ರದ್ದುಗೊಳಿಸಿದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ(ಎನ್ಜಿಟಿ) ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.</p>.<p>‘ಈ ಪ್ರಕರಣವನ್ನು ಪುನರ್ಪರಿಶೀಲಿಸಬೇಕು’ ಎಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್.ಭೋಪಣ್ಣ ಹಾಗೂ ವಿ.ರಾಮಸುಬ್ರಮಣಿಯನ್ ಅವರಿದ್ದ ನ್ಯಾಯಪೀಠವು ಎನ್ಜಿಟಿಗೆ ಸೂಚಿಸಿತು.ಅಲ್ಲಿಯವರೆಗೂ ಯಾವುದೇ ನಿರ್ಮಾಣ ಚಟುವಟಿಕೆ ಮಾಡಬಾರದು ಎಂದು ಪೀಠ ಆದೇಶಿಸಿತು.</p>.<p>ಕೈಕೊಂಡ್ರಹಳ್ಳಿ ಕೆರೆ ಪ್ರದೇಶದ ಬಫರ್ ವಲಯದಲ್ಲೇ ಈ ಯೋಜನೆಯು ಇದೆ ಎಂದಿದ್ದ ಎನ್ಜಿಟಿ ಅನುಮತಿಯನ್ನು ರದ್ದುಗೊಳಿಸಿತ್ತು. ಕೆರೆಯೊಂದರ ಬಫರ್ ವಲಯವನ್ನು ಉಲ್ಲಂಘಿಸುವ ಯಾವುದೇ ಯೋಜನೆಗಳಿಗೆ ಪರಿಸರ ಇಲಾಖೆ ಅನುಮತಿ ನೀಡಬಾರದು ಎಂದು ಎನ್ಜಿಟಿ ಸೂಚಿಸಿತ್ತು.</p>.<p>‘ಈ ಪ್ರಕರಣದ ಪುನರ್ಪರಿಶೀಲನೆ ಆರಂಭಿಸಿದ ಬಳಿಕ ಆರು ವಾರದೊಳಗಾಗಿ ವಿಚಾರಣೆ ಪೂರ್ಣಗೊಳಿಸಬೇಕು. ಈಗಾಗಲೇ ನೀಡಿರುವ ಇಸಿ ಅವಧಿ ಎನ್ಜಿಟಿಯ ಹೊಸ ಆದೇಶಕ್ಕೆ ಒಳಪಡಲಿದೆ ಹಾಗೂ ಈ ಸನ್ನಿವೇಶದಲ್ಲಿ ಇಸಿ ಪುನರೂರ್ಜಿತವಾಗಿದೆ ಎಂದಲ್ಲ. ಈ ನ್ಯಾಯಾಲಯವು ಯಾವುದೇ ಅಭಿಪ್ರಾಯವನ್ನು ತಿಳಿಸಿಲ್ಲ’ ಎಂದು ಪೀಠ ಸ್ಪಷ್ಟಪಡಿಸಿತು.</p>.<p>‘ಈ ಪ್ರಕರಣದಲ್ಲಿ ಹೆಚ್ಚುವರಿ ದಾಖಲೆಗಳು ಅಥವಾ ಆಕ್ಷೇಪಣೆಗಳನ್ನು ಸಲ್ಲಿಸಲು ಸಂಬಂಧಪಟ್ಟವರಿಗೆ ಎನ್ಜಿಟಿ ಅವಕಾಶ ನೀಡಬೇಕು. ಪೀಠದ ಆದೇಶ ತಲುಪಿದ ಕೂಡಲೇ ವಿಚಾರಣೆ ದಿನಾಂಕವನ್ನು ಎನ್ಜಿಟಿ ನಿಗದಿ ಪಡಿಸಬೇಕು’ ಎಂದು ಆದೇಶಿಸಿದೆ.</p>.<p><strong>ಪ್ರಕರಣವೇನು?: </strong>ಬೆಂಗಳೂರು ನಿವಾಸಿಯಾದ ಎಚ್.ಪಿ.ರಾಜಣ್ಣ ಎನ್ನುವವರು ಬೆಂಗಳೂರು ನಗರ ಜಿಲ್ಲೆಯ ವರ್ತೂರು ಹೋಬಳಿಯಲ್ಲಿ ಕೈಕೊಂಡ್ರಹಳ್ಳಿ ಕೆರೆಯ ಸಮೀಪ ನಿರ್ಮಾಣವಾಗಲಿರುವ ಯೋಜನೆಗಳ ವಿರುದ್ಧ ಎನ್ಜಿಟಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಬಫರ್ ವಲಯದಲ್ಲೇ ಯೋಜನೆಯಿದ್ದು, ಇದಕ್ಕೆ 2018 ಜನವರಿ 10ರಂದು ಇಸಿ ನೀಡಿರುವುದನ್ನು ಅವರು ಪ್ರಶ್ನಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>