ಬುಧವಾರ, 3 ಡಿಸೆಂಬರ್ 2025
×
ADVERTISEMENT
ADVERTISEMENT

ಸಿದ್ದರಾಮಯ್ಯ–ವೇಣುಗೋಪಾಲ್ ರಹಸ್ಯ ಸಮಾಲೋಚನೆ: ಕುತೂಹಲ ಕೆರಳಿಸಿದ ಗೋಪ್ಯ ಚರ್ಚೆ

Published : 3 ಡಿಸೆಂಬರ್ 2025, 23:36 IST
Last Updated : 3 ಡಿಸೆಂಬರ್ 2025, 23:36 IST
ಫಾಲೋ ಮಾಡಿ
Comments
ವೇಣುಗೋಪಾಲ್ ರಾಹುಲ್ ಗಾಂಧಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿದ್ದರಾಮಯ್ಯನವರು ಭೇಟಿ ಮಾಡುವುದರಲ್ಲಿ ತಪ್ಪೇನಿದೆ? ಪಕ್ಷದ ವಿಚಾರವಾಗಿ ಅವರು ಮಾತನಾಡುತ್ತಾರೆ
ಡಿ.ಕೆ. ಶಿವಕುಮಾರ್‌ ಉಪ ಮುಖ್ಯಮಂತ್ರಿ
ಜೈಕಾರ–ಬಣಗಳ ಶಕ್ತಿ ಪ್ರದರ್ಶನ
ಕೆ.ಸಿ.ವೇಣುಗೋಪಾಲ್‌ ಬಜಪೆಯ ವಿಮಾನನಿಲ್ದಾಣದಿಂದ ಹೊರಬರುತ್ತಿದ್ದಂತೆಯೇ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ನೇತೃತ್ವದ ಗುಂಪು ಡಿ.ಕೆ.ಶಿವಕುಮಾರ್‌ ಅವರಿಗೆ ಜೈಕಾರ ಹಾಕಿ ‘ಡಿಕೆಶಿ ಮುಖ್ಯಮಂತ್ರಿಯಾಗಲಿ’ ಎಂದು ಘೋಷಣೆ  ಕೂಗಿತು. ವೇಣುಗೋಪಾಲ್ ನಿರ್ಗಮಿಸಿದ ಕೆಲ ಹೊತ್ತಿನ ಬಳಿಕ ಬಂದ ಸಿದ್ದರಾಮಯ್ಯ ಅವರು ವಿಮಾನದಲ್ಲಿ ನಿಲ್ದಾಣದಿಂದ ಹೊರುತ್ತಿದ್ದಂತೆ ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜ ನೇತೃತ್ವದ ಬಣದವರು ಸಿದ್ದರಾಮಯ್ಯಗೆ ಜೈಕಾರ ಹಾಕಿ ‘ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ’ ಎಂದು ಘೋಷಣೆ ಕೂಗಿದರು. ಘೋಷಣೆ ರಾಜಕೀಯ ಬಗ್ಗೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ ‘ಈ ರೀತಿ‌ ಜೈಕಾರ ಹಾಕುವುದರಿಂದ ಏನೂ  ಪ್ರಯೋಜನ ಆಗುವುದಿಲ್ಲ’ ಎಂದರು.
‘ಜೈಕಾರ ಧಿಕ್ಕಾರ ಸಹಜ–ಡಿಕೆಶಿ
‘ಜನ ಕಳೆದ ಹತ್ತು ವರ್ಷಗಳಿಂದ ಡಿಕೆ ಡಿಕೆ... ಎಂದು ಕೂಗುತ್ತಿದ್ದಾರೆ. ಅಭಿಮಾನಿಗಳು ಈ ರೀತಿ ಕೂಗುವುದು ಸಹಜ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ನಾಯಕರ ಪರ ಮಂಗಳೂರಿನಲ್ಲಿ ಘೋಷಣೆ ಕೂಗಿದ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು ‘ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ.. ಎಂದು ಕೂಗುವುದಿಲ್ಲವೇ? ಕಾಂಗ್ರೆಸ್ ಕಾರ್ಯಕರ್ತರು ರಾಹುಲ್.. ರಾಹುಲ್.. ಎಂದು ಕೂಗುತ್ತಾರೆ. ಸಿದ್ದರಾಮಯ್ಯ ಅಭಿಮಾನಿಗಳು ಸಿದ್ದು ಸಿದ್ದು... ಎಂದು ಕೂಗುತ್ತಾರೆ. ರಾಜಕಾರಣದಲ್ಲಿ ಜೈಕಾರ ಧಿಕ್ಕಾರ ಅಭಿಮಾನದ ಮಾತುಗಳು ಸಹಜ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT