<p><strong>ಬೆಂಗಳೂರು</strong>: ವಾಣಿಜ್ಯ ತೆರಿಗೆಗಳ ಇಲಾಖೆ, ಅಬಕಾರಿ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗಳು ತೆರಿಗೆ ವಂಚನೆಗಳ ಪ್ರಕರಣಗಳನ್ನು ಪತ್ತೆ ಮಾಡಿದ್ದು, ಒಟ್ಟು 15,479 ಪ್ರಕರಣಗಳನ್ನು ದಾಖಲಿಸಲಾಗಿದೆ. ಸುಮಾರು ₹1,120.34 ಕೋಟಿಗೂ ಅಧಿಕ ತೆರಿಗೆ ವಂಚಿಸಿರುವುದು ದೃಢಪಟ್ಟಿದೆ.</p>.<p>ವಾಣಿಜ್ಯ ತೆರಿಗೆ ಇಲಾಖೆಯೊಂದರಲ್ಲೇ ಅತ್ಯಧಿಕ ಪ್ರಕರಣಗಳು (15,465) ಪತ್ತೆಯಾಗಿವೆ. ಇದರಲ್ಲಿ 6,083 ಪ್ರಕರಣಗಳನ್ನು ವಿಚಾರಣೆ ಮತ್ತು ತನಿಖೆಗೆ ಒಳಪಡಿಸಿ ₹1,120.34 ಕೋಟಿಯಷ್ಟು ನಷ್ಟವಾಗಿದೆ ಎಂದು ನಿರ್ಧರಿಸಿ, ದಂಡ ವಸೂಲಿಗೆ ತೀರ್ಮಾನಿಸಲಾಗಿದೆ. ಇನ್ನೂ 9,382 ಪ್ರಕರಣಗಳ ಬಗ್ಗೆ ಇತ್ಯರ್ಥಗೊಳಿಸಿಲ್ಲ.</p>.<p>ಮಹಾಲೇಖಪಾಲರ (ಸಿಎಜಿ) ‘ರಾಜಸ್ವ ಲೆಕ್ಕಪರಿಶೋಧನೆ ಭಾಗ 2’ ರಲ್ಲಿ ಈ ಮಾಹಿತಿ ಬಹಿರಂಗವಾಗಿದೆ. 2021 ರಿಂದ 2023 ರವರೆಗಿನ ಅವಧಿಯಲ್ಲಿ ಈ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. </p>.<p>ಈ ಅವಧಿಯಲ್ಲಿ ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗಳಿಗಿಂತ ವಾಣಿಜ್ಯ ತೆರಿಗೆ ಇಲಾಖೆ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಕರಣಗಳು ಬಯಲಿಗೆ ಬಂದಿವೆ. ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ ವಾಣಿಜ್ಯ ಇಲಾಖೆ ಇತರ ಎರಡು ಇಲಾಖೆಗಳಿಗಿಂತ ಹೆಚ್ಚು ಮುತುವರ್ಜಿ ವಹಿಸಿದ್ದರೂ ಆ ವರ್ಷದ ಅಂತ್ಯದಲ್ಲಿ ಗಮನಾರ್ಹ ಸಂಖ್ಯೆಯ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿದ್ದವು. ಹೀಗಾಗಿ ಇತ್ಯರ್ಥಗೊಳ್ಳದ 9,382 ಪ್ರಕರಣಗಳ ನಷ್ಟದ ಮೊತ್ತವನ್ನು ನಿರ್ಧರಿಸಲು ಇನ್ನೂ ಸಾಧ್ಯವಾಗಿಲ್ಲ ಎಂದು ಸಿಎಜಿ ವರದಿ ಅಭಿಪ್ರಾಯಪಟ್ಟಿದೆ.</p>.<p>ಅಬಕಾರಿ ಇಲಾಖೆಯಲ್ಲಿ ತೆರಿಗೆ ವಂಚನೆಯ ಮೂರು ಪ್ರಕರಣಗಳು ದಾಖಲಾಗಿದ್ದರೂ ಒಂದನ್ನೂ ಇತ್ಯರ್ಥಗೊಳಿಸಿಲ್ಲ. ಹೀಗಾಗಿ ಇದರಿಂದ ಆಗಿರುವ ನಷ್ಟದ ಪ್ರಮಾಣವನ್ನು ಅಂದಾಜು ಮಾಡಲು ಸಾಧ್ಯವಾಗಿಲ್ಲ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ತೆರಿಗೆ ವಂಚನೆಯ ಒಟ್ಟು 11 ಪ್ರಕರಣಗಳು ಪತ್ತೆಯಾಗಿದ್ದು, ಕೇವಲ 1 ಪ್ರಕರಣ ಮಾತ್ರ ಇತ್ಯರ್ಥಗೊಳಿಸಿದ್ದು, ನಷ್ಟದ ಮೊತ್ತ <br>₹5 ಲಕ್ಷ ಎಂದು ಅಂದಾಜಿಸಲಾಗಿದೆ. 10 ಪ್ರಕರಣಗಳ ತೆರಿಗೆ ವಂಚನೆ ಪ್ರಕರಣ ಇತ್ಯರ್ಥಗೊಳಿಸದ ಕಾರಣ ನಷ್ಟದ ಪ್ರಮಾಣ ಅಂದಾಜು ಮಾಡಿಲ್ಲ.</p>.<p><strong>ಮರು ಪಾವತಿಯಲ್ಲಿ ಅಲ್ಪ ಪ್ರಗತಿ:</strong></p>.<p>ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಮರುಪಾವತಿಗೆ ಕೋರಿಕೆ ಸಲ್ಲಿಸಿ ಒಟ್ಟು 9,254 ಅರ್ಜಿಗಳು ಬಂದಿದ್ದವು, ಅದರಲ್ಲಿ 8,094 ಪ್ರಕರಣಗಳಲ್ಲಿ ಮರುಪಾವತಿ ಮಾಡಿದ್ದು, ₹5,496.91 ಕೋಟಿ ಪಾವತಿಸಲಾಗಿದೆ. ಆದರೂ ವರ್ಷದ ಅಂತ್ಯದಲ್ಲಿ 2,239 ಪ್ರಕರಣಗಳು ಬಾಕಿ ಉಳಿದಿದ್ದು, ₹1,142.88 ಕೋಟಿ ಪಾವತಿ ಮಾಡಬೇಕಾಗಿದೆ. (2020–21 ರ ಸಾಲಿನ ಬಾಕಿ 1,079 ಅರ್ಜಿಗಳು ಸೇರಿ ಒಟ್ಟು 10,303 ಅರ್ಜಿಗಳು ಇದ್ದವು).</p>.<p>ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಮರುಪಾವತಿಗಾಗಿ 6,863 ಕೋರಿಕೆ ಅರ್ಜಿಗಳು ಬಂದಿದ್ದು, 4,844 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ₹79.99 ಕೋಟಿ ಮರುಪಾವತಿ ಮಾಡಿದ್ದು, ಇನ್ನೂ 5,851 ಕೋರಿಕೆಗಳು ಇತ್ಯರ್ಥ ಆಗಬೇಕಿದ್ದು, ಇದರ ಮೊತ್ತ ₹38.68 ಕೋಟಿ.(2020–21 ರ ಸಾಲಿನ 3,832 ಅರ್ಜಿಗಳು ಸೇರಿ ಒಟ್ಟು10,695 ಅರ್ಜಿಗಳು ಇದ್ದವು). ಆದರೆ, ಅಬಕಾರಿ ಇಲಾಖೆ ಮರುಪಾವತಿ ಕುರಿತು ಮಾಹಿತಿಯನ್ನು ಒದಗಿಸಿಲ್ಲ ಎಂದು ಸಿಎಜಿ ವರದಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ವಾಣಿಜ್ಯ ತೆರಿಗೆಗಳ ಇಲಾಖೆ, ಅಬಕಾರಿ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗಳು ತೆರಿಗೆ ವಂಚನೆಗಳ ಪ್ರಕರಣಗಳನ್ನು ಪತ್ತೆ ಮಾಡಿದ್ದು, ಒಟ್ಟು 15,479 ಪ್ರಕರಣಗಳನ್ನು ದಾಖಲಿಸಲಾಗಿದೆ. ಸುಮಾರು ₹1,120.34 ಕೋಟಿಗೂ ಅಧಿಕ ತೆರಿಗೆ ವಂಚಿಸಿರುವುದು ದೃಢಪಟ್ಟಿದೆ.</p>.<p>ವಾಣಿಜ್ಯ ತೆರಿಗೆ ಇಲಾಖೆಯೊಂದರಲ್ಲೇ ಅತ್ಯಧಿಕ ಪ್ರಕರಣಗಳು (15,465) ಪತ್ತೆಯಾಗಿವೆ. ಇದರಲ್ಲಿ 6,083 ಪ್ರಕರಣಗಳನ್ನು ವಿಚಾರಣೆ ಮತ್ತು ತನಿಖೆಗೆ ಒಳಪಡಿಸಿ ₹1,120.34 ಕೋಟಿಯಷ್ಟು ನಷ್ಟವಾಗಿದೆ ಎಂದು ನಿರ್ಧರಿಸಿ, ದಂಡ ವಸೂಲಿಗೆ ತೀರ್ಮಾನಿಸಲಾಗಿದೆ. ಇನ್ನೂ 9,382 ಪ್ರಕರಣಗಳ ಬಗ್ಗೆ ಇತ್ಯರ್ಥಗೊಳಿಸಿಲ್ಲ.</p>.<p>ಮಹಾಲೇಖಪಾಲರ (ಸಿಎಜಿ) ‘ರಾಜಸ್ವ ಲೆಕ್ಕಪರಿಶೋಧನೆ ಭಾಗ 2’ ರಲ್ಲಿ ಈ ಮಾಹಿತಿ ಬಹಿರಂಗವಾಗಿದೆ. 2021 ರಿಂದ 2023 ರವರೆಗಿನ ಅವಧಿಯಲ್ಲಿ ಈ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. </p>.<p>ಈ ಅವಧಿಯಲ್ಲಿ ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗಳಿಗಿಂತ ವಾಣಿಜ್ಯ ತೆರಿಗೆ ಇಲಾಖೆ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಕರಣಗಳು ಬಯಲಿಗೆ ಬಂದಿವೆ. ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ ವಾಣಿಜ್ಯ ಇಲಾಖೆ ಇತರ ಎರಡು ಇಲಾಖೆಗಳಿಗಿಂತ ಹೆಚ್ಚು ಮುತುವರ್ಜಿ ವಹಿಸಿದ್ದರೂ ಆ ವರ್ಷದ ಅಂತ್ಯದಲ್ಲಿ ಗಮನಾರ್ಹ ಸಂಖ್ಯೆಯ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿದ್ದವು. ಹೀಗಾಗಿ ಇತ್ಯರ್ಥಗೊಳ್ಳದ 9,382 ಪ್ರಕರಣಗಳ ನಷ್ಟದ ಮೊತ್ತವನ್ನು ನಿರ್ಧರಿಸಲು ಇನ್ನೂ ಸಾಧ್ಯವಾಗಿಲ್ಲ ಎಂದು ಸಿಎಜಿ ವರದಿ ಅಭಿಪ್ರಾಯಪಟ್ಟಿದೆ.</p>.<p>ಅಬಕಾರಿ ಇಲಾಖೆಯಲ್ಲಿ ತೆರಿಗೆ ವಂಚನೆಯ ಮೂರು ಪ್ರಕರಣಗಳು ದಾಖಲಾಗಿದ್ದರೂ ಒಂದನ್ನೂ ಇತ್ಯರ್ಥಗೊಳಿಸಿಲ್ಲ. ಹೀಗಾಗಿ ಇದರಿಂದ ಆಗಿರುವ ನಷ್ಟದ ಪ್ರಮಾಣವನ್ನು ಅಂದಾಜು ಮಾಡಲು ಸಾಧ್ಯವಾಗಿಲ್ಲ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ತೆರಿಗೆ ವಂಚನೆಯ ಒಟ್ಟು 11 ಪ್ರಕರಣಗಳು ಪತ್ತೆಯಾಗಿದ್ದು, ಕೇವಲ 1 ಪ್ರಕರಣ ಮಾತ್ರ ಇತ್ಯರ್ಥಗೊಳಿಸಿದ್ದು, ನಷ್ಟದ ಮೊತ್ತ <br>₹5 ಲಕ್ಷ ಎಂದು ಅಂದಾಜಿಸಲಾಗಿದೆ. 10 ಪ್ರಕರಣಗಳ ತೆರಿಗೆ ವಂಚನೆ ಪ್ರಕರಣ ಇತ್ಯರ್ಥಗೊಳಿಸದ ಕಾರಣ ನಷ್ಟದ ಪ್ರಮಾಣ ಅಂದಾಜು ಮಾಡಿಲ್ಲ.</p>.<p><strong>ಮರು ಪಾವತಿಯಲ್ಲಿ ಅಲ್ಪ ಪ್ರಗತಿ:</strong></p>.<p>ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಮರುಪಾವತಿಗೆ ಕೋರಿಕೆ ಸಲ್ಲಿಸಿ ಒಟ್ಟು 9,254 ಅರ್ಜಿಗಳು ಬಂದಿದ್ದವು, ಅದರಲ್ಲಿ 8,094 ಪ್ರಕರಣಗಳಲ್ಲಿ ಮರುಪಾವತಿ ಮಾಡಿದ್ದು, ₹5,496.91 ಕೋಟಿ ಪಾವತಿಸಲಾಗಿದೆ. ಆದರೂ ವರ್ಷದ ಅಂತ್ಯದಲ್ಲಿ 2,239 ಪ್ರಕರಣಗಳು ಬಾಕಿ ಉಳಿದಿದ್ದು, ₹1,142.88 ಕೋಟಿ ಪಾವತಿ ಮಾಡಬೇಕಾಗಿದೆ. (2020–21 ರ ಸಾಲಿನ ಬಾಕಿ 1,079 ಅರ್ಜಿಗಳು ಸೇರಿ ಒಟ್ಟು 10,303 ಅರ್ಜಿಗಳು ಇದ್ದವು).</p>.<p>ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಮರುಪಾವತಿಗಾಗಿ 6,863 ಕೋರಿಕೆ ಅರ್ಜಿಗಳು ಬಂದಿದ್ದು, 4,844 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ₹79.99 ಕೋಟಿ ಮರುಪಾವತಿ ಮಾಡಿದ್ದು, ಇನ್ನೂ 5,851 ಕೋರಿಕೆಗಳು ಇತ್ಯರ್ಥ ಆಗಬೇಕಿದ್ದು, ಇದರ ಮೊತ್ತ ₹38.68 ಕೋಟಿ.(2020–21 ರ ಸಾಲಿನ 3,832 ಅರ್ಜಿಗಳು ಸೇರಿ ಒಟ್ಟು10,695 ಅರ್ಜಿಗಳು ಇದ್ದವು). ಆದರೆ, ಅಬಕಾರಿ ಇಲಾಖೆ ಮರುಪಾವತಿ ಕುರಿತು ಮಾಹಿತಿಯನ್ನು ಒದಗಿಸಿಲ್ಲ ಎಂದು ಸಿಎಜಿ ವರದಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>