<p><strong>ಬೆಂಗಳೂರು: </strong>ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ಸೈಂಟಿಫಿಕ್ ರೀಸರ್ಚ್ನ (ಜೆಎನ್ಸಿಎಎಸ್ಆರ್) ಪ್ರಾಧ್ಯಾಪಕ ಕಾನಿಷ್ಕ ವಿಶ್ವಾಸ್ ಅವರು 2021ನೇ ಸಾಲಿನ ‘ಶಾಂತಿ ಸ್ವರೂಪ್ ಭಟ್ನಾಗರ್’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.</p>.<p>ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವವರು ಹಾಗೂ ವಿಶೇಷ ಸಂಶೋಧನೆಗಳನ್ನು ಕೈಗೊಂಡವರಿಗೆ ಪ್ರತಿ ವರ್ಷವೂ ಈ ಪ್ರಶಸ್ತಿ ನೀಡಲಾಗುತ್ತದೆ. ಕಾನಿಷ್ಕ ಅವರು ರಸಾಯನ ವಿಜ್ಞಾನ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆಗಳನ್ನು ನೀಡಿದ್ದಾರೆ. ಹೀಗಾಗಿ ಅವರಿಗೆ ದೇಶದ ಅತ್ಯುನ್ನತ ವಿಜ್ಞಾನ ಪುರಸ್ಕಾರ ಒಲಿದಿದೆ.</p>.<p>ಕಾನಿಷ್ಕ ನೇತೃತ್ವದ ಸಂಶೋಧಕರ ತಂಡವು ತ್ಯಾಜ್ಯ ಶಾಖವನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಬಲ್ಲ ಪರಿಸರ ಸ್ನೇಹಿ ‘ಥರ್ಮೋ ಎಲೆಕ್ಟ್ರಿಕ್’ ತಂತ್ರಾಂಶವನ್ನು ಈ ವರ್ಷದ ಮಾರ್ಚ್ನಲ್ಲಿ ಅಭಿವೃದ್ಧಿಪಡಿಸಿತ್ತು. ಲ್ಯಾಪ್ಟ್ಯಾಪ್ನಿಂದ ಉತ್ಪತ್ತಿಯಾದ ಶಾಖವನ್ನು ಮೊಬೈಲ್ ಚಾರ್ಜ್ ಮಾಡಲು, ಮೊಬೈಲ್ನಿಂದ ಉತ್ಪತ್ತಿಗೊಂಡ ಶಾಖವನ್ನು ಕೈಗಡಿಯಾರ ರೀಚಾರ್ಜ್ ಮಾಡಲು ಬಳಸುವುದು ಈ ತಂತ್ರಾಂಶದ ಉದ್ದೇಶ ಎಂದು ಹೇಳಲಾಗಿತ್ತು.</p>.<p>ವಿಶ್ವದ ಪ್ರತಿಷ್ಠಿತ ಜರ್ನಲ್ಗಳಲ್ಲಿ ಒಂದಾದ (ವಿಜ್ಞಾನಕ್ಕೆ ಸಂಬಂಧಿಸಿ) ‘ಸೈನ್ಸ್’ನಲ್ಲಿ ಈ ಸಂಶೋಧನೆಯ ಕುರಿತಾದ ವರದಿ ಪ್ರಕಟವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ಸೈಂಟಿಫಿಕ್ ರೀಸರ್ಚ್ನ (ಜೆಎನ್ಸಿಎಎಸ್ಆರ್) ಪ್ರಾಧ್ಯಾಪಕ ಕಾನಿಷ್ಕ ವಿಶ್ವಾಸ್ ಅವರು 2021ನೇ ಸಾಲಿನ ‘ಶಾಂತಿ ಸ್ವರೂಪ್ ಭಟ್ನಾಗರ್’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.</p>.<p>ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವವರು ಹಾಗೂ ವಿಶೇಷ ಸಂಶೋಧನೆಗಳನ್ನು ಕೈಗೊಂಡವರಿಗೆ ಪ್ರತಿ ವರ್ಷವೂ ಈ ಪ್ರಶಸ್ತಿ ನೀಡಲಾಗುತ್ತದೆ. ಕಾನಿಷ್ಕ ಅವರು ರಸಾಯನ ವಿಜ್ಞಾನ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆಗಳನ್ನು ನೀಡಿದ್ದಾರೆ. ಹೀಗಾಗಿ ಅವರಿಗೆ ದೇಶದ ಅತ್ಯುನ್ನತ ವಿಜ್ಞಾನ ಪುರಸ್ಕಾರ ಒಲಿದಿದೆ.</p>.<p>ಕಾನಿಷ್ಕ ನೇತೃತ್ವದ ಸಂಶೋಧಕರ ತಂಡವು ತ್ಯಾಜ್ಯ ಶಾಖವನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಬಲ್ಲ ಪರಿಸರ ಸ್ನೇಹಿ ‘ಥರ್ಮೋ ಎಲೆಕ್ಟ್ರಿಕ್’ ತಂತ್ರಾಂಶವನ್ನು ಈ ವರ್ಷದ ಮಾರ್ಚ್ನಲ್ಲಿ ಅಭಿವೃದ್ಧಿಪಡಿಸಿತ್ತು. ಲ್ಯಾಪ್ಟ್ಯಾಪ್ನಿಂದ ಉತ್ಪತ್ತಿಯಾದ ಶಾಖವನ್ನು ಮೊಬೈಲ್ ಚಾರ್ಜ್ ಮಾಡಲು, ಮೊಬೈಲ್ನಿಂದ ಉತ್ಪತ್ತಿಗೊಂಡ ಶಾಖವನ್ನು ಕೈಗಡಿಯಾರ ರೀಚಾರ್ಜ್ ಮಾಡಲು ಬಳಸುವುದು ಈ ತಂತ್ರಾಂಶದ ಉದ್ದೇಶ ಎಂದು ಹೇಳಲಾಗಿತ್ತು.</p>.<p>ವಿಶ್ವದ ಪ್ರತಿಷ್ಠಿತ ಜರ್ನಲ್ಗಳಲ್ಲಿ ಒಂದಾದ (ವಿಜ್ಞಾನಕ್ಕೆ ಸಂಬಂಧಿಸಿ) ‘ಸೈನ್ಸ್’ನಲ್ಲಿ ಈ ಸಂಶೋಧನೆಯ ಕುರಿತಾದ ವರದಿ ಪ್ರಕಟವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>