<p><strong>ಬೆಂಗಳೂರು:</strong> ‘ಮುಖ್ಯಮಂತ್ರಿ ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎಂದಲ್ಲ. ಆದರೆ, ಮೂವತ್ತು ತಿಂಗಳ ನಂತರವಾದರೂ ಬಿಡಬಹುದು, ಅದಕ್ಕೂ ಮೊದಲೇ ಬಿಡಬಹುದು. ಬಿಡುವುದಂತೂ ಪಕ್ಕಾ. ಯಾವಾಗಲಾದರೂ ಬಿಡಲೇಬೇಕು' ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.</p><p>‘ರಾಜಕೀಯ ಶಾಶ್ವತವಲ್ಲ’ ಎಂಬ ಸಿದ್ದರಾಮಯ್ಯನವರ ಮಾತಿನ ಕುರಿತು ಪ್ರತಿಕ್ರಿಯಿಸಿದ ಅವರು, ‘ಅಧಿಕಾರ ಶಾಶ್ವತ ಅಲ್ಲ. ಯಾವತ್ತಿದ್ದರೂ ಅಧಿಕಾರ ಬಿಡಬೇಕು. 10 ವರ್ಷದ ನಂತರವಾದರೂ ಬಿಡಬೇಕು. ಅದನ್ನು ಯಾವಾಗ ಬಿಟ್ಟುಕೊಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ’ ಎಂದರು.</p><p>ದಲಿತ ಮುಖ್ಯಮಂತ್ರಿ ವಿಚಾರ ತಳ್ಳಿಹಾಕಿದ ಸಚಿವರು, ‘ಈ ಅವಧಿಯಲ್ಲಿ ದಲಿತ ಮುಖ್ಯಮಂತ್ರಿ ಬಗ್ಗೆ ಯಾವುದೇ ಚರ್ಚೆ ಇಲ್ಲ. ಮುಖ್ಯಮಂತ್ರಿ ಬಗ್ಗೆ ಎಲ್ಲ ಮುಗಿದಿದೆ. ಈಗ ಮತ್ತೆ ಶುರು ಮಾಡುವುದು ಬೇಡ’ ಎಂದು ಹೇಳಿದರು.</p>.ಸಿದ್ದರಾಮಯ್ಯ–ವೇಣುಗೋಪಾಲ್ ರಹಸ್ಯ ಸಮಾಲೋಚನೆ: ಕುತೂಹಲ ಕೆರಳಿಸಿದ ಗೋಪ್ಯ ಚರ್ಚೆ
<p><strong>ಬೆಂಗಳೂರು:</strong> ‘ಮುಖ್ಯಮಂತ್ರಿ ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎಂದಲ್ಲ. ಆದರೆ, ಮೂವತ್ತು ತಿಂಗಳ ನಂತರವಾದರೂ ಬಿಡಬಹುದು, ಅದಕ್ಕೂ ಮೊದಲೇ ಬಿಡಬಹುದು. ಬಿಡುವುದಂತೂ ಪಕ್ಕಾ. ಯಾವಾಗಲಾದರೂ ಬಿಡಲೇಬೇಕು' ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.</p><p>‘ರಾಜಕೀಯ ಶಾಶ್ವತವಲ್ಲ’ ಎಂಬ ಸಿದ್ದರಾಮಯ್ಯನವರ ಮಾತಿನ ಕುರಿತು ಪ್ರತಿಕ್ರಿಯಿಸಿದ ಅವರು, ‘ಅಧಿಕಾರ ಶಾಶ್ವತ ಅಲ್ಲ. ಯಾವತ್ತಿದ್ದರೂ ಅಧಿಕಾರ ಬಿಡಬೇಕು. 10 ವರ್ಷದ ನಂತರವಾದರೂ ಬಿಡಬೇಕು. ಅದನ್ನು ಯಾವಾಗ ಬಿಟ್ಟುಕೊಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ’ ಎಂದರು.</p><p>ದಲಿತ ಮುಖ್ಯಮಂತ್ರಿ ವಿಚಾರ ತಳ್ಳಿಹಾಕಿದ ಸಚಿವರು, ‘ಈ ಅವಧಿಯಲ್ಲಿ ದಲಿತ ಮುಖ್ಯಮಂತ್ರಿ ಬಗ್ಗೆ ಯಾವುದೇ ಚರ್ಚೆ ಇಲ್ಲ. ಮುಖ್ಯಮಂತ್ರಿ ಬಗ್ಗೆ ಎಲ್ಲ ಮುಗಿದಿದೆ. ಈಗ ಮತ್ತೆ ಶುರು ಮಾಡುವುದು ಬೇಡ’ ಎಂದು ಹೇಳಿದರು.</p>.ಸಿದ್ದರಾಮಯ್ಯ–ವೇಣುಗೋಪಾಲ್ ರಹಸ್ಯ ಸಮಾಲೋಚನೆ: ಕುತೂಹಲ ಕೆರಳಿಸಿದ ಗೋಪ್ಯ ಚರ್ಚೆ